ರೈಲುಗಳಲ್ಲಿ ಇನ್ಮುಂದೆ ಸಿಗಲಿದೆ ಸ್ಥಳೀಯ ಆಹಾರ: ಪ್ರಾದೇಶಿಕ ಖಾದ್ಯಗಳಿಗೆ ಆದ್ಯತೆ ನೀಡಲು ಐಆರ್‌ಸಿಟಿಸಿಗೆ ಅಧಿಕಾರ

ಹುಬ್ಬಳ್ಳಿ: ರೈಲುಗಳಲ್ಲಿ ಏಕರೂಪದ ಆಹಾರ ಖಾದ್ಯಗಳ ಬದಲು ಭಾರತದ ಪ್ರಾದೇಶಕ ಖಾದ್ಯವೈವಿಧ್ಯಗಳಿಗೆ ಆದ್ಯತೆ ನೀಡಲು ರೈಲ್ವೆ ಸಚಿವಾಲಯವು ಐಆರ್‌ಸಿಟಿಸಿ (ಇಂಡಿಯನ್ ರೈಲ್ವೆ ಕೇಟರಿಂಗ್ ಅಂಡ್ ಟೂರಿಸಂ ಕಾರ್ಪೊರೇಷನ್)ಗೆ ಅಧಿಕಾರ ನೀಡಿ ಸುತ್ತೋಲೆ ಹೊರಡಿಸಿದೆ.
ಈ ಮೂಲಕ ಸಿರಿಧಾನ್ಯ ಆಧಾರಿತ ಆಹಾರ, ಹಬ್ಬ-ಹರಿದಿನಗಳಂದು ಪ್ರಯಾಣಿಸುವ ರೈಲು ಯಾತ್ರಿಕರಿಗೆ ವಿವಿಧ ಬಗೆಯ ಪಾಕ ವೈವಿಧ್ಯ ಭಕ್ಷ್ಯಗಳನ್ನು ಸವಿಯಲು ಸಾಧ್ಯವಾಗಲಿದೆ. ಅಲ್ಲದೆ ಕೇಟರಿಂಗ್‌ ವ್ಯವಸ್ಥೆಯ ಮೂಲಕವೇ ಮಧುಮೇಹ ಸ್ನೇಹಿ ಮತ್ತು ಮಕ್ಕಳ ಸ್ನೇಹಿ ಆಹಾರಗಳ ಪೂರೈಕೆಯೂ ಸಾಧ್ಯವಾಗಲಿದೆ.
ಪ್ರಯಾಣಿಕರ ದರದಲ್ಲಿ ಅಡುಗೆ ಶುಲ್ಕಗಳನ್ನು ಒಳಗೊಂಡಿರುವ ಪ್ರಿಪೇಯ್ಡ್ ರೈಲುಗಳಿಗೆ, ಈಗಾಗಲೇ ಸೂಚಿಸಲಾದ ಶುಲ್ಕದೊಳಗೆ ನೂತನ ಮೆನುವನ್ನು ಐಆರ್‌ಸಿಟಿಸಿ ನಿರ್ಧರಿಸುತ್ತದೆ.
ಇತರ ಮೇಲ್/ಎಕ್ಸ್‌ಪ್ರೆಸ್ ರೈಲುಗಳಿಗೆ, ಸ್ಟ್ಯಾಂಡರ್ಡ್ ಊಟದಂತಹ ಬಜೆಟ್ ವಿಭಾಗದ ತಿನಿಸುಗಳ ಮೆನುವನ್ನು ಐಆರ್‌ಸಿಟಿಸಿ ಈಗಾಗಲೇ ಸೂಚಿಸಿದ ನಿಗದಿತ ಶುಲ್ಕದೊಳಗೆ ನಿರ್ಧರಿಸುತ್ತದೆ.
ಜನತಾ ಊಟದ ಮೆನು ಮತ್ತು ಶುಲ್ಕದಲ್ಲಿ ಯಾವುದೇ ಬದಲಾವಣೆ ಇಲ್ಲ. ಹೆಚ್ಚುವರಿಯಾಗಿ, ಈ ಪ್ರಿಪೇಯ್ಡ್ ರೈಲುಗಳಲ್ಲಿ ಎಂಆರ್‌ಪಿಯಲ್ಲಿ ಎ-ಲಾ-ಕಾರ್ಟೆ ಊಟ ಮತ್ತು ಬ್ರಾಂಡೆಡ್ ಆಹಾರ ಪದಾರ್ಥಗಳ ಮಾರಾಟವನ್ನು ಸಹ ಅನುಮತಿಸಲಾಗುತ್ತದೆ.
ರೈಲ್ವೆ ಸಚಿವಾಲಯದ ಕೇಟರಿಂಗ್‌ ನೀತಿಯಲ್ಲಿ ಈ ಬದಲಾವಣೆಯ ಕಾರಣ ಭಾರತದ ಪ್ರಾದೇಶಿಕ ತಿಂಡಿ-ತಿನುಸುಗಳಿಗೆ ರೈಲುಗಾಡಿಗಳಲ್ಲಿ ಪ್ರಾತಿನಿಧ್ಯ ದೊರೆಯಲಿದೆ. ಇದರಿಂದ ತಮ್ಮ ಇಷ್ಟದಂತೆ ವಿವಿಧ ಬಗೆಯ ಖಾದ್ಯಗಳನ್ನು ರೈಲು ಯಾತ್ರಿಕರು ಸವಿಯಬಹುದಾಗಿದೆ.

ಇಂದಿನ ಪ್ರಮುಖ ಸುದ್ದಿ :-   ಬಿಜೆಪಿ ಜೊತೆ ಮೈತ್ರಿಯ ನಂತರ ಜೆಡಿಎಸ್ ತೊರೆದ ಹಿರಿಯ ಮುಸ್ಲಿಂ ನಾಯಕ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement