ಕರ್ನಾಟಕ ವಿಧಾನಸಭೆ ಚುನಾವಣೆ 2023 : ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ಬೆಂಗಳೂರು: ದೆಹಲಿ ಹಾಗೂ ಪಂಜಾಬ್‌ನ ಅಧಿಕಾರದಲ್ಲಿರುವ ಆಮ್ ಆದ್ಮಿ ಪಕ್ಷ ಈಗ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸಿದೆ. ಚುನಾವಣಾ ಘೋಷಣೆ ಮೊದಲೇ ಆಮ್ ಆದ್ಮಿ ಪಕ್ಷ 80 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ.
ಚಲನಚಿತ್ರ ಖ್ಯಾತ ಹಾಸ್ಯನಟ ಟೆನ್ನಿಸ್ ಕೃಷ್ಣ, ಕಾಂಗ್ರೆಸ್ ಮಾಜಿ ವಕ್ತಾರ ಬ್ರಿಜೇಶ್ ಕಾಳಪ್ಪ, ಮಾಜಿ ಕೆಎಎಸ್ ಅಧಿಕಾರಿ ಕೆ. ಮಥಾಯ್ ಸೇರಿದಂತೆ ಹಲವರಿಗೆ ಟಿಕೆಟ್ ನೀಡಲಾಗಿದೆ. ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಅವರು ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು, ಬ್ರಿಜೇಶ್ ಕಾಳಪ್ಪ ಸೇರಿದಂತೆ ಹಲವರ ಸಮ್ಮುಖದಲ್ಲಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. 80 ಅಭ್ಯರ್ಥಿಗಳಲ್ಲಿ 5 ಸಮಾಜ ಸೇವಕರು, 7 ರೈತ ಹೋರಾಟಗಾರರು, 7 ಮಹಿಳೆಯರು, 3 ಡಾಕ್ಟರೇಟ್ ಪದವಿಧರರು, 16 ಸ್ನಾತಕೋತ್ತರ ಪದವೀಧರರು, 47 ಪದವೀಧರರು, 18 ಎಂಜಿನಿಯರಿಂಗ್, 7 ಎಂಬಿಎ ಪದವೀಧರರು ಇದ್ದಾರೆ.
ಈ ವೇಳೆ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಮಾತನಾಡಿ, ಭ್ರಷ್ಟಾಚಾರ ರಹಿತ ಜನ ಸಾಮಾನ್ಯರಿಗೆ ನಮ್ಮ ಪಕ್ಷ ಟಿಕೆಟ್ ನೀಡುತ್ತಿದೆ. 10 ವರ್ಷದಲ್ಲಿ ನಮ್ಮ ಪಕ್ಷ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದೆ ಹಾಗೂ ಕಡಿಮೆ ಸಮಯದಲ್ಲಿ ನಮ್ಮ ಪಕ್ಷ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ಯಾರಿಗೆ ಯಾವ ಕ್ಷೇತ್ರದ ಟಿಕೆಟ್?
ತೇರದಾಳ – ಅರ್ಜುನ ಹಲಗಿಗೌಡರ
ಬಾದಾಮಿ – ಶಿವರಾಯಪ್ಪ ಜೋಗಿನ
ಬಾಗಲಕೋಟೆ – ರಮೇಶ ಬದ್ನೂರ
ಅಥಣಿ – ಸಂಪತ್ ಕುಮಾರ ಶೆಟ್ಟಿ
ಬೈಲಹೊಂಗಲ – ಬಿ. ಎಂ. ಚಿಕ್ಕನಗೌಡರ
ರಾಮದುರ್ಗ – ಮಲ್ಲಿಕಜಾನ್‌ ನದಾಫ
ಹುಬ್ಬಳ್ಳಿ- ಧಾರವಾಡ ಪೂರ್ವ – ಬಸವರಾಜ ಎಸ್‌ ತೇರದಾಳ,
ಹುಬ್ಬಳ್ಳಿ-ಧಾರವಾಡ ಕೇಂದ್ರ – ವಿಕಾಸ ಸೊಪ್ಪಿನ
ಕಲಘಟಗಿ – ಮಂಜುನಾಥ ಜಕ್ಕಣ್ಣವರ
ರೋಣ – ಆನೇಕಲ್‌ ದೊಡ್ಡಯ್ಯ,
ಬ್ಯಾಡಗಿ – ಎಂ. ಎನ್.‌ ನಾಯಕ
ರಾಣೆಬೆನ್ನೂರು – ಹನುಮಂತಪ್ಪ ಕಬ್ಬಾರ
ಬಸವ ಕಲ್ಯಾಣ – ದೀಪಕ ಮಲಗಾರ
ಹುಮನಾಬಾದ – ಬ್ಯಾಂಕ್‌ ರೆಡ್ಡಿ,
ಬೀದರ ದಕ್ಷಿಣ – ನಸೀಮುದ್ದಿನ್‌ ಪಟೇಲ
ಭಾಲ್ಕಿ – ತುಕಾರಾಮ ನಾರಾಯಣರಾವ್ ಹಜಾರೆ
ಔರಾದ – ಬಾಬುರಾವ ಅಡ್ಕೆ

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ಕಲಬುರ್ಗಿ ಗ್ರಾಮೀಣ – ಡಾ. ರಾಘವೇಂದ್ರ ಚಿಂಚನಸೂರ
ಕಲಬುರ್ಗಿ ದಕ್ಷಿಣ – ಸಿದ್ದರಾಮ ಅಪ್ಪಾರಾವ ಪಾಟೀಲ
ಕಲಬುರ್ಗಿ ಉತ್ತರ – ಸಯ್ಯದ್‌ ಸಜ್ಜಾದ್‌ ಅಲಿ
ಇಂಡಿ – ಗೋಪಾಲ ಆರ್‌ ಪಾಟೀಲ
ಗಂಗಾವತಿ – ಶರಣಪ್ಪ ಸಜ್ಜಿಹೊಲ
ರಾಯಚೂರು ಗ್ರಾಮೀಣ – ಡಾ. ಸುಭಾಶಚಂದ್ರ ಸಾಂಭಾಜಿ
ರಾಯಚೂರು – ಡಿ. ವೀರೇಶ ಕುಮಾರ ಯಾದವ
ಮಾನ್ವಿ – ರಾಜಾ ಶಾಮಸುಂದರ ನಾಯಕ
ಲಿಂಗಸುಗೂರು – ಶಿವಪುತ್ರ ಗಾಣದಾಳ
ಸಿಂಧನೂರು – ಸಂಗ್ರಾಮ ನಾರಾಯಣ ಕಿಲ್ಲೇದ
ವಿಜಯನಗರ – ಡಿ. ಶಂಕರದಾಸ
ಕೂಡ್ಲಿಗಿ – ಶ್ರೀನಿವಾಸ ಎನ್
ಹರಪನಹಳ್ಳಿ – ನಾಗರಾಜ ಎಚ್‌
ಚಿತ್ರದುರ್ಗ – ಜಗದೀಶ ಬಿ. ಇ.
ಜಗಳೂರು – ಗೋವಿಂದರಾಜು
ಹರಿಹರ – ಗಣೇಶಪ್ಪ ದುರ್ಗದ
ದಾವಣಗೆರೆ ಉತ್ತರ – ಶ್ರೀಧರ ಪಾಟೀಲ
ತುರುವೇಕೆರೆ: ಟಿನ್ನಿಸ್‌ ಕೃಷ್ಣ
ಕುಣಿಗಲ್‌ – ಜಯರಾಮಯ್ಯ
ಗುಬ್ಬಿ – ಪ್ರಭುಸ್ವಾಮಿ
ಸಿರಾ – ಶಶಿಕುಮಾರ
ಪಾವಗಡ – ರಾಮಾಂಜನಪ್ಪ ಎನ್

ಶೃಂಗೇರಿ – ರಾಜನ್‌ ಗೌಡ ಎಚ್.ಎಸ್‌
ಹಾಸನ – ಅಗಿಲೆ ಯೋಗೀಶ್‌
ಭದ್ರಾವತಿ – ಆನಂದ
ಶಿವಮೊಗ್ಗ – ನೇತ್ರಾವತಿ ಟಿ
ಸಾಗರ – ಕೆ. ದಿವಾಕರ
ಮೂಡಬಿದರೆ- ವಿಜಯನಾಥ ವಿಠಲ ಶೆಟ್ಟಿ
ಮಂಗಳೂರು ನಗರ ದಕ್ಷಿಣ – ಸಂತೋಷ್‌ ಕಾಮತ
ಸುಳ್ಯ – ಸುಮನಾ
ಕಾರ್ಕಳ – ಡ್ಯಾನಿಯಲ್
ಶಿರಸಿ – ಹಿತೇಂದ್ರ ನಾಯಕ
ಮಳವಳ್ಳಿ – ಬಿ.ಸಿ. ಮಹದೇವಸ್ವಾಮಿ
ಮಂಡ್ಯ – ಬೊಮ್ಮಯ್ಯ
ಪಿರಿಯಾಪಟ್ಟಣ – ರಾಜಶೇಖರ್‌ ದೊಡ್ಡಣ್ಣ
ಚಾಮರಾಜ – ಮಾಲವಿಕಾ ಗುಬ್ಬಿವಾಣಿ
ನರಹಿಂಹರಾಜ – ಧರ್ಮಶ್ರೀ
ಟಿ. ನರಸಿಪುರ – ಸಿದ್ದರಾಜು

ಮಾಗಡಿ – ರವಿಕಿರಣ ಎಂ.ಎನ್
ರಾಮನಗರ – ನಂಜಪ್ಪ ಕಾಳೇಗೌಡ
ಕನಕಪುರ – ಪುಟ್ಟರಾಜು ಗೌಡ
ಚನ್ನಪಟ್ಟಣ – ಶರತ್ ಚಂದ್ರ
ದೇವನಹಳ್ಳಿ – ಶಿವಪ್ಪ ಬಿ.ಕೆ
ದೊಡ್ಡಬಳ್ಳಾಪುರ – ಪುರುಷೋತ್ತಮ
ನೆಲಮಂಗಲ – ಗಂಗಬೈಲಪ್ಪ ಬಿ.ಎಂ
ಬಾಗೇಪಲ್ಲಿ – ಮಧುಸೀತಪ್ಪ
ಚಿಂತಾಮಣಿ – ಸಿ. ಬೈರೆಡ್ಡಿ
ಕೊಲಾರ್‌ ಗೋಲ್ಡ್‌ ಫೀಲ್ಡ್‌ – ಆರ್.‌ ಗಗನ ಸುಕನ್ಯ
ಮಾಲೂರು – ರವಿಶಂಕರ್‌ ಎಂ
ಬೆಂಗಳೂರಿನ ದಾಸರಹಳ್ಳಿ – ಕೀರ್ತನ್‌ ಕುಮಾರ,
ಮಹಾಲಕ್ಷ್ಮಿ ಬಡಾವಣೆ – ಶಾಂತಲಾ ದಾಮ್ಲೆ
ಮಲ್ಲೇಶ್ವರ – ಸುಮನ ಪ್ರಶಾಂತ
ಹೆಬ್ಬಾಳ – ಮಂಜುನಾಥ ನಾಯ್ಡು
ಪುಲಕೇಶಿನಗರ – ಸುರೇಶ ರಾಥೋಡ್
ಸಿ.ವಿ. ರಾಮನ್‌ ನಗರ – ಮೋಹನ ದಾಸರಿ
ಶಿವಾಜಿನಗರ – ಪ್ರಕಾಶ್‌ ನೆಡುಂಗಡಿ,
ಶಾಂತಿನಗರ – ಕೆ ಮಥಾಯ್
ರಾಜಾಜಿನಗರ – ಬಿಟಿ ನಾಗಣ್ಣ
ವಿಜಯನಗರ – ಡಾ ರಮೇಶ್‌ ಬೆಲ್ಲಂಕೊಂಡ
ಚಿಕ್ಕಪೇಟೆ – ಬ್ರಿಜೇಶ್‌ ಕಾಳಪ್ಪ
ಪದ್ಮನಾಭನಗರ – ಅಜಯ್‌ ಗೌಡ,
ಬಿ.ಟಿ.ಎಂ ಬಡಾವಣೆ – ಶ್ರೀನಿವಾಸ್‌ ರೆಡ್ಡಿ
ಬೊಮ್ಮನಹಳ್ಳಿ – ಸೀತಾರಾಮ್‌ ಗುಂಡಪ್ಪಗೆ

ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement