ಮಥುರಾ: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ವೇಳೆ ಜನದಟ್ಟಣೆಯಿಂದ ಬಂಕೆ ಬಿಹಾರಿ ದೇವಸ್ಥಾನದಲ್ಲಿ ಉಸಿರುಗಟ್ಟಿ ಇಬ್ಬರು ಸಾವು

ಮಥುರಾ: ಉತ್ತರ ಪ್ರದೇಶದ ಮಥುರಾದ ದೇವಸ್ಥಾನವೊಂದರಲ್ಲಿ ಜನ್ಮಾಷ್ಟಮಿ ಆಚರಣೆ ವೇಳೆ ಜನದಟ್ಟಣೆಯಿಂದಾಗಿ ಕನಿಷ್ಠ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಇಂದು, ಶನಿವಾರ ತಿಳಿಸಿದ್ದಾರೆ.
ಬಂಕೆ ಬಿಹಾರಿ ದೇವಸ್ಥಾನದಲ್ಲಿ ಮಧ್ಯರಾತ್ರಿ ಕೃಷ್ಣಾಷ್ಟಮಿ ಆಚರಣೆ ವೇಳೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜನ್ಮಾಷ್ಟಮಿಯ ಶುಭ ಸಂದರ್ಭದಲ್ಲಿ, ಭಕ್ತರ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳ ಕಂಡುಬಂದಿತು. ಆರತಿ ಸಮಯದಲ್ಲಿ ಜನರು ಸಂಕೀರ್ಣಕ್ಕೆ ಧಾವಿಸಿದರು ಮತ್ತು ಇದು ಜನದಟ್ಟಣೆಗೆ ಕಾರಣವಾಯಿತು. ಒಬ್ಬ ಮಹಿಳೆ ಮತ್ತು ಒಬ್ಬ ಪುರುಷ ಉಸಿರುಗಟ್ಟುವಿಕೆಯಿಂದ ಸಾವಿಗೀಡಾದರು ಎಂದು ಹಿರಿಯ ಪೋಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆರು ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಮೃತರನ್ನು ನಿರ್ಮಲಾ ದೇವಿ ಮತ್ತು ರಾಮ್ ಪ್ರಸಾದ್ ವಿಶ್ವಕರ್ಮ ಎಂದು ಪೊಲೀಸರು ಗುರುತಿಸಿದ್ದು, ಅವರು ಮೃತಪಟ್ಟಿರುವುದನ್ನು ಆಸ್ಪತ್ರೆಯಲ್ಲಿ ದೃಢಪಡಿಸಲಾಗಿದೆ. ಮತ್ತೊಬ್ಬ ಯಾತ್ರಾರ್ಥಿ ದೇವಸ್ಥಾನದ ನಿರ್ಗಮನ ದ್ವಾರದ ಬಳಿ ಕುಸಿದು ಮೂರ್ಛೆ ಬಿದ್ದಿದ್ದರಿಂದ ಭಕ್ತರ ಚಲನವಲನ ಸೀಮಿತವಾಗಿತ್ತು. ಮಂಗಳ ಆರತಿ ವೇಳೆ ಈ ಘಟನೆ ನಡೆದಿದೆ.
ಮಥುರಾದ ಬಂಕೆ ಬಿಹಾರಿಯಲ್ಲಿ ಮಂಗಳ ಆರತಿ ವೇಳೆ, ದೇವಸ್ಥಾನದ ನಿರ್ಗಮನ ದ್ವಾರದಲ್ಲಿ ಒಬ್ಬ ಭಕ್ತನು ಮೂರ್ಛೆಹೋದನು, ಇದರಿಂದಾಗಿ ಭಕ್ತರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಭಾರೀ ಜನಸಂದಣಿ ಇದ್ದುದರಿಂದ, ಆವರಣದೊಳಗೆ ಅನೇಕರು ಉಸಿರುಗಟ್ಟಿದರು. ಇಬ್ಬರು ಪ್ರಾಣ ಕಳೆದುಕೊಂಡರು,” ಹಿರಿಯರು ಮಥುರಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಟಿಎಂಸಿ ಬಂಡಾಯ ಸಂಸದರು ಎನ್‌ಸಿಪಿಐ ಜೊತೆ ವಿಲೀನ ; ದಿಢೀರ್‌ ರಾಷ್ಟ್ರ ರಾಜಕಾರಣದ ಕೇಂದ್ರಬಿಂದುವಾದ ಅಪರಿಚಿತ ಪಕ್ಷ...! ಇದರ ಬಗ್ಗೆ ಗೊತ್ತೆ..?

ಪುರಾಣಗಳ ಪ್ರಕಾರ, ಶ್ರೀಕೃಷ್ಣನ ಜನನವು ಮಧ್ಯರಾತ್ರಿಯಲ್ಲಿ ನಡೆಯಿತು. ಜನ್ಮಾಷ್ಟಮಿಯಂದು ಮಧ್ಯರಾತ್ರಿಯ ಧಾರ್ಮಿಕ ವಿಧಿಗಳ ನಂತರ ವಿಶೇಷ ಪ್ರಸಾದವನ್ನು ವಿತರಿಸಲಾಗುತ್ತದೆ.
ಈ ತಿಂಗಳ ಆರಂಭದಲ್ಲಿ, ರಾಜಸ್ಥಾನದ ಸಿಕಾರ್‌ನಲ್ಲಿರುವ ಖಾತು ಶ್ಯಾಮ್‌ಜಿ ದೇವಸ್ಥಾನದ ಮಾಸಿಕ ಬಜಾರ್‌ನಲ್ಲಿ ಕಾಲ್ತುಳಿತ ಸಂಭವಿಸಿದೆ. ಕನಿಷ್ಠ ಮೂವರು ಹೆಂಗಸರು ಕೊಲ್ಲಲ್ಪಟ್ಟರು ಮತ್ತು ಹಲವಾರು ಮಂದಿ ಗಾಯಗೊಂಡರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement