ಶಿರಸಿ: ಸಾಧಕ ಕೃಷಿಕರಿಗೆ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ

ಶಿರಸಿ: ಸಾಧಕ ರೈತರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ವಿಜಯ ಕರ್ನಾಟಕ ಪತ್ರಿಕೆಯ ಕಾರ್ಯಕ್ರಮ ನಗರದ ಎಪಿಎಂಸಿ ಮಾರುಕಟ್ಟೆ ಆವರಣದ ಪೂಗ ಭವನದಲ್ಲಿ ಬುಧವಾರ ನಡೆಯಿತು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ, ಕುಮಟಾ ಮತ್ತು ಅಂಕೋಲಾ ತಾಲೂಕಿನ 6 ಮಂದಿ ಕೃಷಿ ಸಾಧಕರಿಗೆ ಸೂಪರ್ ಸ್ಟಾರ್ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿರಸಿಯ ರಾಮಚಂದ್ರ ಹೆಗಡೆ ಸಾಲ್ಕಣಿ, ಸಿದ್ದಾಪುರದ ಮಂಜುನಾಥ ಹೆಗಡೆ ಗೋರವಿಕೈ, ಯಲ್ಲಾಪುರದ ಎನ್ ಕೆ ಭಟ್ಟ ಆಗ್ಗಾಶಿಕುಂಬ್ರಿ, ಅಂಕೋಲಾದ ಕೀರಾ ಕೃಷ್ಣ ಹರಿಕಂತ್ರ, ಕುಮಟಾದ ಊರುಕೇರಿ ನಾರಾಯಣ ವೈದ್ಯ, ಮುಂಡಗೋಡದ ರಮೇಶ ಭಜಂತ್ರಿ ಅವರು ಪ್ರಶಸ್ತಿ ಸ್ವೀಕರಿಸಿದರು.

ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿ, ಪ್ರತಿಯೊಬ್ಬರಿಗೂ ಬದುಕು ನಡೆಸುವುದಕ್ಕೆ ಕೃಷಿಕರ ಪರಿಶ್ರಮದ ದುಡಿಮೆ, ಆಹಾರ ಬೆಳೆಗಳ ಉತ್ಪಾದನೆ ಅನಿವಾರ್ಯವಾಗಿದೆ. ದೇಶದ ಜಿಡಿಪಿ ಬೆಳವಣಿಗೆಯಲ್ಲಿ ಕೂಡ ಕೃಷಿ ತೋಟಗಾರಿಕೆಯ ಆದಾಯದ ಪಾಲು ಮಹತ್ವದ್ದಾಗಿದೆ. ಅದಕ್ಕಾಗಿ ರೈತರ ಸಂಕಷ್ಟಗಳಿಗೆ ಸರ್ಕಾರಗಳು ಸ್ಪಂದಿಸಬೇಕು ಎಂದು ಅವರು ಹೇಳಿದರು.

ಧಾರವಾಡ ಹಾಲು ಒಕ್ಕೂಟದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ, ಉದ್ಯಮಿ ಉಪೇಂದ್ರ ಪೈ, ಉತ್ತರ ಕನ್ನಡ ಜಿಲ್ಲಾ ವಾಣಿಜ್ಯೋದ್ಯಮ ಕೃಷಿ ಸಂಸ್ಥೆ ಅಧ್ಯಕ್ಷ ಕೆ.ಬಿ. ಲೋಕೇಶ ಹೆಗಡೆ, ಶಿರಸಿ ಅಡಿಕೆ ಕಾಳು ಮೆಣಸು ಯಾಲಕ್ಕಿ ವರ್ಷಗಳ ಸಂಘದ ಅಧ್ಯಕ್ಷ ಸತೀಶ ಭಟ್ಟ ಮೊದಲಾದವರು ಉಪಸ್ಥಿತರಿದ್ದರು. ವಿಜಯ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕ ಬಂದು ಕುಲಕರ್ಣಿ ಸ್ವಾತಿಸಿದರು. ಪತ್ರಿಕೆಯ ಶಿರಸಿಯ ವರದಿಗಾರ ವಿರೂಪಾಕ್ಷ ಹೆಗಡೆ ಕಚೀಕೈ ಕಾರ್ಯಕ್ರಮ ನಿರೂಪಿಸಿದರು.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement