ಬೆಕ್ಕು ಕೂಗಿದ್ದರಿಂದ ಸಿಟ್ಟಿಗೆದ್ದ ಅಪ್ರಾಪ್ತ ಬಾಲಕ ಬೆಕ್ಕು ಸಾಕಿದವನನ್ನೇ ಕೊಂದ…!

ಹೈದರಾಬಾದ್: ಬೆಕ್ಕಿನ ನಿರಂತರ ಕೂಗಾಟದಿಂದ ಸಿಟ್ಟಾದ ಅಪ್ರಾಪ್ತ ಬಾಲಕನೊಬ್ಬ ಸಾಕು ಬೆಕ್ಕಿನ ಮನೆಯವನಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಮಾಲಕ ಸಾವಿಗೀಡಾಗಿದ್ದು, ಮಾಲಕನ ಸ್ನೇಹಿತ ಶನಿವಾರ ನಗರದ ಬಂಜಾರ ಹಿಲ್ಸ್ ಪೊಲೀಸರಿಗೆ ದೂರು ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ವರದಿಗಳ ಪ್ರಕಾರ, ರಂಗಾರೆಡ್ಡಿ ಜಿಲ್ಲೆಯ ಕೋತೂರು ಮಂಡಲದ ನಲ್ಲಾಪುರದ ಹರೀಶ್ವರ್ ರೆಡ್ಡಿ ಅಲಿಯಾಸ್ ಚಿಂಟು (20) ಮತ್ತು ಬಾಲಕ (17) ಬಂಜಾರಾ ಹಿಲ್ಸ್ ರಸ್ತೆ ಸಂಖ್ಯೆ 10 ರ ಮಿಥಿಲಾನಗರದಲ್ಲಿರುವ ಡಾ. ಮೆನನ್ ಅವರ ಮನೆಯಲ್ಲಿ ವಾಸಿಸುತ್ತಿದ್ದರು. ಎಜಾಜ್ ಹುಸೇನ್ (20) (ಸಂತ್ರಸ್ತ ವ್ಯಕ್ತಿ. ) ಮತ್ತು ಅಸ್ಸಾಂ ಮೂಲದ ಬ್ರಾನ್ ಸ್ಟಿಲ್ಲಿಂಗ್ (20) ಸಹ ಅದೇ ಮನೆಯಲ್ಲಿ ಕೊಠಡಿಯನ್ನು ಬಾಡಿಗೆಗೆ ತೆಗೆದುಕೊಂಡು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ಈ ತಿಂಗಳ 20 ರಂದು ರಾತ್ರಿ, ಎಜಾಜ್ ಮತ್ತು ಬ್ರಾನ್ ಇಬ್ಬರೂ ತಮ್ಮ ಕರ್ತವ್ಯವನ್ನು ಮುಗಿಸಿ ತಮ್ಮ ಕೋಣೆಗೆ ಹೋಗುತ್ತಿದ್ದಾಗ ದಾರಿಯಲ್ಲಿ ಸಿಕ್ಕಿದ ಬೆಕ್ಕನ್ನು ಎತ್ತಿಕೊಂಡು ಬಂದಿದ್ದರು. ಬೆಕ್ಕು ನಿರಂತರವಾಗಿ ಕೂಗುತ್ತಿತ್ತು, ಇದು ಹರೀಶ್ವರ ರೆಡ್ಡಿಯ ನಿದ್ರೆಗೆ ಭಂಗ ತರುತ್ತಿದ್ದರಿಂದ ಆತ ಅಸಮಾಧಾನಗೊಂಡಿದ್ದಾನೆ. ಕುಡಿತದ ಅಮಲಿನಲ್ಲಿದ್ದ ಹುಡುಗ ಕೋಪದಿಂದ ಅವರ ಕೋಣೆಗೆ ಹೋಗಿ ಗಲಾಟೆಮಾಡಿದ್ದಾನೆ. ಈ ವೇಳೆ ಲಘು ಘರ್ಷಣೆ ನಡೆದಿದ್ದು, ಕೋಪದ ಭರದಲ್ಲಿ ಅಪ್ರಾಪ್ತ ಬಾಲಕ ಎಜಾಜ್ ಹುಸೇನ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಸುಟ್ಟಗಾಯಗೊಂಡಿದ್ದ ಎಜಾಝ್‌ನನ್ನು ಚಿಕಿತ್ಸೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಗುರುವಾರ ರಾತ್ರಿ ಸುಟ್ಟಗಾಯಗಳಿಂದ ಮೃತಪಟ್ಟ.
ಆರಂಭದಲ್ಲಿ ಹರೀಶ್ವರ್ ರೆಡ್ಡಿ ಎಜಾಜ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿತ್ತು, ತನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಹೇಳಿದ್ದ. ನಂತರ ಮೃತನ ಸ್ನೇಹಿತ ಬ್ರಾನ್ ನೀಡಿದ ದೂರಿನ ಮೇರೆಗೆ ಪೊಲೀಸರಿಗೆ ಘಟನೆ ಬಗ್ಗೆ ತಿಳಿದು ಪೊಲೀಸರು ಬಾಲಕ ಮತ್ತು ಹರೀಶ್ವರ್ ರೆಡ್ಡಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಮೈಸೂರು ಅನಂತಸ್ವಾಮಿ ಧಾಟಿಯಲ್ಲಿ ನಾಡಗೀತೆ : ರಾಜ್ಯ ಸರ್ಕಾರದ ಆದೇಶ ಎತ್ತಿ ಹಿಡಿದ ಹೈಕೋರ್ಟ್‌ ; ದಶಕಗಳ ಸಮಸ್ಯೆಗೆ ತೆರೆ

 

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement