ವಿಶಾಖಪಟ್ಟಣಂ: ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಗೆ ಹಾಜರಾಗಲು ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ತುಂಬಿ ಹರಿಯುತ್ತಿರುವ ಈಜಿ ನದಿ ದಾಟಿ ಪರೀಕ್ಷೆಗೆ ತೆರಳಿದ ಘಟನೆ ವರದಿಯಾಗಿದೆ.
ತಡ್ಡಿ ಕಲಾವತಿ ಎಂದು ಗುರುತಿಸಲಾದ ವಿದ್ಯಾರ್ಥಿನಿ ವಿಶಾಖಪಟ್ಟಣಂನಲ್ಲಿ ಪರೀಕ್ಷೆ ತೆಗೆದುಕೊಳ್ಳಬೇಕಾಗಿತ್ತು. ಉಕ್ಕಿ ಹರಿಯುತ್ತಿದ್ದ ಚಂಪಾವತಿ ನದಿಯನ್ನು ತನ್ನ ಸಹೋದರ ಹಾಗೂ ಮತ್ತೊಬ್ಬ ಕುಟುಂಬದವರ ಸಹಾಯದಿಂದ ದಾಟಿದ್ದಾಳೆ.
ವಿದ್ಯಾರ್ಥಿನಿ ತನ್ನ ಕುಟುಂಬ ಸದಸ್ಯರ ಸಹಾಯದಿಂದ ಹರಿಯುವ ನದಿಯಲ್ಲಿ ಈಜಾಡಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ತಡ್ಡಿ ಕಲಾವತಿ ಮರ್ರಿವಲಸ ಗ್ರಾಮದ ನಿವಾಸಿಯಾಗಿದ್ದು, ವಿಜಯನಗರ ಜಿಲ್ಲೆಯ ಗಜಪತಿನಗರಂ ಮಂಡಲದಲ್ಲಿ ಘಟನೆ ನಡೆದಿದೆ. ಮೂಲಗಳ ಪ್ರಕಾರ, ತಡ್ಡಿ ಕಲಾವತಿ ಎರಡು ದಿನಗಳ ಹಿಂದೆ ತನ್ನ ಸ್ವಗ್ರಾಮಕ್ಕೆ ಬಂದಿದ್ದಳು ಮತ್ತು ಶನಿವಾರ ಪರೀಕ್ಷೆ ಇದ್ದ ಕಾರಣ ಶುಕ್ರವಾರ ವಿಶಾಖಪಟ್ಟಣಕ್ಕೆ ಹೋಗಲು ತಯಾರಿ ನಡೆಸಿದ್ದಳು.
ಆದರೆ, ಭಾರೀ ಮಳೆಯಿಂದಾಗಿ ಚಂಪಾವತಿ ನದಿಯು ಉಕ್ಕಿ ಹರಿಯುತ್ತಿತ್ತು, ಹಾಗೂ ಗ್ರಾಮದ ಸಂಪರ್ಕ ಕಡಿತಗೊಳಿಸಿತು, ಅಲ್ಲದೆ, ಅವಳನ್ನು ನದಿಯ ಇನ್ನೊಂದು ದಡಕ್ಕೆ ಕರೆದೊಯ್ಯಲು ಯಾವುದೇ ದೋಣಿಗಳೂ ಲಭ್ಯವಿರಲಿಲ್ಲ.
ಬೇರೆ ದಾರಿಯಿಲ್ಲದೆ, ವಿದ್ಯಾರ್ಥಿನಿ ನದಿಗೆ ಈಳಿದಿದ್ದಾಳೆ. ಆಕೆಗೆ ಈಜು ಗೊತ್ತಿಲ್ಲದ ಕಾರಣ ಆಕೆಯ ಸಹೋದರ ಮತ್ತು ಕುಟುಂಬದ ಮತ್ತೊಬ್ಬರು ಆಕೆಯನ್ನು ಹಿಡಿದುಕೊಂಡು ನದಿ ದಾಟಲು ಸಹಾಯ ಮಾಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ