ಕೇರಳದ ಸಿಪಿಐ(ಎಂ) ಕಚೇರಿ ಮೇಲೆ ಸ್ಫೋಟಕ ಎಸೆದ ಆರೋಪ: ಯುವ ಕಾಂಗ್ರೆಸ್ ಮುಖಂಡನ ಬಂಧನ

ತಿರುವನಂತಪುರಂ: ಕೇರಳದ ತಿರುವನಂತಪುರಂನಲ್ಲಿರುವ ಸಿಪಿಐ(ಎಂ) ರಾಜ್ಯ ಪ್ರಧಾನ ಕಚೇರಿಯಾದ ಎಕೆಜಿ ಸೆಂಟರ್‌ನಲ್ಲಿ ಸ್ಫೋಟಕವನ್ನು ಎಸೆದ ಸುಮಾರು ಮೂರು ತಿಂಗಳ ನಂತರ, ಪೊಲೀಸರು ಗುರುವಾರ ಯುವ ಕಾಂಗ್ರೆಸ್ ಕಾರ್ಯಕರ್ತ ಜಿತಿನ್ ಕಳತ್ತೂರ್ ಅವರನ್ನು ಬಂಧಿಸಿದ್ದಾರೆ.
ಕಳತ್ತೂರ್ ಅವರು ತಿರುವನಂತಪುರಂ ಜಿಲ್ಲೆಯ ಅತ್ತಿಪ್ರದಲ್ಲಿ ಯುವ ಕಾಂಗ್ರೆಸ್‌ನ ಮಂಡಲಂ ಅಧ್ಯಕ್ಷರಾಗಿದ್ದು, ಅವರನ್ನು ನಂತರ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಅಪರಾಧ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ಜೂನ್‌ನಲ್ಲಿ ಸಿಪಿಎಂನ ರಾಜ್ಯ ಸಮಿತಿ ಕಚೇರಿ ಎಕೆಜಿ ಕೇಂದ್ರದ ಮೇಲೆ ಸ್ಫೋಟಕಗಳನ್ನು ಎಸೆದಿದ್ದರು. ಘಟನೆ ನಡೆದ ಸುಮಾರು ಮೂರು ತಿಂಗಳ ನಂತರ ಮಾನ್ವಿಲಾ ಮೂಲದ ಜಿತಿನ್ ಎಂಬಾತನನ್ನು ಕೇರಳ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಕೇರಳ ಪೊಲೀಸ್ ಅಪರಾಧ ವಿಭಾಗ ತಿಳಿಸಿದೆ. ಆದರೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿತಿನ್ ತಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾರೆ.

ಯುವ ಕಾಂಗ್ರೆಸ್ ಮುಖಂಡನ ಕಾರು, ಶರ್ಟ್, ಶೂ ಮತ್ತು ಮೊಬೈಲ್ ಫೋನ್ ಕರೆಗಳು ತನಿಖೆಯಲ್ಲಿ ನಿರ್ಣಾಯಕವಾಗಿವೆ. ಸ್ಫೋಟಕಗಳನ್ನು ಎಸೆದ ನಂತರ ಆರೋಪಿಗಳು ಕಾರು ಬಳಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ, ಅವರು ಕಾರನ್ನು ಪತ್ತೆಹಚ್ಚಿದ ನಂತರ ಅದು ಯೂತ್ ಕಾಂಗ್ರೆಸ್ ಮುಖಂಡರದ್ದು ಎಂದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಸಿಪಿಎಂನ ರಾಜ್ಯ ಸಮಿತಿ ಕಚೇರಿ, ಎಕೆಜಿ ಕೇಂದ್ರದ ಮೇಲೆ ಜೂನ್ 30, 2022 ರಂದು ರಾತ್ರಿ ದಾಳಿ ನಡೆಸಲಾಯಿತು. ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿ ಎರಡು ತಿಂಗಳ ಕಾಲ ಪ್ರಕರಣವನ್ನು ತನಿಖೆ ಮಾಡಿದರು, ಆದರೆ ಪ್ರಕರಣದಲ್ಲಿ ಯಾವುದೇ ಸುಳಿವು ಸಿಕ್ಕಿಲ್ಲ. ಆರಂಭದಲ್ಲಿ ದಾಳಿಕೋರರು ಕೆಂಪು ಸ್ಕೂಟರ್‌ನಲ್ಲಿ ಎಕೆಜಿ ಕೇಂದ್ರಕ್ಕೆ ಆಗಮಿಸಿ ಸ್ಫೋಟಕಗಳನ್ನು ಎಸೆದ ದೃಶ್ಯವಷ್ಟೇ ಪೊಲೀಸರ ಬಳಿ ಇತ್ತು. ನಂತರ, ಸರ್ಕಾರವು ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಿತ್ತು, ಅವರು ಸೈಬರ್ ಸೆಲ್ ಸಹಾಯದಿಂದ ಸಂಪೂರ್ಣ ತನಿಖೆಯ ನಂತರ ಆರೋಪಿಗಳನ್ನು ಬಂಧಿಸಿದರು.
ಇದೇ ವೇಳೆ ಜಿತಿನ್ ಅವರನ್ನು ಪೊಲೀಸರು ನಾಲ್ಕು ಬಾರಿ ವಿಚಾರಣೆಗೊಳಪಡಿಸಿ ನಂತರ ಬಿಡುಗಡೆ ಮಾಡಿದ್ದು, ಇದೀಗ ಎಡಪಕ್ಷಗಳ ಸರ್ಕಾರದ ಮುಖ ಉಳಿಸಲು ಮತ್ತೆ ವಶಕ್ಕೆ ಪಡೆದಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ವಿ.ಟಿ. ಬಲರಾಮ್ ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement