ವಿವಾಹೇತರ ಸಂಬಂಧ..ವೀಡಿಯೋ ಕರೆಗಳಲ್ಲಿ ಚುಂಬನ..ಅಶ್ಲೀಲ ವೀಡಿಯೊಗಳ ಮೂಲಕ ಮಹಿಳೆಯರಿಗೆ ಬ್ಲ್ಯಾಕ್‌ಮೇಲ್ : ಇದು ಅಮೃತಪಾಲ್‌ ಸಿಂಗ್‌ ರಂಗೀಲಾ ಜೀವನ-ವರದಿ

ನವದೆಹಲಿ : ಖಾಲಿಸ್ತಾನಿ ಪ್ರತಿಪಾದಕ ಅಮೃತಪಾಲ್ ಸಿಂಗ್‌ಗಾಗಿ ಪಂಜಾಬ್ ಪೊಲೀಸರು ಹುಡುಕಾಟ ಮುಂದುವರಿಸಿದ್ದು, ಪರಾರಿಯಾಗಿರುವ ಆತನ ರಂಗೀಲಾ ಜೀವನದ ವಿವರಗಳು ಈಗ ಸಾರ್ವಜನಿಕ ಡೊಮೇನ್‌ಗೆ ಬಂದಿವೆ.
ಮಾಧ್ಯಮ ವರದಿಗಳ ಪ್ರಕಾರ, ‘ವಾರಿಸ್ ಪಂಜಾಬ್ ದೇ’ ಸ್ವಯಂ ಘೋಷುತ ಮುಖ್ಯಸ್ಥ ಆನ್‌ಲೈನ್‌ನಲ್ಲಿ ಹಲವಾರು ಹುಡುಗಿಯರೊಂದಿಗೆ ಚಾಟ್ ಮಾಡುತ್ತಿದ್ದ ಮತ್ತು ಹಲವಾರು ವಿವಾಹಿತ ಮತ್ತು ಅವಿವಾಹಿತ ಮಹಿಳೆಯರೊಂದಿಗೆ ವಿವಾಹೇತರ ಸಂಬಂಧಗಳನ್ನು ಇರಿಸಿಕೊಂಡಿದ್ದ, ಈ ಬಗ್ಗೆ ಚಾಟ್‌ ಮಾಡುತ್ತಿದ್ದ ಎಂದು ಆರೋಪಿಸಲಾಗಿದೆ.
ತಲೆಮರೆಸಿಕೊಂಡಿರುವ ಅಮೃತಪಾಲ್ ಸಿಂಗ್‌ ಹಲವಾರು ಮಹಿಳೆಯರನ್ನು ಅಶ್ಲೀಲ ವೀಡಿಯೊಗಳೊಂದಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಸಹ ಆರೋಪಿಸಲಾಗಿದೆ. ಕುತೂಹಲಕಾರಿಯಾಗಿ, ಖಾಲಿಸ್ತಾನಿ ಬೋಧಕ ಇನ್ಸ್ಟಾಗ್ರಾಂನಲ್ಲಿ(Instagram)ನಲ್ಲಿ ಅನೇಕ ಮಹಿಳಾ ಅನುಯಾಯಿಗಳನ್ನು ಹೊಂದಿದ್ದಾನೆ, ಅಲ್ಲಿ ಆತ ನಿಯಮಿತವಾಗಿ ಅವರೊಂದಿಗೆ ಚಾಟ್ ಮಾಡುತ್ತಿದ್ದ ಎಂದು ವರದಿಗಳು ಹೇಳಿವೆ.
ಇಂಡಿಯಾ ಟುಡೆ ಟಿವಿಯ ವರದಿಯ ಪ್ರಕಾರ, ಆತನ ವಾಟ್ಸಾಪ್ ಚಾಟ್‌ಗಳು ಮತ್ತು ಧ್ವನಿ ಟಿಪ್ಪಣಿಗಳು ಆತ ಅವಿವಾಹಿತ ಮತ್ತು ವಿವಾಹಿತ ಮಹಿಳೆಯರೊಂದಿಗೆ ಸಾಂದರ್ಭಿಕ / ಗಂಭೀರವಲ್ಲದ ಸಂಬಂಧಗಳನ್ನು ಬಯಸುತ್ತಿದ್ದ ಎಂದು ಬಹಿರಂಗಪಡಿಸಿದೆ. ಮದುವೆಯಾದವರು, ಅವಿವಾಹಿತೆಯರು ಹೀಗೆ ಅನೇಕ ಮಹಿಳೆಯರ ಜತೆ ಆತ ವೀಡಿಯೊ ಕರೆಗಳನ್ನು ನಡೆಸುತ್ತಿದ್ದ. ವೀಡಿಯೊ ಕರೆಗಳಲ್ಲಿಯೇ ಮುತ್ತುಗಳನ್ನು ನೀಡುತ್ತಿದ್ದ. ಕೊನೆಗೆ ಅವರ ಅಶ್ಲೀಲ ವಿಡಿಯೋಗಳ ಮೂಲಕ ಬ್ಲ್ಯಾಕ್‌ಮೇಲ್ ಕೂಡ ಮಾಡುತ್ತಿದ್ದ. ಆತನ ಚಾಟ್‌ಗಳು ಮತ್ತು ಧ್ವನಿ ಟಿಪ್ಪಣಿಗಳನ್ನು ಪರಿಶೀಲಿಸಿರುವುದಾಗಿ ಇಂಡಿಯಾ ಟುಡೆ ಟಿವಿ ಹೇಳಿದೆ. ಇಂಡಿಯಾ ಟುಡೇ ಟಿವಿ ವರದಿ, ಆತನ 12 ಧ್ವನಿ ರೆಕಾರ್ಡಿಂಗ್‌ಗಳನ್ನು ಪ್ರವೇಶಿಸಲು ಸಾಧ್ಯವಾಯಿತು ಎಂದು ಹೇಳಿದೆ.

ಏತನ್ಮಧ್ಯೆ, ಅಮೃತಪಾಲ್ ಸಿಂಗ್‌ನ ಹೊಸ ಚಿತ್ರವು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ, ಇದು ಆತ ಬೈಕಿನಲ್ಲಿ ತನ್ನ ಆಪ್ತ ಸಹಾಯಕನೊಂದಿಗೆ ಮೋಟಾರು ಕಾರ್ಟ್‌ನಲ್ಲಿ ಪರಾರಿಯಾಗುವುದನ್ನು ತೋರಿಸುತ್ತದೆ. ಬುಧವಾರ ಪಂಜಾಬ್ ಪೊಲೀಸರು ಅಮೃತಪಾಲ್ ಸಿಂಗ್ ಪರಾರಿಯಾದ ಬೈಕ್ ಅನ್ನು ಜಲಂಧರ್‌ನ ಕಾಲುವೆಯ ಬಳಿ ವಶಪಡಿಸಿಕೊಳ್ಳಲಾಗಿದೆ ಎಂದುಹೇಳಿದ್ದಾರೆ. ಪಂಜಾಬ್ ಪೊಲೀಸರು ಪಡೆದ ಸಿಸಿಟಿವಿ ದೃಶ್ಯಾವಳಿಗಳು ಅಮೃತಪಾಲ್ ಬೈಕ್‌ ಹಿಂಬದಿಯಲ್ಲಿ ಸವಾರಿ ಮಾಡುತ್ತಿದ್ದ ಹಗೂ ಸಹಾಯಕ ಮೋಟಾರ್‌ಸೈಕಲ್ ಓಡಿಸುತ್ತಿದ್ದ ಎಂದು ತೋರಿಸಿದೆ. ಬಂಧನ ತಪ್ಪಿಸಲು ಸಂಪರ್ಕ ರಸ್ತೆಗಳನ್ನು ಬಳಸಿ ಇಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಮೃತಪಾಲ್ ಸಿಂಗ್ ವಿರುದ್ಧ ಹೊಸ ಎಫ್ಐಆರ್
ಜಲಂಧರ್‌ನ ಗುರುದ್ವಾರವೊಂದರ ‘ಗ್ರಂಥಿ’ ನೀಡಿದ ದೂರಿನ ನಂತರ ಅಮೃತಪಾಲ್ ಸಿಂಗ್ ವಿರುದ್ಧ ಸುಲಿಗೆ ಮತ್ತು ಗಲಭೆಗಾಗಿ ಹೊಸ ಎಫ್‌ಐಆರ್ ದಾಖಲಿಸಲಾಗಿದೆ.
ಪರಾರಿಯಾದ ಅಮೃತಪಾಲ ಸಿಂಗ್‌ ನಂಗಲ್ ಅಂಬಿಯಾನ್ ಗ್ರಾಮದ ಗುರುದ್ವಾರದಲ್ಲಿ ಸುಮಾರು 45 ನಿಮಿಷಗಳ ಕಾಲ ಕಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆತ ಮತ್ತು ಆತನ ಮೂವರು ಸಹಾಯಕರು ಗುರುದ್ವಾರವನ್ನು ಪ್ರವೇಶಿಸಿದರು ಮತ್ತು ಬಟ್ಟೆ ಬದಲಾಯಿಸಿಕೊಳ್ಳಲು ಗನ್‌ ಗುರಿ ಹಿಡಿದು ತನ್ನ ಮಗನ ಬಟ್ಟೆಗಳನ್ನು ನೀಡುವಂತೆ ಬೆದರಿಸಿದ ಎಂದು ಗ್ರಂಥಿ (ಸಿಖ್ ಅರ್ಚಕ) ರಂಜಿತ್ ಸಿಂಗ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬಟ್ಟೆ ನೀಡಲು ನಿರಾಕರಿಸಿದಾಗ ಅಮೃತಪಾಲ್ ಸಿಂಗ್ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ ಎಂದು ಗ್ರಂಥಿ ಹೇಳಿದ್ದಾರೆ. ಅವರ ಬಳಿ ಪಿಸ್ತೂಲ್ ಮತ್ತು .315 ಬೋರ್ ರೈಫಲ್ ಇತ್ತು ಎಂದು ರಂಜಿತ್ ಸಿಂಗ್ ಹೇಳಿದ್ದಾರೆ.
ದೂರಿನ ಮೇರೆಗೆ, ಪೊಲೀಸರು ತೀವ್ರಗಾಮಿ ಬೋಧಕ ಮತ್ತು ಆತನ ನಾಲ್ವರು ಅಪರಿಚಿತ ಸಹಾಯಕರ ವಿರುದ್ಧ ವಿವಿಧ ಜಲಂಧರ್‌ನ ಶಾಹಕೋಟ್ ಪೊಲೀಸ್ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ.ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ 386 (ಸಾವಿನ ಭಯದಲ್ಲಿ ವ್ಯಕ್ತಿಯನ್ನು ಹಾಕಿ ಸುಲಿಗೆ), 506 (ಕ್ರಿಮಿನಲ್ ಬೆದರಿಕೆ) ಮತ್ತು 148 (ಗಲಭೆ) ಮತ್ತು ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

ಪತ್ನಿ, ಕುಟುಂಬಸ್ಥರ ವಿಚಾರಣೆ
ಅಮೃತಪಾಲ ಸಿಂಗ್‌ ಪತ್ನಿ ಕಿರಣ್‌ದೀಪ್ ಕೌರ್ ಬ್ರಿಟನ್‌ನಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯಳು. ಕಳೆದ ತಿಂಗಳಷ್ಟೇ ಅಮೃತಪಾಲ್ ಮತ್ತು ಕೌರ್ ಮದುವೆ ನಡೆದಿತ್ತು. ಮದುವೆ ನಂತರ ಕೌರ್, ಬ್ರಿಟನ್‌ನಿಂದ ಪಂಜಾಬ್‌ಗೆ ಬಂದು ನೆಲೆಸಿದ್ದಳು. ಪ್ರಸ್ತುತ ಅಮೃತಪಾಲ್‌ನ ಪೂರ್ವಜರ ಹಳ್ಳಿ ಜಲ್ಲುಪುರ್ ಖೇಡಾದಲ್ಲಿ ವಾಸವಿದ್ದಾಳೆ. ಕಿರಣ್‌ದೀಪ್ ಕೌರ್ ಕುಟುಂಬವು ಜಲಂಧರ್ ಮೂಲದ್ದಾಗಿದೆ. ನಟ, ಸಾಮಾಜಿಕ ಕಾರ್ಯಕರ್ತ ದೀಪ್ ಸಿಧು ಹುಟ್ಟು ಹಾಕಿದ ವಾರಿಸ್ ಪಂಜಾಬ್ ದೆ ಸಂಘಟನೆಯ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡ ಕೆಲವು ತಿಂಗಳ ನಂತರ ಅಮೃತಪಾಲ್ ಮದುವೆ ನಡೆದಿದೆ.
ಈ ನಡುವೆ ಅಮೃತಸರ ಗ್ರಾಮೀಣ ವಿಭಾಗದ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು, ಅಮೃತಪಾಲ್‌ನ ಪತ್ನಿ ಕಿರಣ್‌ದೀಪ್ ಕೌರ್ ಸೇರಿದಂತೆ ಆತನ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಒಬ್ಬ ಮಹಿಳಾ ಅಧಿಕಾರಿಯನ್ನು ಒಳಗೊಂಡ ಪೊಲೀಸರ ತಂಡವು, ಪತ್ನಿ ಕಿರಣ್‌ದೀಪ್ ಕೌರ್, ತಂದೆ ಮತ್ತು ತಾಯಿಯನ್ನು ಸುಮಾರು ಒಂದು ಗಂಟೆಗಳ ಕಾಲ ಪ್ರಶ್ನಿಸಿದ್ದಾರೆ. ಅಮೃತಪಾಲ್ ಸಿಂಗ್‌ನ ವಿದೇಶಿ ದೇಣಿಗೆ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಜಲ್ಲುಪುರ್ ಖೇಡಾ ಗ್ರಾಮದಲ್ಲಿ ಕಿರಣ್‌ದೀಪ್ ಕೌರ್ ಅವರನ್ನು ಪ್ರಶ್ನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಮತದಾನಕ್ಕೂ ಮುನ್ನವೇ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement