ಮುಸ್ಲಿಮರು ಮಾತ್ರ ಕಾಂಗ್ರೆಸ್ ಉಳಿಸಬಲ್ಲರು ಎಂದ ಗುಜರಾತ್ ಕಾಂಗ್ರೆಸ್‌ ಅಭ್ಯರ್ಥಿ: ಇದು ತುಷ್ಟೀಕರಣದ ರಾಜಕಾರಣ ಎಂದು ಬಿಜೆಪಿ ವಾಗ್ದಾಳಿ

ನವದೆಹಲಿ: ಗುಜರಾತ್‌ನ ಸಿದ್ಧಪುರದ ಕಾಂಗ್ರೆಸ್‌ ಅಭ್ಯರ್ಥಿ ಚಂದನ್ ಠಾಕೂರ್ ಅವರು ಕಾಂಗ್ರೆಸ್ ಅನ್ನು ಉಳಿಸಲು ಮುಸ್ಲಿಮರಿಂದ ಮಾತ್ರ ಸಾಧ್ಯ ಎಂದು ಹೇಳಿದ ನಂತರ ಭಾರತೀಯ ಜನತಾ ಪಕ್ಷವು (ಬಿಜೆಪಿ) ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿದೆ ಹಾಗೂ ಪಕ್ಷವು ‘ತುಷ್ಟೀಕರಣ’ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದೆ.
ಪಕ್ಷವು ಮುಸ್ಲಿಂ ತುಷ್ಟೀಕರಣ ಮಾಡುತ್ತಿದೆ ಆರೋಪಿಸಿ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಟ್ವೀಟ್‌ ಮಾಡಿ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  “ಕಾಂಗ್ರೆಸ್ ಅಭ್ಯರ್ಥಿ ಸಿದ್ಧಪುರ ಅಭ್ಯರ್ಥಿ ಚಂದನ್‌ಜಿ ಠಾಕೂರ್ ಅವರು “ಮುಸ್ಲಿಮರು ಮಾತ್ರ ಕಾಂಗ್ರೆಸ್ ಅನ್ನು ಉಳಿಸಬಲ್ಲರು!! ಬಿಜೆಪಿ ಸರ್ಕಾರವು ನಿಮ್ಮ ತ್ರಿವಳಿ ತಲಾಖ್ ಮತ್ತು ಹಜ್ ಸಬ್ಸಿಡಿಯನ್ನು ನಿಲ್ಲಿಸಿತು ಎಂದು ಹೇಳಿದ್ದಾರೆ. ದೇಶದ ಸಂಪನ್ಮೂಲಗಳ ಮೊದಲ ಹಕ್ಕು ಮುಸ್ಲಿಮರಿಗೆ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ ನಂತರವೇ ಇಂತಹ ಹೇಳಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ.

ಡಿಸೆಂಬರ್ 1 ರಂದು ಗುಜರಾತ್ ವಿಧಾನಸಭಾ ಚುನಾವಣೆ ಆರಂಭವಾಗಿದ್ದು, ಎಲ್ಲಾ ಪಕ್ಷಗಳು ತಮ್ಮ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿವೆ. ಶನಿವಾರ ನಡೆದ ರ್ಯಾಲಿಯಲ್ಲಿ, ಸಿದ್ಧಪುರದ ಗುಜರಾತ್‌ನ ಕಾಂಗ್ರೆಸ್ ಅಭ್ಯರ್ಥಿ ಚಂದನ್ ಠಾಕೋರ್, “ಬಿಜೆಪಿಯವರು ಇಡೀ ದೇಶವನ್ನು ಕಂದಕಕ್ಕೆ ತಳ್ಳಿದ್ದಾರೆ. ಮತ್ತು ದೇಶವನ್ನು ಉಳಿಸುವವರು ಯಾರಾದರೂ ಇದ್ದರೆ, ಅದು ಮುಸ್ಲಿಂ ಸಮುದಾಯವಾಗಿದೆ. ಮತ್ತು ಯಾರಾದರೂ ಕಾಂಗ್ರೆಸ್ ಪಕ್ಷವನ್ನು ಉಳಿಸಲು ಸಾಧ್ಯವಾದರೆ, ಅದು ಮುಸ್ಲಿಂ ಸಮುದಾಯವಾಗಿದೆ ಎಂದು ಹೇಳಿದ್ದರು.
ನಾನು ಇದಕ್ಕೆ ಒಂದೇ ಒಂದು ಉದಾಹರಣೆಯನ್ನು ಹಂಚಿಕೊಳ್ಳುತ್ತೇನೆ. ಎನ್‌ಆರ್‌ಸಿ ವಿಚಾರದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಬೀದಿಗಿಳಿದಿದ್ದರು. ಬೇರೆ ಯಾವ ಪಕ್ಷವೂ ಮುಸ್ಲಿಮರ ಪರವಾಗಿ ನಿಂತಿಲ್ಲ. ರಾಷ್ಟ್ರದಾದ್ಯಂತ ನಿಮ್ಮನ್ನು ರಕ್ಷಿಸುತ್ತಿರುವ ಏಕೈಕ ಪಕ್ಷ ಕಾಂಗ್ರೆಸ್‌ ಆಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : 1ನೇ ಹಂತದಲ್ಲಿ 62.37%ರಷ್ಟು ಮತದಾನ ; 2019ರ ಮತದಾನದ ಪ್ರಮಾಣಕ್ಕಿಂತ ಕಡಿಮೆ

ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಬಿಜೆಪಿ ಹಲವು ಅಂಶಗಳಲ್ಲಿ ನಿಮಗೆ ತೊಂದರೆ ಕೊಡಲು ಪ್ರಯತ್ನಿಸಿದೆ. ತ್ರಿವಳಿ ತಲಾಖ್ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಹೋಗಿ ಕಾನೂನು ತಂದರು. ಕಾಂಗ್ರೆಸ್ ನಿಮಗೆ ಹಜ್ ಗೆ ಹೋಗಲು ಸಬ್ಸಿಡಿ ನೀಡಿದೆ. ಆದರೆ ಬಿಜೆಪಿ ತನ್ನ ಕೆಟ್ಟ ನೀತಿಗಳಿಂದಾಗಿ ಅದನ್ನೂ ಕೊನೆಗೊಳಿಸಿತು. ಅವರು ನಿಮ್ಮ ಸಣ್ಣ ವ್ಯವಹಾರಗಳಿಗೆ ನೀವು ಪಡೆದ ಸಬ್ಸಿಡಿಗಳನ್ನು ಕೊನೆಗೊಳಿಸಿದರು. ಭವಿಷ್ಯದಲ್ಲಿ, ಅವರು ಮತ್ತೆ ತಮ್ಮ ಬಲಪ್ರಯೋಗದ ರಾಜಕೀಯವನ್ನು ಆಶ್ರಯಿಸದಂತೆ ಮಾಡುವ ಅವಕಾಶ ನಿಮ್ಮ ಮುಂದೆ ಇವೆ – ನಾವು ನಿಮ್ಮನ್ನು ರಕ್ಷಿಸುತ್ತೇವೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement