ಆದರೆ ನೀವು ರಾಜೀನಾಮೆ ನೀಡಿದ್ದೀರಿ…..: ಉದ್ಧವ್ ಠಾಕ್ರೆಯನ್ನು ಮಹಾರಾಷ್ಟ್ರ ಸಿಎಂ ಆಗಿ ಮರುನೇಮಕ ಮಾಡುವ ಮನವಿಗೆ ಸುಪ್ರೀಂ ಕೋರ್ಟ್

ನವದೆಹಲಿ: ಶಿವಸೇನೆ ಪಕ್ಷದಲ್ಲಿನ ಬಂಡಾಯಕ್ಕೆ ಸಂಬಂಧಿಸಿದಂತೆ ತನ್ನ ಅಂತಿಮ ದಿನದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಉದ್ಧವ್‌ ಠಾಕ್ರೆ ಸದನದಲ್ಲಿ ವಿಶ್ವಾಸ ಮತದ ಪರೀಕ್ಷೆಯನ್ನು ಎದುರಿಸುವ ಮುನ್ನವೇ ರಾಜೀನಾಮೆ ನೀಡಿದ್ದಾರೆ. ಹೀಗಿದ್ದಾಗ ಅವರ ಸರ್ಕಾರವನ್ನು ಮರುಸ್ಥಾಪಿಸುವುದು ಹೇಗೆ ಎಂದು ಪ್ರಶ್ನಿಸಿತು.
ಉದ್ಧವ್‌ ಠಾಕ್ರೆ ನೇತೃತ್ವದ ಬಣವು ರಾಜ್ಯಪಾಲರ ಜೂನ್ 2022 ರ ಆದೇಶವನ್ನು ಪಕ್ಕಕ್ಕೆ ಸರಿಸುವಂತೆ ಮನವಿ ಮಾಡಿತು. ಉದ್ಧವ್‌ ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಗಳು ಸಲ್ಲಿಸಿದ್ದ ಕ್ರಾಸ್ ಅರ್ಜಿಗಳ ತೀರ್ಪನ್ನು ಕಾಯ್ದಿರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಎಂ.ಆರ್. ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ.ಎಸ್. ನರಸಿಂಹ ಅವರನ್ನೊಳಗೊಂಡ ಪೀಠವು, ಉದ್ಧವ್ ಠಾಕ್ರೆ ಪರ ಹಾಜರಿದ್ದ ಹಿರಿಯ ವಕೀಲ ಎಎಂ ಸಿಂಘ್ವಿ ಅವರಿಗೆ, ವಿಶ್ವಾಸ ಮತದ ಪರೀಕ್ಷೆಯನ್ನೂ ಎದುರಿಸದ ಮುಖ್ಯಮಂತ್ರಿಯನ್ನು ನ್ಯಾಯಾಲಯ ಮರುನೇಮಕ ಮಾಡಬಹುದೇ? ಎಂದು ಕೇಳಿತು.
2016 ರಲ್ಲಿ ನಬಮ್ ತುಕಿಯನ್ನು ಅರುಣಾಚಲ ಪ್ರದೇಶದ ಮುಖ್ಯಮಂತ್ರಿಯಾಗಿ ಮರುಸ್ಥಾಪಿಸಿದಂತೆ ಗಡಿಯಾರವನ್ನು ಹಿಂದಕ್ಕೆ ತಿರುಗಿಸಲು ಮತ್ತು “ಯಥಾಸ್ಥಿತಿಯನ್ನು” (ಹಿಂದೆ ಇದ್ದ ಸ್ಥಿತಿ) ಪುನಃಸ್ಥಾಪಿಸಲು ಒತ್ತಾಯಿಸಿ ಠಾಕ್ರೆ ಬಣವು ನ್ಯಾಯಾಲಯದ ಮುಂದೆ ತೀವ್ರ ಸಲ್ಲಿಕೆಗಳನ್ನು ಮಾಡಿತು.
ಶಿವಸೇನೆ ಶಾಸಕರ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಕೇವಲ ವಿಶ್ವಾಸ ಮತಕ್ಕಾಗಿ ಕರೆದ ನಡವಳಿಕೆಯನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದ ಒಂದು ದಿನದ ನಂತರ, ಠಾಕ್ರೆ ಬಣವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ರಾಜ್ಯಪಾಲರಾಗಿದ್ದ ಬಿ.ಎಸ್. ಕೋಶ್ಯಾರಿ ಅವರ ವಿಶ್ವಾಸಮತ ಪರೀಕ್ಷೆಯ ಆದೇಶವನ್ನು ರದ್ದುಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವನ್ನು ಒತ್ತಾಯಿಸಿದರು.

ಪೀಠವು ಅಭಿಷೇಕ ಮನು ಸಿಂಘ್ವಿ ಅವರು ಠಾಕ್ರೆ ಪರವಾಗಿ ಮಾಡಿದ ಸಲ್ಲಿಕೆಗಳನ್ನು ಗಮನದಲ್ಲಿಟ್ಟುಕೊಂಡು, “ಹಾಗಾದರೆ, ನಿಮ್ಮ ಪ್ರಕಾರ, ನಾವು ಏನು ಮಾಡಬೇಕು? ನಿಮ್ಮ ಸರ್ಕಾರವನ್ನು ಮರುಸ್ಥಾಪಿಸಬೇಕೆ? ಆದರೆ ನೀವು ರಾಜೀನಾಮೆ ನೀಡಿದ್ದೀರಿ. ನಿಮ್ಮ ಸಲ್ಲಿಕೆ ಸದನದಲ್ಲಿ ವಿಶ್ವಾಸ ಮತ ಪರೀಕ್ಷೆಯ ಮೊದಲು ರಾಜೀನಾಮೆ ನೀಡಿದ ಸರ್ಕಾರವನ್ನು ಮರುಸ್ಥಾಪಿಸಲು ನ್ಯಾಯಾಲಯವನ್ನು ಕೇಳಿಕೊಂಡಂತೆ ಆಗುವುದಿಲ್ಲವೇ ಎಂದು ಪೀಟವು ಕೇಳಿತು.
ಒಂಬತ್ತು ಕೆಲಸದ ದಿನಗಳಲ್ಲಿ ರಾಜ್ಯಪಾಲರನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಶಿವಸೇನೆಯ ಎರಡು ಕಡೆಯವರು ಮಂಡಿಸಿದ ವಾದಗಳನ್ನು ಸುಪ್ರೀಂ ಕೋರ್ಟ್ ಆಲಿಸಿತು. ಸಿಬಲ್, ಸಿಂಘ್ವಿ, ದೇವದತ್ತ ಕಾಮತ್ ಮತ್ತು ಅಮಿತ್ ಆನಂದ್ ತಿವಾರಿ ಸೇರಿದಂತೆ ಖ್ಯಾತ ವಕೀಲರು ಠಾಕ್ರೆ ಗುಂಪಿನ ಪರವಾಗಿ ವಾದಿಸಿದರೆ, ಖ್ಯಾತ ವಕೀಲರಾದ ಎನ್.ಕೆ. ಕೌಲ್, ಮಹೇಶ್ ಜೇಠ್ಮಲಾನಿ ಮತ್ತು ಮಣಿಂದರ್ ಸಿಂಗ್ ಅವರು ಶಿಂಧೆ ಬಣವನ್ನು ಪ್ರತಿನಿಧಿಸಿದರು.
ಠಾಕ್ರೆ ಸರ್ಕಾರ ರಾಜೀನಾಮೆ ನೀಡುವ ಮುನ್ನ ನಡೆದ ಘಟನೆಗಳ ಅನುಕ್ರಮವನ್ನು ಉಲ್ಲೇಖಿಸಿದ ಅಭಿಷೇಕ ಮನುಸಿಂಘ್ವಿ, “ರಾಜೀನಾಮೆ ಅಪ್ರಸ್ತುತವಾಗಿದೆ. ಇಲ್ಲಿ ಯಾರನ್ನೂ ಮರುಸ್ಥಾಪಿಸುತ್ತಿಲ್ಲ ಆದರೆ ಹಿಂದಿನ ಯಥಾಸ್ಥಿತಿಯನ್ನು ಮರುಸ್ಥಾಪಿಸಲಾಗುತ್ತಿದೆ” ಎಂದು ಹೇಳಿದರು.

ಪ್ರಮುಖ ಸುದ್ದಿ :-   ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಮುಂಬೈ 26/11 ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ವಾದಿಸಿದ್ದ ಉಜ್ವಲ್ ನಿಕಮ್ ಕಣಕ್ಕಿಳಿಸಿದ ಬಿಜೆಪಿ

ಅವರು 2016 ರ ನಬಮ್ ರೆಬಿಯಾ ತೀರ್ಪಿನ ಮೂಲಕ ಅರುಣಾಚಲ ಪ್ರದೇಶದಲ್ಲಿ ಟುಕಿ ಅವರನ್ನು ರಾಜ್ಯದ ಮುಖ್ಯಮಂತ್ರಿಯಾಗಿ ಮರುಸ್ಥಾಪಿಸುವ ಮೂಲಕ ಮತ್ತು ಬಿಜೆಪಿ ಬೆಂಬಲಿತ ಕಲಿಖೋ ಪುಲ್ ಸರ್ಕಾರವನ್ನು ಪದಚ್ಯುತಗೊಳಿಸುವ ಮೂಲಕ ರಾಜಕೀಯ ಗಡಿಯಾರವನ್ನು ಹಿಂದಕ್ಕೆ ತಿರುಗಿಸಿದ್ದನ್ನು ಉಲ್ಲೇಖಿಸಿದರು.
ಜೂನ್ 29, 2022 ರಂದು ಮುಖ್ಯಮಂತ್ರಿಗಳ ರಾಜೀನಾಮೆ ಅಪ್ರಸ್ತುತವಾಗುತ್ತದೆ … ರಾಜ್ಯಪಾಲರ ಕಾನೂನುಬಾಹಿರ ಕಾರ್ಯವನ್ನು ಒಮ್ಮೆ ಜಾರಿಗೆ ತರಲು ಅವಕಾಶ ಮಾಡಿಕೊಟ್ಟರೆ, ವಿಶ್ವಾಸ ಮತದ ಫಲಿತಾಂಶವು ತಿಳಿದಿರುತ್ತದೆ ಎಂದು ಮನುಸಿಂಘ್ವಿ ವಾದಿಸಿದರು. ರಾಜ್ಯಪಾಲರು 34 ಶಾಸಕರ ಬಣವನ್ನು ಗುರುತಿಸುವ ಮೂಲಕ ವಿಶ್ವಾಸ ಮತಕ್ಕೆ ಸೂಚಿಸುವ ನಿರ್ದೇಶನವು “ಕಾನೂನುಬಾಹಿರ ಕಾರ್ಯ” ಎಂದು ಠಾಕ್ರೆ ಎತ್ತಿದ ವಿಷಯದ ತಿರುಳನ್ನು ಅವರು ಸಲ್ಲಿಸಿದರು.
ಆಗ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರು, “ಇಲ್ಲ, ಆದರೆ ನೀವು ಸದನದಲ್ಲಿ ವಿಶ್ವಾಸ ಮತವನ್ನು ಕಳೆದುಕೊಂಡಿದ್ದರೆ ಯಥಾಸ್ಥಿತಿಯ ವಾದವು ತಾರ್ಕಿಕವಾಗಿತ್ತು. ಏಕೆಂದರೆ, ವಿಶ್ವಾಸ ಮತದ ಆಧಾರದ ಮೇಲೆ ನಿಮ್ಮನ್ನು ಅಧಿಕಾರದಿಂದ ಹೊರಹಾಕಲಾಗಿದೆ ಎಂದು ಹೇಳಬಹುದು. ಆದರೆ ಬೌದ್ಧಿಕ ಗೊಂದಲವನ್ನು ನೋಡಿ…ನೀವು ವಿಶ್ವಾಸ ಮತವನ್ನೇ ಎದುರಿಸದಿರಲು ನಿರ್ಧರಿಸಿದ್ದೀರಿ ಎಂದು ಹೇಳಿದರು.

ಬೆಳವಣಿಗೆಯನ್ನು “ಕೆಂಪು ಹೆರಿಂಗ್” ಎಂದು ಕರೆದ ಹಿರಿಯ ವಕೀಲ ಅಭಿಷೇಕ ಮನುಸಿಂಘ್ವಿ , ರಾಜ್ಯಪಾಲರು ಬಹುಮತ ಪರೀಕ್ಷೆಗೆ ಆದೇಶಿಸುವ ಮೊದಲು, ಈ ವಿಷಯವು ಉನ್ನತ ನ್ಯಾಯಾಲಯದಲ್ಲಿ ಸಬ್‌ ಜುಡೈಸ್‌ ಆಗಿತ್ತು ಎಂದು ಹೇಳಿದರು.
ಹಾಗಾದರೆ, ಠಾಕ್ರೆ ಅವರು ವಿಶ್ವಾಸಮತ ಪರೀಕ್ಷೆಯನ್ನು ಎದುರಿಸಲು ರಾಜ್ಯಪಾಲರು ಸೂಚಿಸಿದ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ನೀವು ಹೇಳುತ್ತಿದ್ದೀರಾ?” ಎಂದು ಪೀಠ ಕೇಳಿದೆ.
ಸಿಂಘ್ವಿ ಅವರು ಸಕಾರಾತ್ಮಕವಾಗಿ ಉತ್ತರಿಸಿದರು ಮತ್ತು ವಿಷಯವು ಸಬ್‌ ಜುಡೈಸ್‌ ಆಗಿದೆ, ಹೀಗಾಗಿ ನಂತರದ ರಾಜ್ಯಪಾಲರ ಬಹುಮತ ಪರೀಕ್ಷೆ ನಿರ್ದೇಶನವನ್ನು ಅನುಮತಿಸಬಾರದು ಎಂದು ಹೇಳಿದರು.”ವಿಶ್ವಾಸ ಮತವು ನಿಮ್ಮ ವಿರುದ್ಧ ಹೋಗಬಹುದೆಂಬ ಕಾರಣಕ್ಕಾಗಿ ನೀವು ರಾಜೀನಾಮೆ ನೀಡಿದ್ದೀರಿ ಎಂಬ ಅಂಶವನ್ನು ನೀವು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತಿದ್ದೀರಿ” ಎಂದು ಸಿಜೆಐ ಚಂದ್ರಚೂಡ ಹೇಳಿದರು.
ನ್ಯಾಯಾಲಯದ ವಿಚಾರಣೆ ವೇಳೆಗೆ, ಠಾಕ್ರೆ ಬಣವು ಠಾಕ್ರೆಗೆ ಕೋಶ್ಯಾರಿ ಅವರ ಆದೇಶವನ್ನು ತಳ್ಳಿಹಾಕಲು ಭಾವೋದ್ರಿಕ್ತ ಮನವಿ ಮಾಡಿತು, ಅದನ್ನು ರದ್ದುಗೊಳಿಸದಿದ್ದರೆ ಪ್ರಜಾಪ್ರಭುತ್ವವು ಅಪಾಯದಲ್ಲಿರುತ್ತದೆ ಎಂದು ಪ್ರತಿಪಾದಿಸಿತು.

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು
ಶಿವಸೇನೆಯಲ್ಲಿ ಬಹಿರಂಗ ಬಂಡಾಯದ ನಂತರ ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು ಭುಗಿಲೆದ್ದಿತು ಮತ್ತು ಜೂನ್ 29, 2022 ರಂದು, ಸುಪ್ರೀಂ ಕೋರ್ಟ್ 31 ತಿಂಗಳ ಮಹಾರಾಷ್ಟ್ರ ವಿಕಾಸ ಅಘಾಡಿ (ಎಂವಿಎ) ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸಲು ಸೂಚಿಸಿ ಮಹಾರಾಷ್ಟ್ರ ರಾಜ್ಯಪಾಲರು ನೀಡಿದ ನಿರ್ದೇಶನವನ್ನು ತಡೆಹಿಡಿಯಲು ನಿರಾಕರಿಸಿತು. ನಂತರ ಉದ್ಧವ್ ಠಾಕ್ರೆ ವಿಶ್ವಾಸ ಮತಕ್ಕೆ ಮೊದಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಇದು ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಲು ದಾರಿ ಮಾಡಿಕೊಟ್ಟಿತು.
ಠಾಕ್ರೆ ಬಣಕ್ಕೆ ಮತ್ತೊಂದು ಹೊಡೆತವಾಗಿ, ಚುನಾವಣಾ ಆಯೋಗವು ಫೆಬ್ರವರಿ 17, 2023 ರಂದು ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಮನ್ಯ ಮಾಡಿತು ಮತ್ತು ಬಾಳಾಸಾಹೇಬ್ ಠಾಕ್ರೆ ಸ್ಥಾಪಿಸಿದ ಪಕ್ಷದ ಮೂಲ ಬಿಲ್ಲು ಮತ್ತು ಬಾಣದ ಚುನಾವಣಾ ಚಿಹ್ನೆಯನ್ನು ಅದಕ್ಕೆ ನಿಗದಿಪಡಿಸಿತು.

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement