ವಿಜಯಪುರ: ರಸ್ತೆ ಬದಿ ಕುಳಿತಿದ್ದವರ ಮೇಲೆ ವಾಹನ ಹರಿದು ನಾಲ್ವರು ಸ್ಥಳದಲ್ಲೇ ಸಾವು

ವಿಜಯಪುರ: ನಗರದ ಹೊರವಲಯದ ಸೋಲಾಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ 52ರ ವಿಜಯಪುರ ಟೋಲ್ ನಾಕಾ ಬಳಿ ಟೋಲ್‌ಗೇಟ್‌ನ ಟ್ರಕ್‌ ಬೇ ಬಳಿ ಡಿವೈಡರ್‌ ಮೇಲೆ ಕೂತಿದ್ದ ನಾಲ್ವರ ಮೇಲೆ ಅಪರಿಚಿತ ವಾಹನ ಹರಿದು ನಾಲ್ವರು ಸ್ಥಳದಲ್ಲೇ ಸಾವಿಗೀಡಾದ ಘಟನೆ ವಿಜಯಪುರದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಮೃತರನ್ನು ವಿಜಯಪುರ ವಜ್ರಹನುಮಾನ ನಗರ ನಿವಾಸಿಗಳಾದ ಪ್ರವೀಣ ಪಾಟೀಲ(31) ಶಿವಾನಂದ ಚೌಧರಿ ( 24), ಈರಣ್ಣ ಕೋಲ್ಹಾರ( 26) ಮತ್ತು ಸುನೀಲ ಖಾನಾಪುರ ( 26) ಎಂದು ಗುರುತಿಸಲಾಗಿದೆ. ಇವರು ಧಾಬಾದಲ್ಲಿ ಊಟ ಮುಗಿಸಿ ರಾಷ್ಟ್ರೀಯ ಹೆದ್ದಾರಿ 50ರ ಟೋಲ್‌ಗೇಟ್‌ ಟ್ರಕ್‌ ಬೇ ಬಳಿಯ ಡಿವೈಡರ್‌ ಮೇಲೆ ಕುಳಿತಿದ್ದರು, ಈ ವೇಳೆ ಬಂದ ಲಾರಿಯೊಂದು ಯುವಕರ ಮೇಲೆ ಹರಿದಿದ್ದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಲಾರಿ ಹಾಯಿಸಿಕೊಂಡು ಚಾಲಕ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಚಾಲಕ ಕಂಟೇನರ್ ಲಾರಿಯನ್ನು ವಿಜಯಪುರ ಕಡೆಯಿಂದ ಆಲಮಟ್ಟಿ ಕಡೆಗೆ ವೇಗವಾಗಿ ಚಲಾಯಿಸಿಕೊಂಡು ಬಂದು, ಹೆದ್ದಾರಿ ಪಕ್ಕದಲ್ಲಿ ಎರಡು ಬೈಕುಗಳಲ್ಲಿ ನಿಲ್ಲಿಸಿಕೊಂಡು ಮಾತನಾಡುತ್ತಾ ನಿಂತಿದ್ದವರ ಮೇಲೆ ಹತ್ತಿಸಿಕೊಂಡು ಹೋಗಿದ್ದಾನೆ. ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಈ ಸಂಬಂಧ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಬೈಲಹೊಂಗಲ ಶಾಸಕರ ಕಾರು ಅಪಘಾತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement