ಚಂದ್ರಯಾನ-3 ಚಂದ್ರನ ಮೇಲ್ಮೈ ಸ್ಪರ್ಷಿಸುವ ಕೆಲವೇ ಕ್ಷಣಗಳ ಮೊದಲು ಚಂದ್ರ ಹೇಗೆ ಕಾಣುತ್ತಿತ್ತು ಎಂಬುದರ ವೀಡಿಯೊ ಹಂಚಿಕೊಂಡ ಇಸ್ರೋ | ವೀಕ್ಷಿಸಿ

ನವದೆಹಲಿ: ಆಗಸ್ಟ್ 23ರಂದು ಸಂಜೆ 6:04 IST ಕ್ಕೆ ಭಾರತದ ಬಾಹ್ಯಾಕಾಶ ನೌಕೆ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದ ಐತಿಹಾಸಿಕ ಸ್ಪರ್ಶವನ್ನು ಮಾಡುವ ಮೊದಲು ಲ್ಯಾಂಡರಿಗೆ ಚಂದ್ರ ಹೇಗೆ ಕಾಣುತ್ತಿತ್ತು ಎಂಬ ವೀಡಿಯೊವನ್ನು ಇಸ್ರೋ ಹಂಚಿಕೊಂಡಿದೆ.
ಚಂದ್ರಯಾನ-3, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಮೂರನೇ ಚಂದ್ರನ ಪರಿಶೋಧನಾ ಕಾರ್ಯಾಚರಣೆಯಾಗಿದ್ದು, ಚಂದ್ರನ ದಕ್ಷಿಣ ಧ್ರುವದ ಮೇಲೆ ಮೃದುವಾಗಿ ಇಳಿದಿದೆ. ಹಾಗೂ ಚಂದ್ರನ ದಕ್ಷಿಣ ಧ್ರುವದಲ್ಲಿ ಮೃದುವಾದ ಇಳಿಯುವಿಕೆ ಮಾಡಿದ ಮೊದಲ ದೇಶ ಭಾರತವಾಗಿದೆ. ಸ್ವಯಂಚಾಲಿತ ಲ್ಯಾಂಡಿಂಗ್ ಅನುಕ್ರಮವನ್ನು ಪ್ರಾರಂಭಿಸಿದ ನಂತರ ಚಂದ್ರಯಾನ-3ರ ವಿಕ್ರಂ ಲ್ಯಾಂಡರಿನ ಚಾಲಿತ ಅವರೋಹಣವು ಆರಂಭವಾದ ನಂತರ ಚಂದ್ರನ ಮೇಲ್ಮೈ ಸ್ಪರ್ಷಿಸುವ ಮೊದಲು ಲ್ಯಾಂಡರಿನ ಕ್ಯಾಮರಾದಲ್ಲಿ ಚಂದ್ರ ಹೇಗೆ ಕಾಣುತ್ತಿತ್ತು ಎಂಬುದರ ಹಲವಾರು ಚಿತ್ರಗಳನ್ನು ಮತ್ತು ಲ್ಯಾಂಡಿಂಗ್ ಸೈಟ್‌ನ ಚಿತ್ರವನ್ನು ಸಹ ಇಸ್ರೋ ಹಂಚಿಕೊಂಡಿದೆ.
ಗುರುವಾರ, ಚಂದ್ರಯಾನ-3 ರ ಎಲ್ಲಾ ಚಟುವಟಿಕೆಗಳು ವೇಳಾಪಟ್ಟಿಯಂತೆ ನಡೆದಿದೆ. ಮತ್ತು ಎಲ್ಲಾ ವ್ಯವಸ್ಥೆಗಳು ಸಮರ್ಪಕವಾಗಿದೆ ಎಂದು ಇಸ್ರೋ ಮಿಷನ್ ಅಪ್‌ಡೇಟ್‌ನಲ್ಲಿ ತಿಳಿಸಿದೆ. ಚಂದ್ರಯಾನ-3 ರ ವಿಕ್ರಮ್ ಲ್ಯಾಂಡರ್‌ನ ಹೆಚ್ಚಿನ ಪೇಲೋಡ್‌ಗಳನ್ನು ಆನ್ ಮಾಡಲಾಗಿದೆ, ಪ್ರಗ್ಯಾನ್‌ ರೋವರ್ ಮೊಬಿಲಿಟಿ ಕಾರ್ಯಾಚರಣೆಗಳು ಪ್ರಾರಂಭವಾಗಿದೆ ಮತ್ತು ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿರುವ SHAPE ಪೇಲೋಡ್ ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಇಸ್ರೋ ತಿಳಿಸಿದೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

ಚಂದ್ರನ ಮೇಲೆ ಇಳಿದ ಸುಮಾರು ನಾಲ್ಕು ಗಂಟೆಗಳ ನಂತರ ಪ್ರಗ್ಯಾನ್ ರೋವರ್ ಎಲ್ಲಾ ಚಂದ್ರನ ಧೂಳು ನೆಲೆಗೊಂಡ ಮೇಲೆ ವಿಕ್ರಂ ಲ್ಯಾಂಡರ್‌ನಿಂದ ಯಶಸ್ವಿಯಾಗಿ ಹೊರಬಂತು. ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಎರಡೂ 14 ಭೂಮಿಯ ದಿನಗಳ ಕಾಲ ಚಂದ್ರನ ಮೇಲೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಎರಡು ಬಾಹ್ಯಾಕಾಶ ನೌಕೆಗಳು ಚಂದ್ರನ ಮೇಲ್ಮೈಯ ಧಾತುರೂಪದ ಮತ್ತು ಖನಿಜ ಸಂಯೋಜನೆಯನ್ನು ವಿಶ್ಲೇಷಿಸುವ ಪ್ರಯೋಗಗಳನ್ನು ನಡೆಸುತ್ತವೆ, ಚಂದ್ರನ ದಕ್ಷಿಣ ಧ್ರುವದಲ್ಲಿ ಭೂಕಂಪನ ಚಟುವಟಿಕೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತವೆ ಮತ್ತು ಪ್ಲಾಸ್ಮಾ ಪರಿಸರವನ್ನು ಅನ್ವೇಷಿಸುತ್ತವೆ.

ಚಂದ್ರಯಾನ-3 ಚಂದ್ರನ ಮೇಲೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಗುರುವಾರ ಹೇಳಿದ್ದಾರೆ, ಚಂದ್ರನ ಸುತ್ತಲಿನ ವಾತಾವರಣದ ಅನುಪಸ್ಥಿತಿಯು ಚಂದ್ರಯಾನ-3 ದಕ್ಷಿಣ ಧ್ರುವದಿಂದ ಹೊರತಾದ ಬೇರೆ ಪ್ರದೇಶಕ್ಕೆ ಹೊಡೆದುಕೊಳ್ಳುವ ಸಾಧ್ಯತೆಯಿದೆ. ಅಲ್ಲದೆ, ಥರ್ಮಲ್ ಸಮಸ್ಯೆ ಮತ್ತು ಸಂಪರ್ಕ ಕಡಿತದ ಸಮಸ್ಯೆ ಕೂಡ ಇತ್ತು ಎಂದು ಹೇಳಿದ್ದಾರೆ.
ಭಾರತದ ಮೊದಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆದಿತ್ಯ-ಎಲ್ 1 ಅನ್ನು ಈ ವರ್ಷದ ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಸೋಮನಾಥ ಹೇಳಿದ್ದಾರೆ. ಗಗನಯಾನ ಕಾರ್ಯಕ್ರಮದ ಮೊದಲ ಹಂತವು ಸಿಬ್ಬಂದಿಯಿಲ್ಲದ ಪರೀಕ್ಷಾ ಹಾರಾಟವಾಗಿದ್ದು, ಆಗಸ್ಟ್ ಅಂತ್ಯದಲ್ಲಿ ಅಥವಾ ಸೆಪ್ಟೆಂಬರ್ ಆರಂಭದಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement