ಲಕ್ನೋ : ಸೂಪರ್ ಸ್ಟಾರ್ ನಟ ರಜನಿಕಾಂತ ಅವರು ಶನಿವಾರ (ಆಗಸ್ಟ್ 20 ) ಲಕ್ನೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಆಗಿದ್ದಾರೆ. ರಜನಿಕಾಂತ ನಟನೆಯ ‘ಜೈಲರ್’ ಸಿನಿಮಾವನ್ನು ಯೋಗಿ ಆದಿತ್ಯನಾಥ ಅವರು ರಜನಿಕಾಂತ ಅವರ ಜೊತೆ ವೀಕ್ಷಣೆ ಮಾಡಲಿದ್ದಾರೆ ಎಂದು ವರದಿಯಾಗಿದೆ. ಭೇಟಿ ವೇಳೆ ಯೋಗಿ ಆದಿತ್ಯನಾಥ ಅವರ ಕಾಲಿಗೆ ರಜನಿಕಾಂತ ನಮಸ್ಕರಿಸಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೀಡಿಯೋವೊಂದರಲ್ಲಿ ರಜನಿಕಾಂತ ಅವರು ಯೋಗಿ ಆದಿತ್ಯನಾಥ ಅವರ ಪಾದಗಳನ್ನು ಸ್ಪರ್ಶಿಸುತ್ತಿರುವುದು ಕಾಣುತ್ತದೆ. ಈ ಬಗ್ಗೆ ಮಾತನಾಡಿರುವ ರಜನಿಕಾಂತ ಅವರು “ನಾನು ಮುಖ್ಯಮಂತ್ರಿ ಜೊತೆಗೆ ಜೈಲರ್ ಸಿನಿಮಾ ನೋಡುವೆ. ಈ ಸಿನಿಮಾ ಹಿಟ್ ಆಗಿರುವುದು ದೇವರ ಆಶೀರ್ವಾದ” ಎಂದು ಹೇಳಿದ್ದಾರೆ.
ಲಕ್ನೋದಲ್ಲಿ ‘ಜೈಲರ್’ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ಇತ್ತು. ಅದನ್ನು ಉಪ ಮುಖ್ಯಮಂತ್ರಿ ಕೇಶವಪ್ರಸಾದ ಮೌರ್ಯ ನೋಡಿದ್ದಾರೆ.
ನನಗೆ ಜೈಲರ್ ಸಿನಿಮಾ ನೋಡಲು ಅವಕಾಶ ಸಿಕ್ಕಿತು. ನಾನು ರಜನಿಕಾಂತ್ ಅವರ ಸಾಕಷ್ಟು ಸಿನಿಮಾಗಳನ್ನು ನೋಡಿದ್ದೇನೆ. ಅವರು ಅದ್ಭುತ ನಟ. ಅವರು ಅಭಿನಯದ ಮೂಲಕ ಸಿನಿಮಾದ ಮಹತ್ವವನ್ನು ಹೆಚ್ಚು ಮಾಡುತ್ತಾರೆ” ಎಂದು ಕೇಶವ ಪ್ರಸಾದ ಹೇಳಿದ್ದರು.
ಹಿಂದಿನ ದಿನ ರಜನಿಕಾಂತ ಅವರು ಜಾರ್ಖಂಡ್ನ ರಾಂಚಿಯಲ್ಲಿದ್ದರು. ರಾಜ್ಯದ ಪ್ರಸಿದ್ಧ ಚಿನ್ನಮಸ್ತ ದೇವಸ್ಥಾನಕ್ಕೂ ಶುಕ್ರವಾರ ಭೇಟಿ ನೀಡಿ ಪೂಜೆ ಸಲ್ಲಿಸಿದರು. ರಾಂಚಿಯ ‘ಯಾಗೋದ ಆಶ್ರಮ’ದಲ್ಲಿ ಅವರು ಒಂದು ಗಂಟೆ ಧ್ಯಾನಸ್ಥರಾಗಿದ್ದರು. ಇದಾದ ನಂತರ ಅವರು ಜಾರ್ಖಂಡ್ ರಾಜ್ಯಪಾಲರಾದ ಸಿ ಪಿ ರಾಧಾಕೃಷ್ಣನ್ ಅವರನ್ನು ರಾಜಭವನದಲ್ಲಿ ಭೇಟಿಯಾದರು. ರಜನಿಕಾಂತ್ ಭಾನುವಾರ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.
https://twitter.com/Indian10000000/status/1692931240804880606?ref_src=twsrc%5Etfw%7Ctwcamp%5Etweetembed%7Ctwterm%5E1692931240804880606%7Ctwgr%5Eb91892775e93601ba4779c8de648f4d2db3487d7%7Ctwcon%5Es1_&ref_url=https%3A%2F%2Ftv9kannada.com%2Fentertainment%2Frajinikanth-touches-yogi-adityanath-feet-netizens-troll-jailer-star-after-video-goes-viral-mdn-649153.html
ಜೈಲರ್ ಸಿನೆಮಾ ಎಂಟು ದಿನಗಳಲ್ಲಿ ಒಟ್ಟು 235.65 ಕೋಟಿ ರೂ. ಕಲೆಕ್ಷನ್ ಮಾಡಿದೆ. ‘ಜೈಲರ್’ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನವನ್ನು ದಾಖಲಿಸಿದೆ. ಈ ಚಿತ್ರದಲ್ಲಿ ಕನ್ನಡದ ಶಿವರಾಜಕುಮಾರ, ನಲಯಾಳಂ ನಟ ಮೋಹನಲಾಲ್, ಜಾಕಿ ಶ್ರಾಫ್, ಪ್ರಿಯಾಂಕಾ ಮೋಹನ, ತಮನ್ನಾ ಭಾಟಿಯಾ, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ ರವಿ ಮತ್ತು ವಿನಾಯಕನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ