ಮಥುರಾ: ಮಥುರಾ ರೈಲ್ವೇ ನಿಲ್ದಾಣದಲ್ಲಿ, ಮಹಿಳೆಯೊಬ್ಬಳು ತನ್ನ ಪತಿಗೆ ಸಿಪಿಆರ್ ನೀಡಿ ಜೀವವನ್ನು ಉಳಿಸಿದ್ದಾಳೆ. ಚಲಿಸುತ್ತಿದ್ದ ರೈಲಿನಲ್ಲಿ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿತ್ತು. ನಿಲ್ದಾಣದಲ್ಲಿ ರೈಲು ನಿಂತ ತಕ್ಷಣ ಪ್ರಯಾಣಿಕನನ್ನು ಪ್ಲಾಟ್ಫಾರ್ಮ್ಗೆ ಕರೆತರಲಾಯಿತು, ಆದರೆ ಅಷ್ಟರೊಳಗೆ ಆತನ ಉಸಿರು ನಿಂತು ಹೋಗಿತ್ತು.
ಮಾಹಿತಿ ಪಡೆದ ಆರ್ಪಿಎಫ್ ಕಾನ್ಸ್ಟೆಬಲ್ ಅಶೋಕ್ ಕುಮಾರ್ ಸ್ಥಳಕ್ಕೆ ಧಾವಿಸಿದರು. ಅವರು ಪ್ರಯಾಣಿಕನ ಹೆಂಡತಿಯನ್ನು ತನ್ನ ಪತಿಗೆ ಸಿಪಿಆರ್ ಅಂದರೆ ಬಾಯಿ ಮೂಲಕ ಉಸಿರಾಟ ನೀಡುವಂತೆ ಕೇಳಿಕೊಂಡರು. ಇದಾದ ಬಳಿಕ ಪತ್ನಿ 33 ಸೆಕೆಂಡ್ಗಳ ಕಾಲ ಸಿಪಿಆರ್ ಮಾಡಿ ಗಂಡನನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾಳೆ. ಕಾನ್ಸ್ಟೇಬಲ್ ಸ್ವತಃ ಪ್ರಯಾಣಿಕರ ಅಂಗೈಗಳನ್ನು ಉಜ್ಜಿದರು ಮತ್ತು ನಂತರ ಹೃದಯದ ಪಂಪ್ ಮಾಡಿದರು. ಸಾವು-ಬದುಕಿನ ನಡುವೆ ನಡೆಯುತ್ತಿರುವ ಈ ಹೋರಾಟದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದಂಪತಿ ನಿಜಾಮುದ್ದೀನ್ನಿಂದ ಕೋಝಿಕ್ಕೋಡ್ಗೆ ಪ್ರಯಾಣಿಸುತ್ತಿದ್ದರು. 67 ವರ್ಷದ ಕೇಶವನ್ ಅವರು ತಮ್ಮ ಪತ್ನಿ ದಯಾ ಅವರೊಂದಿಗೆ ಕೊಯಮತ್ತೂರು ಎಕ್ಸ್ಪ್ರೆಸ್ ರೈಲಿನಲ್ಲಿ ದೆಹಲಿಯಿಂದ ಕೋಝಿಕ್ಕೋಡ್ಗೆ ಹೋಗುತ್ತಿದ್ದರು. ರೈಲಿನ ಬಿ4 ಕೋಚ್ನ ಸೀಟ್ ಸಂಖ್ಯೆ 67-68ರಲ್ಲಿ ಪ್ರಯಾಣಿಸುತ್ತಿದ್ದ ಕೇಶವನ್ ಅವರು ಇದ್ದಕ್ಕಿದ್ದಂತೆ ಅಸ್ವಸ್ಥರಾದರು. ಇದಾದ ನಂತರ ಅವರನ್ನು ಇತರ ಪ್ರಯಾಣಿಕರು ಮಥುರಾ ನಿಲ್ದಾಣದಲ್ಲಿ ಇಳಿಸಿ ಆರ್ಪಿಎಫ್ಗೆ ಮಾಹಿತಿ ನೀಡಿದರು.
ಆರ್ಎಎಫ್ ಪೊಲೀಸರು ಪ್ರಯಾಣಿಕನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರು. ಆರ್ಪಿಎಫ್ ಕಾನ್ಸ್ಟೆಬಲ್ಗಳಾದ ಅಶೋಕ್ ಕುಮಾರ್ ಮತ್ತು ನಿರಂಜನ್ ಸಿಂಗ್ ಅವರು ಆಂಬ್ಯುಲೆನ್ಸ್ ಕಳುಹಿಸಲು ಮೊದಲೇ ನಿಯಂತ್ರಣ ಕೊಠಡಿಗೆ ತಿಳಿಸಿದ್ದರು. ಸಿಪಿಆರ್ ನಂತರ, ಪ್ರಯಾಣಿಕ ಕೇಶವನ್ ಅವರನ್ನು ಸ್ಟ್ರೆಚರ್ನಿಂದ ಹೊರತಂದು ಆಂಬುಲೆನ್ಸ್ ಮೂಲಕ ರೈಲ್ವೆ ಆಸ್ಪತ್ರೆಗೆ ಕಳುಹಿಸಲಾಯಿತು.
ಅಲ್ಲಿ ವೈದ್ಯರು ಅವರ ಗಂಭೀರ ಸ್ಥಿತಿಯನ್ನು ನೋಡಿದ ನಂತರ ಅವರನ್ನು ಉಲ್ಲೇಖಿಸಿದರು. ಇದಾದ ಬಳಿಕ ಆರ್ಎಎಫ್ ಪೊಲೀಸರು ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೇಶವನ್ ಅವರು ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಕ್ಸಿಜನ್ ಲೇವಲ್ ಅನ್ನು ನಿರ್ವಹಿಸಲಾಗುತ್ತಿದೆ. ಎಂದು ಡಾ.ದಿಲೀಪ್ ಕುಮಾರ್ ಕೌಶಿಕ್ ತಿಳಿಸಿದ್ದಾರೆ. ನಾವು ಕೇರಳ ಜಿಲ್ಲೆಯ ಕಾಸರಗೋಡಿನ ನಿವಾಸಿಗಳು ಎಂದು ಕೇಶವನ್ ಅವರ ಪತ್ನಿ ದಯಾ ತಿಳಿಸಿದ್ದಾರೆ. ಎರಡು ವಾರಗಳ ಹಿಂದೆ 80 ಜನರ ತಂಡ ಚಾರ್ ಧಾಮ್ ಯಾತ್ರೆಗೆ ಉತ್ತರಾಖಂಡಕ್ಕೆ ತೆರಳಿತ್ತು. ಕೇಶವನ್ ಅವರ ಮಗ ನೀರಜ್ ಸಹಾರನ್ಪುರದಲ್ಲಿ ವೈದ್ಯರಾಗಿದ್ದಾರೆ. ಮಾಹಿತಿ ಪಡೆದು ಅವರು ಕೂಡ ಮಥುರಾ ತಲುಪಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ