ಸಂಸತ್ತಿನಲ್ಲಿ ಭದ್ರತಾ ಉಲ್ಲಂಘನೆ ಪ್ರಕರಣ: ನಾಲ್ವರು ಆರೋಪಿಗಳಿಗೆ 7 ದಿನಗಳ ಕಾಲ ಪೊಲೀಸ್ ಕಸ್ಟಡಿ

ನವದೆಹಲಿ : ಭಾರೀ ಭದ್ರತಾ ಲೋಪದ ನಂತರ ಬುಧವಾರ ಸಂಸತ್ತಿನಲ್ಲಿ ಬಂಧಿತರಾದ ನಾಲ್ವರನ್ನು ವಿಚಾರಣೆಗಾಗಿ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಲೋಕಸಭೆಯೊಳಗೆ ನುಗ್ಗಿ ಸಿಕ್ಕಿಬಿದ್ದಿರುವ ಸಾಗರ ಶರ್ಮಾ ಮತ್ತು ಡಿ ಮನೋರಂಜನ್ ಮತ್ತು ಸಂಸತ್ತಿನ ಹೊರಗೆ ಬಂಧಿತರಾದ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಅವರನ್ನು ವಿವರವಾಗಿ ಪ್ರಶ್ನಿಸಬೇಕಾಗಿದೆ ಎಂದು ದೆಹಲಿ ಪೊಲೀಸರು ಪ್ರತಿಪಾದಿಸಿದ್ದಾರೆ.
ಇಬ್ಬರು ವ್ಯಕ್ತಿಗಳು ಲೋಕಸಭೆಗೆ ಪ್ರವೇಶಿಸಿ ಅವರು ಡಬ್ಬಿಗಳಿಂದ ದಟ್ಟವಾದ ಹಳದಿ ಹೊಗೆಯನ್ನು ಹೊರಹಾಕಿ ಭದ್ರತಾ ಉಲ್ಲಂಘನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ನಂತರ ಬಂಧಿಸಲಾಯಿತು.
ಲಕ್ನೋದ ಸಾಗರ ಶರ್ಮಾ ಮತ್ತು ಮೈಸೂರಿನ ಡಿ ಮನೋರಂಜನ ಸಂಸತ್ತಿನ ಒಳಗೆ ಹೊಗೆ ಡಬ್ಬಿಗಳನ್ನು ಅಕ್ರಮವಾಗಿ ಒಯ್ದಿದ್ದರು. ಲೋಕಸಭೆಯೊಳಗೆ ಹರಡಿದ ದಟ್ಟವಾದ ಹಳದಿ ಹೊಗೆಯು ಸ್ವಲ್ಪ ಸಮಯದವರೆಗೆ ಭಯವನ್ನು ಉಂಟುಮಾಡಿತು. ಸಂಸದರು ಮತ್ತು ಸಂಸತ್ತಿನ ಭದ್ರತಾ ಸಿಬ್ಬಂದಿ ಇಬ್ಬರನ್ನು ಶೀಘ್ರದಲ್ಲೇ ಹಿಡಿದರು.

ವೀಕ್ಷಕರ ಪಾಸ್‌ಗಳನ್ನು ಪಡೆಯಲು ಸಾಧ್ಯವಾಗದೆ ಉಳಿದ ಇಬ್ಬರು ಸಂಸತ್ತಿನ ಹೊರಗೆ ಹೊಗೆ ಹೊಗೆ ಡಬ್ಬಿಗಳನ್ನು ಹಿಡಿದು ಘೋಷಣೆಗಳನ್ನು ಕೂಗುತ್ತಿದ್ದರು.ಎಲ್ಲಾ ನಾಲ್ವರ ವಿರುದ್ಧ ಕಠಿಣ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಅವರ ಸಹಚರ ವಿಶಾಲ್ ಶರ್ಮಾನನ್ನು ಸಹ ಬಂಧಿಸಲಾಗಿದೆ. ಯಾಕೆಂದರೆ ಆರೋಪಿಗಳು ಸಂಸತ್ತನ್ನು ತಲುಪುವ ಮೊದಲು ಗುರುಗ್ರಾಮದಲ್ಲಿರುವ ಆತನ ಮನೆಯಲ್ಲಿ ತಂಗಿದ್ದರು. ಆಪಾದಿತ ಮಾಸ್ಟರ್ ಮೈಂಡ್ ಲಲಿತ್ ಝಾ ಪರಾರಿಯಾಗಿದ್ದಾನೆ.
ಸಂದರ್ಶಕರ ಪಾಸ್ ಪಡೆಯಲು ಸಾಧ್ಯವಾಗದೆ ಝಾ ಸಂಸತ್ತಿನ ಹೊರಗೆ ಉಳಿದುಕೊಂಡಿದ್ದ ಮತ್ತು ನೀಲಂ ಮತ್ತು ಅಮೋಲ್ ಶಿಂಧೆ ಅವರ ‘ಪ್ರತಿಭಟನೆ’ಯನ್ನು ಚಿತ್ರೀಕರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನು ಆತ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸೋಮವಾರಪೇಟೆ : ವಿದ್ಯಾರ್ಥಿನಿ ತಲೆ ಕಡಿದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್

ಇಡೀ ಕಾರ್ಯಾಚರಣೆಯು ಭಯೋತ್ಪಾದಕ ದಾಳಿಯನ್ನು ಹೋಲುತ್ತದೆ ಎಂದು ನ್ಯಾಯಾಲಯದಲ್ಲಿ ಪೊಲೀಸರು ಪ್ರತಿಪಾದಿಸಿದರು. “ಘಟನೆಯ ಉದ್ದೇಶ ಕೇವಲ ಒಬ್ಬರ ಅಭಿಪ್ರಾಯವನ್ನು ವ್ಯಕ್ತಪಡಿಸಲು ಅಥವಾ ಕೆಲವು ಪ್ರಮುಖ ಘಟನೆಗಳನ್ನು ನಡೆಸುವುದೇ? ಈ ಸಂಪೂರ್ಣ ವಿಷಯದಲ್ಲಿ ಯಾವುದೇ ಭಯೋತ್ಪಾದಕ ಸಂಘಟನೆಯು ಭಾಗಿಯಾಗಿದೆಯೇ ಎಂಬುದನ್ನು ತನಿಖೆ ಮಾಡಬೇಕು” ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು.
ಆರೋಪಿಗಳು ತಮ್ಮ ಪಾದರಕ್ಷೆಯಲ್ಲಿ ಹೊಗೆ ಡಬ್ಬಿಗಳಲ್ಲಿ ಅಕ್ರಮವಾಗಿ ಒಯ್ದಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಆರೋಪಿ ಲಕ್ನೋದಿಂದ ಎರಡು ಜೊತೆ ಶೂಗಳನ್ನು ಖರೀದಿಸಿ ಇಲ್ಲಿಗೆ ತಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನಿಂದ ಡಬ್ಬಿಗಳನ್ನು ಖರೀದಿಸಲಾಗಿದೆ. ಆರೋಪಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲು ಬಯಸಿದ್ದ ಕರಪತ್ರಗಳನ್ನು ಹೊತ್ತೊಯ್ಯುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶೇಷ ನ್ಯಾಯಾಧೀಶ ಹರ್ದೀಪ್ ಕೌರ್ ಮುಂದೆ ಆರೋಪಿಗಳನ್ನು ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ತನಿಖೆಗಾಗಿ ಅವರನ್ನು ಮುಂಬೈ ಮತ್ತು ಲಕ್ನೋಗೆ ಕರೆದೊಯ್ಯುವ ಅಗತ್ಯವನ್ನು ಉಲ್ಲೇಖಿಸಿ 15 ದಿನಗಳ ಕಸ್ಟಡಿಗೆ ಕೋರಿದ್ದರು. ಆದರೆ ನ್ಯಾಯಾಧೀಶರು ಒಂದು ವಾರ ಕಾಲಾವಕಾಶ ನೀಡಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement