ಭಾರತಕ್ಕೆ ಬೇಕಾಗಿದ್ದ ಖಾಲಿಸ್ತಾನ್ ಕಮಾಂಡೋ ಫೋರ್ಸ್ ಮುಖ್ಯಸ್ಥ ಪರಂಜಿತ್ ಪಂಜ್ವಾರ್ ಲಾಹೋರ್‌ನಲ್ಲಿ ಗುಂಡಿನ ದಾಳಿಯಲ್ಲಿ ಸಾವು

ನವದೆಹಲಿ: ವಾಂಟೆಡ್ ಖಲಿಸ್ತಾನ್ ಕಮಾಂಡೋ ಫೋರ್ಸ್ (ಕೆಸಿಎಫ್) ಮುಖ್ಯಸ್ಥ ಪರಂಜಿತ್ ಸಿಂಗ್ ಪಂಜ್ವಾರ್ ಎಂಬಾತನನ್ನು ಶನಿವಾರ ಪಾಕಿಸ್ತಾನದ ಲಾಹೋರ್‌ನ ಜೋಹರ್ ಪಟ್ಟಣದಲ್ಲಿ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ವರದಿಯಾಗಿದೆ.
ಆತ ತನ್ನ ಹೌಸಿಂಗ್ ಸೊಸೈಟಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ್‌ ಸೈಕಲ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಂಜಾಬ್‌ನ ತರಣ್‌ ತಾರಣ್ ಜಿಲ್ಲೆಯವರಾದ 63 ವರ್ಷದ ಪರಂಜಿತ್ ಸಿಂಗ್ ಪಂಜ್ವಾರ್ ನಿಷೇಧಿತ ಖಲಿಸ್ತಾನ್ ಕಮಾಂಡೋ ಫೋರ್ಸ್-ಪಂಜ್ವಾರ್ ಗುಂಪಿನ ಮುಖ್ಯಸ್ಥನಾಗಿದ್ದ. ಮತ್ತು 2020 ಜುಲೈನಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಭಯೋತ್ಪಾದಕ ಎಂದು ಗೊತ್ತುಪಡಿಸಿದಾಗ ಮಾದಕವಸ್ತು ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಮತ್ತು ಇತರ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ಚಂಡೀಗಢದ ಸೆಕ್ಟರ್ 34 ರಲ್ಲಿ 1999 ರ ಬಾಂಬ್ ಸ್ಫೋಟದ ಹಿಂದಿನ “ಮಾಸ್ಟರ್ ಮೈಂಡ್” ಆಗಿದ್ದ ಪರಂಜಿತ್ ಸಿಂಗ್ ಪಂಜ್ವಾರನನ್ನು ಜುಲೈ 2020 ರಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆಯಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಲಾಯಿತು.

ಆತ ಭಾರತದ ಪಂಜಾಬ್‌ನಲ್ಲಿ ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ. ಪೊಲೀಸರ ಪ್ರಕಾರ, ಆತ ಪಂಜಾಬಿನಲ್ಲಿ ಡ್ರಗ್ಸ್ ಕಳ್ಳಸಾಗಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಕಳೆದೆರಡು ವರ್ಷಗಳಿಂದ ನಿಷ್ಕ್ರಿಯನಾಗಿದ್ದರೂ, ಸಿಂಗ್ ಲಾಹೋರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮತ್ತು ಪಾಕಿಸ್ತಾನದಲ್ಲಿ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿಯನ್ನು ಏರ್ಪಡಿಸುವಲ್ಲಿ ತೊಡಗಿದ್ದ. ಆತ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪೂರೈಸುವಲ್ಲಿ ನಿರತರಾಗಿದ್ದ.
ಭಾರತ ಸರ್ಕಾರದ ವಿರುದ್ಧ ಅಲ್ಪಸಂಖ್ಯಾತರನ್ನು ಪ್ರಚೋದಿಸುವ ಉದ್ದೇಶದಿಂದ ರೇಡಿಯೋ ಪಾಕಿಸ್ತಾನದಲ್ಲಿ ಅತಿ ಹೆಚ್ಚು ದೇಶದ್ರೋಹಿ ಮತ್ತು ಪ್ರತ್ಯೇಕತಾವಾದಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಲ್ಲಿ ತೊಡಗಿಸಿಕೊಂಡಿದ್ದ ಆತ ಮಾದಕ ದ್ರವ್ಯಗಳ ಕಳ್ಳಸಾಗಣೆಯಲ್ಲಿ ಸಕ್ರಿಯನಾಗಿದ್ದ. ಈತ ಕಳ್ಳಸಾಗಣೆದಾರರು ಮತ್ತು ಭಯೋತ್ಪಾದಕರ ನಡುವೆ ಪ್ರಮುಖ ಸಂಪರ್ಕವಾಗಿದ್ದ ಎಂದು ಯುಎಪಿಎ ಅಡಿಯಲ್ಲಿ ಆತನನ್ನು ಭಯೋತ್ಪಾದಕ ಎಂದು ಘೋಷಿಸಿರುವ ಅಧಿಸೂಚನೆಯಲ್ಲಿ ಗೃಹ ಸಚಿವಾಲಯ ತಿಳಿಸಿದೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

ಪಂಜಾಬ್‌ನಲ್ಲಿ ಮಾದಕವಸ್ತು ವ್ಯಾಪಾರ ಮತ್ತು ನಕಲಿ ಭಾರತೀಯ ಕರೆನ್ಸಿ ನೋಟುಗಳ (ಎಫ್‌ಐಸಿಎನ್) ಕಾರ್ಯಾಚರಣೆಯನ್ನು ಉತ್ತೇಜಿಸುವಲ್ಲಿ ಪಂಜ್ವಾರ್‌ನ ಸಹಭಾಗಿತ್ವವು ದಾಖಲಿಸಲ್ಪಟ್ಟಿದೆ. ಆತ ಭಾರತಕ್ಕೆ ಪ್ರತಿಕೂಲವಾದ ಇತರ ಶಕ್ತಿಗಳೊಂದಿಗೆ ನಂಟು ಹೊಂದಿದ್ದ” ಎಂದು ಸಚಿವಾಲಯ ಹೇಳಿದೆ.
KCF ಫೆಬ್ರವರಿ 1986 ರಲ್ಲಿ ಅಸ್ತಿತ್ವಕ್ಕೆ ಬಂದಿತು ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಸುಲಿಗೆಗಾಗಿ ಬ್ಯಾಂಕ್ ದರೋಡೆಗಳು ಮತ್ತು ಅಪಹರಣಗಳನ್ನು ಮಾಡುವುದು ಈ ಸಂಘಟನೆಯ ವಿಧಾನವಾಗಿತ್ತು.
ಪರಂಜಿತ್ ಸಿಂಗ್ ಪಂಜ್ವಾರ್ ಆಶ್ರಯದಲ್ಲಿ ನಿಷೇಧಿತ ಸಂಘಟನೆಯು ಭಾರತದಲ್ಲಿ ನಡೆದ ವಿವಿಧ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿತ್ತು, ಇದರಲ್ಲಿ ಅಕ್ಟೋಬರ್ 1988 ರಲ್ಲಿ ನಡೆದ ಬಾಂಬ್ ದಾಳಿ, ಫಿರೋಜ್‌ಪುರದಲ್ಲಿ 10 ರಾಯ್ ಸಿಖ್‌ರನ್ನು ಕೊಂದ ಮತ್ತು ಮೇಜರ್ ಜನರಲ್ ಬಿ.ಎನ್. ಕುಮಾರ್ ಹತ್ಯೆ ಸೇರಿವೆ ಎಂದು ಸಚಿವಾಲಯ ತಿಳಿಸಿದೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement