ಬಿಜೆಪಿ ಶಾಸಕ ಸುರೇಶ್ ಸಿಂಗ್ ರಾವತ್ ಅವರು ಸೋಮವಾರ ರಾಜಸ್ಥಾನ ವಿಧಾನಸಭೆಗೆ ಹಸುವಿನ ಜೊತೆ ಆಗಮಿಸಿ ಮುದ್ದೆ ಚರ್ಮದ ಕಾಯಿಲೆ (lumpy skin disease)ಯ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದರು. ಆದರೆ, ಸಚಿವರು ವಿಧಾನಸೌಧದ ಗೇಟ್ ಸಮೀಪ ಮಾಧ್ಯಮದವರ ಜೊತೆ ಮಾತನಾಡುತ್ತಿರುವಾಗ ಹಸು ಅಕ್ಷರಶಃ ಓಡಿಹೋಗಿದೆ..!
ರಾವತ್ ವಿಧಾನಸಭೆ ಗೇಟ್ನ ಹೊರಗೆ ಶಾಸಕರು ಮಾತನಾಡುತ್ತಿರುವಾಗ ಹಸು ತನಗೆ ಕಟ್ಟಿದ್ದ ಹಗ್ಗವನ್ನು ಎಳೆದುಕೊಂಡು ಸ್ಥಳದಿಂದ ಓಡಿಹೋಯಿತು.
ಕಾಂಗ್ರೆಸ್ನ ಗೋವಿಂದ್ ಸಿಂಗ್ ದೋತಸ್ರಾ ಅವರ ಟ್ವೀಟ್ನಲ್ಲಿ ಅವರಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ರಾವತ್, “ಈ ಸಂವೇದನಾರಹಿತ ಸರ್ಕಾರದ ವಿರುದ್ಧ ಹಸು ಕೂಡ ಕೋಪಗೊಂಡಿದೆ” ಎಂದು ಹೇಳಿದ್ದಾರೆ.
ಕೈಯಲ್ಲಿ ಕೋಲು ಹಿಡಿದುಕೊಂಡು ಶಾಸಕ ರಾವತ್ ಸುದ್ದಿಗಾರರೊಂದಿಗೆ ಮಾತನಾಡುತ್ತ, ಹಸುಗಳು ಮುದ್ದೆ ಚರ್ಮ ರೋಗದಿಂದ ಬಳಲುತ್ತಿವೆ ಆದರೆ ರಾಜ್ಯ ಸರ್ಕಾರ ಗಾಢ ನಿದ್ರೆಯಲ್ಲಿದೆ. ಈ ಕಾಯಿಲೆ ಬಗ್ಗೆ ಗಮನ ಸೆಳೆಯಲು, ನಾನು ಹಸುವನ್ನು ವಿಧಾನಸೌಧಕ್ಕೆ (ಕ್ಯಾಂಪಸ್) ತಂದಿದ್ದೇನೆ” ಎಂದು ಹೇಳಿದರು.
ಸೋಮವಾರದ ಪಶುಸಂಗೋಪನಾ ಇಲಾಖೆಯ ಅಂಕಿಅಂಶಗಳ ಪ್ರಕಾರ, 59,027 ಜಾನುವಾರುಗಳು ಈ ಚರ್ಮದ ಕಾಯಿಲೆಯಿಂದ ಮೃತಪಟ್ಟಿವೆ ಮತ್ತು 13,02,907 ಬಾಧಿತವಾಗಿವೆ.
ನಿಮ್ಮ ಕಾಮೆಂಟ್ ಬರೆಯಿರಿ