
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮೇಯರ್ ಈರೇಶ್ ಅಂಚಟಗೇರಿ ಅವರು ಸಮಾರಂಭದ ಗೌನ್ ಧರಿಸುವ ಸಂಪ್ರದಾಯ ನಿಲ್ಲಿಸಿ ಸುಮಾರು ಎರಡು ತಿಂಗಳ ನಂತರ, ಗೌನ್ ಧರಿಸುವುದು ಮೇಯರ್ಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.
ಮೇಯರ್ ಗೌನ್ ತೊಡುವ ಪದ್ಧತಿ ಕೈಬಿಡುವಂತೆ ಆಗ್ರಹಿಸಿ ಅಂಚಟಗೇರಿ ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಆಯಾ ಮೇಯರ್ಗಳ ವಿವೇಚನೆಗೆ ಬಿಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (ಎಚ್ಡಿಎಂಪಿ) ಆಯುಕ್ತರಿಗೆ ಪತ್ರ ಬರೆದಿರುವ ಅವರು, ಮಹಾನಗರ ಪಾಲಿಕೆಯ ಸಭೆಗಳು ಮತ್ತು ಇತರ ವಿಶೇಷ ಸಂದರ್ಭಗಳಲ್ಲಿ ಮೇಯರ್ಗಳು ಗೌನ್ ಧರಿಸುವುದು ಸಂಪ್ರದಾಯವಾಗಿ ಆಚರಣೆಯಾಗಿದೆ. ಆದರೆ ಕೆಎಂಸಿ ಕಾಯ್ದೆ ಮತ್ತು ನಿಯಮಗಳಲ್ಲಿ ಅದರ ಬಗ್ಗೆ ಸ್ಪಷ್ಟವಾದ ಉಲ್ಲೇಖವಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಮೇಯರ್ ಈರೇಶ್ ಅಂಚಟಗೇರಿ, ಸಭೆಗಳಲ್ಲಿ, ಗಣ್ಯರನ್ನು ಸ್ವೀಕರಿಸುವಾಗ ಅಥವಾ ಇತರ ಸಂದರ್ಭಗಳಲ್ಲಿ ಗೌನ್ ಧರಿಸುವುದಿಲ್ಲ ಎಂದು ಹೇಳಿದ್ದಾರೆ.
ಮೇ 28ರಂದು ಅಂಚಟಗೇರಿ ಮೇಯರ್ ಆಗುವಾಗ ಗೌನ್ ಧರಿಸಿದ್ದರು. ಜೂನ್, ಜುಲೈ ಮತ್ತು ಆಗಸ್ಟ್ನಲ್ಲಿ ಎಚ್ಡಿಎಂಪಿಯ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸುವಾಗ ಅವರು ಗೌನ್ ಧರಿಸಿದ್ದರು. ಆದರೆ ನಂತರ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮದಲ್ಲಿ ಗೌನ್ ಧರಿಸಿರಲಿಲ್ಲ.


ನಿಮ್ಮ ಕಾಮೆಂಟ್ ಬರೆಯಿರಿ