ವೀಡಿಯೊ ..: ದೂಧ್‌ ಸಾಗರ ಜಲಪಾತ ನೋಡಲು ತೆರಳಿದವರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ | ವೀಕ್ಷಿಸಿ

ಬೆಳಗಾವಿ : ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಗಡಿ ಭಾಗದಲ್ಲಿ ಪಶ್ಚಿಮ ಘಟ್ಟದ ದಟ್ಟ ಅರಣ್ಯದ ನಡುವೆ ಇರುವ ಮನಮೋಹಕ ದೂಧ್‌ ಸಾಗರ ಜಲಪಾತ ನೋಡಲು ಭಾನುವಾರ ತೆರಳಿದ ಪ್ರವಾಸಿಗರಿಗೆ ಗೋವಾ ಪೊಲೀಸರು ಶಾಕ್‌ ನೀಡಿದ್ದಾರೆ. ಪ್ರವಾಸಿಗರಿಗೆ ಬಸ್ಕಿ ಹೊಡೆಸಿ ಶಿಕ್ಷೆ ನೀಡಿ ಕಳುಹಿಸಿದ್ದಾರೆ.
ಈ ಕುರಿತ ವೀಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.
ದೂಧ್‌ ಸಾಗರ ಜಲಪಾತ ಪಶ್ಚಿಮ ಘಟ್ಟದ ಭಗವಾನ್ ಮಹಾವೀರ ಉದ್ಯಾನ ಮೊಲ್ಲೆಂ ರಾಷ್ಟ್ರೀಯ ಉದ್ಯಾನದ ಬಳಿ ಇದೆ. ದಟ್ಟ ಕಾಡಿನಿಂದ ಸುತ್ತುವರಿದಿದೆ. ಟ್ರಕಿಂಗ್ ಹೋಗುವವರಿಗೆ ಇದು ಅತ್ಯಂತ ಪ್ರಶಸ್ತ ಜಾಗ. ಹೀಗಾಗಿ ಅನೇಕರು ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬರುತ್ತಾರೆ. ಹೀಗೆ ಬರಲು ಪ್ರವೇಶ ನಿಷೇಧ ಇದೆ.

ಆದರೂ ಯುವಕರು ದೂಧ್‌ ಸಾಗರ ಜಲಪಾತದ ಮನಮೋಹಕ ದೃಶ್ಯ ನೋಡಲು ತೆರಳಿದ್ದಾರೆ. ವಾರಾಂತ್ಯದ ರಜೆಗೆ ಬೆಳಗಾವಿ ಸೇರಿದಂತೆ ನೆರೆಹೊರೆಯ ಜಿಲ್ಲೆಗಳಿಂದ ತೆರಳಿದ್ದ ಯುವಕರಿಗೆ ಗೋವಾ ಪೊಲೀಸರು ಬಸ್ಕಿ ಹೊಡೆಸಿ ಶಿಕ್ಷೆ ನೀಡಿದ್ದಾರೆ. ಜಲಪಾತ ವೀಕ್ಷಣೆಗೆ ಗೋವಾ ನಿರ್ಬಂಧ ವಿಧಿಸಿದೆ. ಕರ್ನಾಟಕ ಭಾಗದಿಂದ ಜೋಯಿಡಾ ತಾಲೂಕಿನ ಕ್ಯಾಸಲ್‌ ರಾಕ್ ನಿಂದ ರೈಲ್ವೆ ಮಾರ್ಗ ಅಥವಾ ರೈಲು ಹಳಿ ಬಳಿ ಟ್ರಕ್ಕಿಂಗ್ ಮೂಲಕ ತೆರಳಬೇಕು. ರೈಲ್ವೆ ಇಲಾಖೆ ಇಲ್ಲಿ ರೈಲ್ವೆ ಹಳಿ ಪಕ್ಕದಲ್ಲಿ ನಡೆದು ಸಾಗಲು ನಿರ್ಬಂಧ ಹೇರಿದೆ.

ನಿರ್ಬಂಧ ವಿಧಿಸಿದ್ದರೂ ಪ್ರವಾಸಿಗರು ಜಲಪಾತ ವೀಕ್ಷಣೆಗೆ ತೆರಳುತ್ತಾರೆ. ಕೆಲವರು ದೂಧ್‌ ಸಾಗರದ ಮಾರ್ಗವಾಗಿ ರೈಲ್ವೆಯಲ್ಲಿ ಸಾಗಿ ದೂಧ್‌ ಸಾಗರ ಜಲಪಾತದ ಬಳಿ ರೈಲಿನ ವೇಗ ಇರುವಾಗ ಅದರಿಂದ ಜಿಗಿಯುತ್ತಾರೆ. ವಾರಾಂತ್ಯ ಭಾನುವಾರ ಆಗಿದ್ದರಿಂದ ಜನದಟ್ಟಣೆ ಉಂಟಾಗಿದೆ. ನಿಷೇಧಿತ ಪ್ರದೇಶದಲ್ಲಿ ಜನರು ಓಡಾಡಿದ್ದಾರೆ. ಹೀಗಾಗಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪ್ರವಾಸಿಗರನ್ನು ತಡೆದು ಬಸ್ಕಿ ಶಿಕ್ಷೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ: ಸಿಎಂ ಸಿದ್ದರಾಮಯ್ಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement