‘ಭಾರತದ ಜೊತೆ ಕೆನಡಾ ಖಾಸಗಿಯಾಗಿ ಮಾತನಾಡಲು ಬಯಸುತ್ತದೆ…’: ತನ್ನ ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತ ಸೂಚಿಸಿದೆ ಎಂಬ ವರದಿ ನಂತರ ಕೆನಡಾ ಹೇಳಿಕೆ

ಒಟ್ಟಾವಾ : ಭಾರತದಿಂದ ತನ್ನ 41 ರಾಜತಾಂತ್ರಿಕರನ್ನು ವಾಪಸ್‌ ಕರೆಸಿಕೊಳ್ಳುವಂತೆ ಭಾರತವು ಕೆನಡಾಕ್ಕೆ ಸೂಚಿಸಿದೆ ಎಂಬ ವರದಿಯ ನಂತರ, ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು, ರಾಜತಾಂತ್ರಿಕ ಬಿಕ್ಕಟ್ಟನ್ನು ಪರಿಹರಿಸಲು ಕೆನಡಾವು ಭಾರತದೊಂದಿಗೆ ಖಾಸಗಿ ಮಾತುಕತೆಗಳನ್ನು ಬಯಸುತ್ತದೆ ಎಂದು ಹೇಳಿದ್ದಾರೆ.
ಒಟ್ಟಾವಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆನಡಾದ ವಿದೇಶಾಂಗ ಸಚಿವೆ ಮೆಲಾನಿ ಜೋಲಿ ಅವರು, ಕೆನಡಾ ಸರ್ಕಾರವು ತನ್ನ ಭಾರತೀಯ ಸಹವರ್ತಿಗಳೊಂದಿಗೆ ನಿಕಟ ಸಂಪರ್ಕದಲ್ಲಿದೆ ಎಂದು ಪ್ರತಿಪಾದಿಸಿದರು ಮತ್ತು ಪ್ರದಾನಿ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರವು ಭಾರತದ ಜೊತೆ “ಖಾಸಗಿ” ತೊಡಗಿಸಿಕೊಳ್ಳಲು ಬಯಸುತ್ತದೆ ಎಂದು ಹೇಳಿದರು.
ನಾವು ಭಾರತ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ಕೆನಡಾದ ರಾಜತಾಂತ್ರಿಕರ ಸುರಕ್ಷತೆಯನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ ಮತ್ತು ಖಾಸಗಿಯಾಗಿ ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತೇವೆ, ಏಕೆಂದರೆ ಖಾಸಗಿಯಾಗಿದ್ದಾಗ ರಾಜತಾಂತ್ರಿಕ ಸಂಭಾಷಣೆಗಳು ಉತ್ತಮವೆಂದು ನಾವು ಭಾವಿಸುತ್ತೇವೆ,” ಎಂದು ಅವರು ಹೇಳಿದರು.

ಗಮನಾರ್ಹವೆಂದರೆ, ಜುಲೈ 19 ರಂದು ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರು ಭಾಗಿಯಾಗಿದ್ದಾರೆ ಎಂದು ಕೆನಡಾಕ್ಕೆ “ನಂಬಲರ್ಹವಾದ ಮಾಹಿತಿ” ಇದೆ ಎಂದು ಭಾರತದ ವಿರುದ್ಧ ಪ್ರಧಾನಿ ಟ್ರುಡೊ ಅವರು ದೇಶದ ಸಂಸತ್ತಿನಲ್ಲಿ ಆರೋಪ ಮಾಡಿದ ನಂತರ ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಜೋರಾಯಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಕೆನಡಾ ಹೊರಹಾಕಿದ್ದಕ್ಕೆ ಪ್ರತಿಕ್ರಿಯೆಯಾಗಿ, ಭಾರತ ಸರ್ಕಾರವು ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಿದೆ.
ಈ ಆರೋಪಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸಾರಾಸಗಟಾಗಿ ತಿರಸ್ಕರಿಸಿದೆ, ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು, ಈ ಆರೋಪಗಳನ್ನು “ಆಧಾರರಹಿತ” ಮತ್ತು “ರಾಜಕೀಯ ಪ್ರೇರಿತ” ಎಂದು ಕರೆದರು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

ಟ್ರೂಡೊ ಅವರ ಸ್ಫೋಟಕ ಆರೋಪಗಳ ನಂತರ ಮೊದಲ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುವಾಗ ಅರಿಂದಮ್ ಬಾಗ್ಚಿ ಅವರು, ಕೆನಡಾ ತನ್ನ ಸೌತ್ ಬ್ಲಾಕ್ ರಾಯಭಾರ ಕಚೇರಿಯಲ್ಲಿ ಹೆಚ್ಚುವರಿ ಸಿಬ್ಬಂದಿಗೆ ಅವಕಾಶ ಕಲ್ಪಿಸಿದೆ ಎಂಬ ಅಂಶವನ್ನು ಉಲ್ಲೇಖಿಸಿ ಭಾರತವು ರಾಜತಾಂತ್ರಿಕ ಸಿಬ್ಬಂದಿಯಲ್ಲಿ ಸಮಾನನವಾದ ಪ್ರತಿನಿಧೀತ್ವವನ್ನು ಬಯಸುತ್ತದೆ ಎಂದು ಬಾಗ್ಚಿ ಹೇಳಿದ್ದಾರೆ.
ಮಂಗಳವಾರ ಲಂಡನ್ನಿನ ಫೈನಾನ್ಷಿಯಲ್ ಟೈಮ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಭಾರತವು ಕೆನಡಾದ 41 ರಾಜತಾಂತ್ರಿಕರನ್ನು ನವದೆಹಲಿಯಿಂದ ವಾಪಸ್‌ ಕರೆಸಿಕೊಳ್ಳುವಂತೆ ಕೆನಡಾಕ್ಕೆ ಸೂಚಿಸಿದೆ ಮತ್ತು ಕರೆಸಿಕೊಳ್ಳಲು ಕೆನಡಾ ವಿಫಲವಾದರೆ, ಭಾರತವು ಕೆನಡಾದ ರಾಜತಾಂತ್ರಿಕರಿಗೆ ಭದ್ರತೆಯನ್ನು ನೀಡುವುದಿಲ್ಲ ಎಂದು ಹೇಳಿದೆ. ಈ ಹೇಳಿಕೆಯನ್ನು ಸಂಬಂಧಪಟ್ಟ ಯಾವುದೇ ದೇಶಗಳು ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಒಪ್ಪಿಕೊಂಡಿಲ್ಲ.

ಭಾರತದ ಜೊತೆ ರಚನಾತ್ಮಕ ಸಂಬಂಧ ನಮಗೆ ಮುಖ್ಯ: ಟ್ರುಡೊ
ಏತನ್ಮಧ್ಯೆ, ಕೆನಡಾವು ಭಾರತದ ಜೊತೆ ಉದ್ವಿಗ್ನತೆ “ಹೆಚ್ಚಿಸಲು ನೋಡುತ್ತಿಲ್ಲ” ಮತ್ತು ರಚನಾತ್ಮಕ ಸಂಬಂಧಗಳನ್ನು ಹೊಂದಲು ಬಯಸುವುದಾಗಿ ಕೆನಡಾ ಪ್ರಧಾನಿ ಟ್ರುಡೊ ಮಂಗಳವಾರ ಹೇಳಿದ್ದಾರೆ. “ನಾನು ಹೇಳಿದಂತೆ ನಾವು ಸಂಬಂಧ ಉಲ್ಬಣಗೊಳಿಸಲು ನೋಡುತ್ತಿಲ್ಲ, ಈ ಅತ್ಯಂತ ಕಷ್ಟಕರ ಸಮಯದಲ್ಲಿ ಭಾರತದೊಂದಿಗೆ ರಚನಾತ್ಮಕ ಸಂಬಂಧಗಳನ್ನು ಮುಂದುವರಿಸುವಲ್ಲಿ ನಾವು ಮುಖ್ಯವಾದ ಕೆಲಸವನ್ನು ಮಾಡಲಿದ್ದೇವೆ” ಎಂದು ಟ್ರೂಡೊ ಹೇಳಿದ್ದಾರೆ ಎಂದು CBC ನ್ಯೂಸ್ ಉಲ್ಲೇಖಿಸಿದೆ. ಒಟ್ಟಾವಾ ಹೊಸ ದೆಹಲಿಯೊಂದಿಗೆ “ಅತ್ಯಂತ ಸವಾಲಿನ ಸಮಯವನ್ನು” ಎದುರಿಸುತ್ತಿದೆ ಎಂದು ಕೆನಡಾದ ಪ್ರಧಾನಿ ಒಪ್ಪಿಕೊಂಡರು.
ಭಾರತೀಯ ಸರ್ಕಾರದೊಂದಿಗೆ ಕೆಲಸ ಮಾಡಲು ರಾಜತಾಂತ್ರಿಕರನ್ನು ಹೊಂದುವುದು ನಮಗೆ ಮುಖ್ಯವಾಗಿದೆ” ಎಂದು ಅವರು ಹೇಳಿದರು. ತಮ್ಮ ಸರ್ಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತಿದೆ ಮತ್ತು ಭಾರತದೊಂದಿಗೆ “ಜವಾಬ್ದಾರಿಯುತವಾಗಿ ಮತ್ತು ರಚನಾತ್ಮಕವಾಗಿ” ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂದು ಟ್ರೂಡೊ ಪ್ರತಿಪಾದಿಸಿದರು.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement