ಭಗವಾನ್‌ ಶಿವನನ್ನು ಮೆಚ್ಚಿಸಲು ಮರ ಕಡಿಯುವ ಯಂತ್ರ ಬಳಸಿ ತಲೆಯನ್ನೇ ಕತ್ತರಿಸಿಕೊಂಡು ಅರ್ಪಿಸಲು ಮುಂದಾದ ಭಕ್ತ..!

ಲಕ್ನೋ: ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ 28 ವರ್ಷದ ವ್ಯಕ್ತಿಯೊಬ್ಬರು ಶಿವನಿಗೆ ನೈವೇದ್ಯವಾಗಿ ಅರ್ಪಿಸಲು ಮರ ಕಡಿಯುವ ಯಂತ್ರವನ್ನು ಬಳಸಿ ತನ್ನ ತಲೆಯನ್ನು ತಾನೇ ಕತ್ತರಿಸಿಕೊಳ್ಳಲು ಯತ್ನಿಸಿ ತೀವ್ರವಾಗಿ ಗಾಯಗೊಂಡಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ.
ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯ ಸದರ್ ಕೊತ್ವಾಲಿ ವ್ಯಾಪ್ತಿಯ ರಘುನಾಥಪುರ ಗ್ರಾಮದ ನಿವಾಸಿ ಕೂಲಿ ಕೆಲಸ ಮಾಡಿಕೊಂಡಿರುವ 28 ವರ್ಷದ ದೀಪಕ ಕುಶ್ವಾಹ ಶಿವನ ಪರಮಭಕ್ತ. ದೀಪಕ್‌ನ ತಂದೆ ಪಲ್ತೂರಮ್ ಕುಶ್ವಾಹ, ತನ್ನ ಮಗ ಶಿವನ ನಿಷ್ಠಾವಂತ ಅನುಯಾಯಿ ಹೇಳಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ದೀಪಕ ತನ್ನ ತಲೆಯನ್ನು ಭಗವಾನ್ ಶಿವನಿಗೆ ಅರ್ಪಿಸಿ ಮೆಚ್ಚಿಸಿಕೊಳ್ಳಬೇಕು ಎಂಬ ಇಂಗಿತ ವ್ಯಕ್ತಪಡಿಸಿದ್ದನಂತೆ. ಆತ ಶಿವನಿಗೆ ಪ್ರಾರ್ಥನೆಗಳನ್ನು ಮಾಡುವುದು ಮತ್ತು ಶಿವನ ಕೊಡುಗೆಯ ಬಗ್ಗೆ ನೋಟ್‌ಬುಕ್‌ನಲ್ಲಿ ಬರೆದಿಟ್ಟಿದ್ದಾರೆ.
“ಸ್ವಂತ ಆತ್ಮವನ್ನು ತ್ಯಾಗ ಮಾಡುವುದು ಹುಚ್ಚುತನ ಎಂದು ನಾನು ಆತನಿಗೆ ಯಾವಾಗಲೂ ಹೇಳುತ್ತಿದ್ದೆ, ಆತ ಒಂದು ತಿಂಗಳಿಂದ ಇದನ್ನು ಮಾಡಬೇಕೆಂದು ಹೇಳುತ್ತಿದ್ದ ಎಂದು ದೀಪಕ್ ತಂದೆ ಹೇಳಿದರು.
ಮಂಗಳವಾರ ಮುಂಜಾನೆ 4 ಗಂಟೆ ಸುಮಾರಿಗೆ ಆ ಪ್ರದೇಶದಲ್ಲಿರುವ ಶಿವನ ದೇವಸ್ಥಾನಕ್ಕೆ ಹೋದ ಆತ, ‘ಜೈ ಭೋಲೆನಾಥ’ ಎಂದು ಘೋಷಣೆ ಕೂಗುತ್ತಾ ಮರ ಕಡಿಯುವ ಯಂತ್ರವನ್ನು ಬಳಸಿ ಕತ್ತು ಕೊಯ್ಯಲು ಮುಂದಾದರು. ಪೂಜಾರಿ ಮಂತ್ರಗಳನ್ನು ಹೇಳುತ್ತಿದ್ದಂತೆ ತನ್ನ ಕತ್ತನ್ನು ಕತ್ತರಿಸಲು ದೀಪಕ್ ಶುರು ಮಾಡಿದ್ದು, ಆತನ ಕೂಗು ಕೇಳಿದವರು ಧಾವಿಸಿ ನೋಡಿದಾಗ ದೀಪಕ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಆತನನ್ನು ಝಾನ್ಸಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement