ಧಾರವಾಡ: ಸೆಪ್ಟೆಂಬರ್‌ 7ರಂದು ಡಾ. ವಜ್ರಕುಮಾರಗೆ ನುಡಿನಮನ

ಧಾರವಾಡ: ಧಾರವಾಡದ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳು ಹಾಗೂ ಎಸ್‌ಡಿಎಂ ಸಂಸ್ಥೆ ಉಪಾಧ್ಯಕ್ಷರಾಗಿದ್ದ ಡಾ. ನ. ವಜ್ರಕುಮಾರ ಅವರು ಸೆಪ್ಟೆಂಬರ್‌ 2ರಂದು ನಿಧನರಾಗಿದ್ದು, ಶಿಕ್ಷಣ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರಕ್ಕೆ ಕೊಟ್ಟ ಕೊಡುಗೆ ನೀಡಿದ ಅವರಿಗೆ ಧಾರವಾಡದಲ್ಲಿ ಸೆಪ್ಟೆಂಬರ್‌ 7ರಂದು ಬೆಳಿಗ್ಗೆ 9:30ಕ್ಕೆ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನುಡಿನಮನ ಕಾರ್ಯಕ್ರಮ ವಿದ್ಯಾಗಿರಿಯ ಜೆಎಸ್‌ಎಸ್ ಕ್ಯಾಂಪಸ್‌ನಲ್ಲಿರುವ ಸನ್ನಿಧಿ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಧಾರವಾಡದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ಜೆ.ಎಸ್.ಎಸ್ ಕಾರ್ಯಧ್ಯಕ್ಷರಾದ ಡಾ.ವೀರೇಂದ್ರ ಹೆಗ್ಗಡೆ, ಮಾಜಿ ಸಭಾಪತಿ ಬಸವರಾಜ ಹೊರಟ್ಟಿಯವರು, ಎಸ್.ಡಿ.ಎಂ ನ ಉಪಕುಲಪತಿಗಳಾದ ಡಾ. ನಿರಂಜನಕುಮಾರ, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ. ಬಿ ಗುಡಸಿ, ಮತ್ತು ಖ್ಯಾತ ಸಾಹಿತಿಗಳಾದ ಸಿದ್ಧಲಿಂಗಯ್ಯಾ ಪಟ್ಟಣಶೆಟ್ಟಿ ನುಡಿನಮನ ಸಲ್ಲಿಸಲಿದ್ದಾರೆ.

3.3 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement