ಉಡುಪಿ: 35 ಅಡಿ ಎತ್ತರದ ಬೃಹತ್‌ ಮರವೇರಿ ಹಲಸಿನ ಹಣ್ಣು ಕೊಯ್ದ ಪೇಜಾವರ ಶ್ರೀಗಳು…!

ಉಡುಪಿ: ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ತಮ್ಮ ಬಿಡುವಿನ ವೇಳೆ ಶಿಷ್ಯಂದಿರಿಗೆ ಪಾಠ ಪ್ರವಚನ ಮಾಡುವುದಲ್ಲದೆ, ಶ್ರೀಮಠದ ಗೋಶಾಲೆಗೆ ಹೋಗುತ್ತಾರೆ. ಅವರು ಆಗಾಗ ಶಿಷ್ಯಂದಿರೇ ಅಚ್ಚರಿಪಡುವಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಇದೀಗ ಅವರು ಬೃಹತ್‌ ಗಾತ್ರದ ಹಲಸಿನ ಮರವೇರಿ ಹಲಸಿನ ಕಾಯಿಗಳನ್ನು ಕೊಯ್ದು ಸುದ್ದಿಯಾಗಿದ್ದಾರೆ. ಅವರು ಹಲಸಿನ ಮರ ಏರಿದ ಫೋಟೋಗಳು ಭಾರೀ ವೈರಲ್‌ ಆಗಿವೆ.
ಉಡುಪಿಯ ನೀಲಾವರ ಗೋಶಾಲೆ ಆವರಣದಲ್ಲಿರುವ ಹಲಸಿನ ಹಣ್ಣಿನ ಮರದಲ್ಲಿ ಭಾರೀ ಸಂಖ್ಯೆಯಲ್ಲಿ ಹಲಸಿನ ಹಣ್ಣುಗಳು ಬಿಟ್ಟಿವೆ. ಆದರೆ, ಮರ ಭಾರೀ ಎತ್ತರ ಇರುವುದರಿಂದ ಅವುಗಳನ್ನು ಕೊಯ್ದಿರಲಿಲ್ಲ.
ಮಳೆ ಜೋರಾದರೆ ಹಣ್ಣುಗಳು ಕೂಡಾ ಕೊಳೆಯಬಹುದು ಎಂದು ಮನಗಂಡ ಪೇಜಾವರ ಶ್ರೀಗಳು ಖಾವಿ ಪಂಚೆಯನ್ನ ಕಚ್ಚೆಯಂತೆ ಬಿಗಿದು ಕಟ್ಟಿಕೊಂಡು ಕೈಯ್ಯಲ್ಲಿ ಕತ್ತಿ ಹಿಡಿದು ಸರಸರನೆ ಮರ ಏರಿದರು. ಸುಮಾರು 30 ರಿಂದ 35 ಅಡಿ ಎತ್ತರದ ಮರ ಏರಿದ ಶ್ರೀಗಳು ಪಕ್ವ ಭರಿತ ಎಂಟತ್ತು ಹಲಸಿನ ಹಣ್ಣುಗಳನ್ನು ಕಿತ್ತು ನೆಲಕ್ಕೆ ಹಾಕಿದರು.. ಬಳಿಕ ಶಿಷ್ಯಂದಿರಿಗೆ, ಗೋಶಾಲೆ ಸಿಬ್ಬಂದಿಗೆ ತಿನ್ನಲು ಕೊಟ್ಟರು. ಜೊತೆಗೆ ಗೋಶಾಲೆಯಲ್ಲಿರುವ ಗೋವುಗಳಿಗೂ ತಿನ್ನಲು ಕೊಟ್ಟು ಅವುಗಳ ಸಂತಸದಲ್ಲಿ ಪಾಲ್ಗೊಂಡರು.ಶ್ರೀಗಳು ಮರವೇರಿದ ಪೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

ಇಂದಿನ ಪ್ರಮುಖ ಸುದ್ದಿ :-   ವೀಡಿಯೊ | ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್‌ ಪಕ್ಷ ಸೇರ್ಪಡೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.4 / 5. ಒಟ್ಟು ವೋಟುಗಳು 5

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement