ರಾಷ್ಟ್ರಪತಿ ಪದಕ ಪುರಸ್ಕೃತರ ಪಟ್ಟಿ ಬಿಡುಗಡೆ: ಕರ್ನಾಟಕದ 18 ಪೊಲೀಸ್​ ಅಧಿಕಾರಿಗಳಿಗೆ ಮೆರಿಟೋರಿಯಸ್​ ಅವಾರ್ಡ್​

ನವದೆಹಲಿ: ಪೊಲೀಸ್​ ಇಲಾಖೆಗೆ ಸ್ವಾತಂತ್ರ್ಯೋತ್ಸವದ ನಿಮಿತ್ತ ಪ್ರತಿವರ್ಷ ನೀಡಲಾಗುವ ವಿವಿಧ ಪ್ರಶಸ್ತಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಈ ಬಾರಿ ದೇಶದ ಒಟ್ಟು 1,082 ಪೊಲೀಸ್ ಸಿಬ್ಬಂದಿಯನ್ನು ಸ್ವಾತಂತ್ರ್ಯ ದಿನಾಚರಣೆಯ ಪದಕಗಳಿಗೆ ಆಯ್ಕೆ ಮಾಡಲಾಗಿದೆ. ಇದರಲ್ಲಿ ಕರ್ನಾಟಕದ 18 ಮಂದಿ ಪೊಲೀಸ್​ ಅಧಿಕಾರಿ ಹಾಗೂ ಪೊಲೀಸ್​ ಸಿಬ್ಬಂದಿಯನ್ನು ಮೆರಿಟೋರಿಸ್​ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಪದಕಗಳಿಗೆ ಆಯ್ಕೆಯಾದ ದೇಶದ 1,082 ಪೊಲೀಸ್ ಸಿಬ್ಬಂದಿ ಪೈಕಿ 347 ಪೊಲೀಸ್​ ಅಧಿಕಾರಿಗಳು ಹಾಗೂ ಸಿಬ್ಬಂದಿ ಶೌರ್ಯ ಪ್ರಶಸ್ತಿಗೆ ಭಾಜನರಾಗಿದ್ದರೆ 87 ಮಂದಿ ರಾಷ್ಟ್ರಪತಿಗಳ ಪದಕಕ್ಕೆ ಅರ್ಹರಾಗಿದ್ದಾರೆ. 648 ಮಂದಿಯ ಸೇವೆಗೆ ಪ್ರಶಂಸನೀಯ ಪ್ರಶಸ್ತಿ ಲಭಿಸಿದೆ. ಕರ್ನಾಟಕದ 18 ಮಂದಿ ಪೊಲೀಸ್​ ಅಧಿಕಾರಿ ಹಾಗೂ ಪೊಲೀಸ್​ ಸಿಬ್ಬಂದಿ ಮೆರಿಟೋರಿಸ್​ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಕರ್ನಾಟಕದಿಂದ ಮೆರಿಟೋರಿಸ್​ ಪ್ರಶಸ್ತಿಗೆ ಆಯ್ಕೆಯಾದ ಪೊಲೀಸ್‌ ಅಧಿಕಾರಿಗಳು ಸಿಬ್ಬಂದಿ ಪಟ್ಟಿ
* ನಂಜಪ್ಪ ಶ್ರೀನಿವಾಸ್, ಎಸ್‌ಪಿ, ಪಿಟಿಎಸ್, ಕಡೂರು
* ಪ್ರತಾಪ್ ಸಿಂಗ್ ತೋರಟ್, ಡಿವೈಎಸ್‌ಪಿ, ಮಂಗಳೂರು
* ಟಿಎಂ ಶಿವಕುಮಾರ್, ಡಿವೈಎಸ್‌ಪಿ, ಬೆಂಗಳೂರು
* ಝಕೀರ್ ಇನಾಮ್‌ದಾರ್, ಡಿವೈಎಸ್‌ಪಿ, ಕಲಬುರ್ಗಿ ನಗರ
* ಶ್ರೀನಿವಾಸ್ ರೆಡ್ಡಿ, ಡಿವೈಎಸ್‌ಪಿ, ಸಿಐಡಿ ಅರಣ್ಯ ಘಟಕ, ಬೆಂಗಳೂರು
* ನರಸಿಂಹಮೂರ್ತಿ, ಡಿವೈಎಸ್‌ಪಿ, ಸಿಐಡಿ, ಬೆಂಗಳೂರು
* ಪ್ರಕಾಶ್ ಆರ್, ಡಿವೈಎಸ್‌ಪಿ, ಎಸಿಬಿ, ಬೆಂಗಳೂರು
* ರಾಘವೇಂದ್ರ ರಾವ್ ಶಿಂಧೆ, ಎಸಿಪಿ, ಎಫ್‌ಪಿಬಿ, ಬೆಂಗಳೂರು
* ರಾಜಾ ಚಿಕ್ಕಹನುಮೇಗೌಡ, ಇನ್ಸ್‌ಪೆಕ್ಟರ್, ಮೈಸೂರು ನಗರ
* ಧ್ರುವರಾಜ್ ಪಾಟೀಲ್, ಸಿಪಿಐ, ವಿಜಯಪುರ ರೈಲ್ವೇ ಪೊಲೀಸ್
* ಮೊಹಮ್ಮದ್ ಆಲಿ, ಇನ್ಸ್‌ಪೆಕ್ಟರ್, ಎಸಿಬಿ, ಬೆಂಗಳೂರು
* ರವಿ ಸಣ್ಣೇಗೌಡ, ಸಿಪಿಐ, ಶೃಂಗೇರಿ ಪೊಲೀಸ್ ಠಾಣೆ
* ಮುಫೀದ್ ಖಾನ್, ಇನ್ಸ್‌ಪೆಕ್ಟರ್, ಕೆಎಸ್‌ಆರ್‌ಪಿ
* ಮುರಳಿ ರಾಮಕೃಷ್ಣಪ್ಪ, ವಿಶೇಷ ಎಆರ್‌ಎಸ್‌ಐ (Special​ ARSI) ಬೆಂಗಳೂರು
*ಮಹಾದೇವಯ್ಯ, ಎಆರ್‌ಎಸ್‌ಐ, ಬೆಂಗಳೂರು
*ಧರ್ಮರಾಜ ಬಾಲಕೃಷ್ಣ ಶಿಂಧೆ, ಎಎಸ್​, ಬೆಳಗಾವಿ
*ರಂಜಿತ್​ ಧೆಟ್ಟಿ, ಎಎಸ್​ಐ, ಬೆಂಗಳೂರು
*ಬಸವರಾಜ ಬಿ. ಅಂಡೆಮ್ಮನವರ್​, ವಿಶೇಷ ಎಆರ್‌ಎಸ್‌ಐ (Special​ ARSI), ಬೆಂಗಳೂರು

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement