ಚಾಮರಾಜನಗರ: ಚಾಮರಾಜನಗರ: ಜನ್ಮದಿನ, ಮದುವೆ ವಾರ್ಷಿಕೋತ್ಸವ ಮುಂತಾದವುಗಳಿಗೆ ಶುಭಾಶಯ ಕೋರುವುದು ಸಾಮಾನ್ಯ. ಆದರೆ, ಗುರುವಾರ (ಮಾರ್ಚ್ ೧)ದಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗೆ ಶುಭ ಕೋರಿ ಜಯಶಾಲಿಯಾಗಿ ಬಾ ಎಂದು ಆತನಿಗೆ ಹಾರೈಸಿ ಫ್ಲೆಕ್ಸ್ ಹಾಕಿದ ಅಪರೂಪದ ವಿದ್ಯಮಾನ ಬೆಳಕಿಗೆ ಬಂದಿದೆ.
ಈ ಶುಭಾಶಯ ಕೋರುವ ಫ್ಲೆಕ್ಸ್ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಮೊದಲ ದಿನ ಕನ್ನಡ ಪರೀಕ್ಷೆ ಬರೆಯಲು ಹೊರಟವನಿಗೆ ಶುಭಾಶಯ ಕೋರಿದೆ. ಆದರೆ ಅದು ಆತನ ಕಾಲೆಳೆಯುವ ರೀತಿಯಲ್ಲಿಯೂ ಇದೆ.
ಚಾಮರಾಜನಗರದ ಜೋಡಿ ರಸ್ತೆ ಸಮೀಪ ಕಾಂಪೌಂಡ್ ಒಂದಕ್ಕೆ ಯುವಕನ ಫೋಟೋ ಹಾಕಿ “ಸತತ 4ನೇ ಬಾರಿ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗೆ ಶುಭಾಶಯಗಳು ಎಂದು ಕೋರಿದ್ದಾರೆ. ಜೊತೆಗೆ, ಫೋಟೋ ಕೆಳಗಡೆ ಬೆಳ್ಳುಳ್ಳಿ, ಕಬಾಬ್ ಎಂದು ಬರೆಯಲಾಗಿದೆ. ನಗರದಲ್ಲಿ ಶುಕ್ರವಾರ ಕಂಡು ಬಂದ ಈ ಫ್ಲೆಕ್ಸ್ ಅನೇಕರ ಗಮನ ಸೆಳೆಯಿತು.
ಚಾಮರಾಜನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಫ್ಲೆಕ್ಸ್ ಅಳವಡಿಸಲಾಗಿತ್ತು.
ಸತತ 4 ನೇ ಬಾರಿ ಕನ್ನಡ ಪರೀಕ್ಷೆ ಬರೆಯುತ್ತಿರುವ ಶ್ರೀಯುತ ಜೀವನ ಅವರಿಗೆ ಶುಭಾಶಯಗಳು ಎಂದು ಬರೆಯಲಾಗಿದೆ. ಸ್ನೇಹಿತನ ಫೋಟೊ ಹಾಕಿ. ಇತ್ತೀಚೆಗೆ ಟ್ರೆಂಡ್ ಆಗಿರುವ ಬೆಳ್ಳುಳ್ಳಿ… ಕಬಾಬ್ ಎಂಬ ಶೀರ್ಷಿಕೆ ನೀಡಲಾಗಿದೆ. ನಮ್ ಮನ್ಸು ನಮ್ಗೆ ಒಳ್ಳೆದ್ ಮಾಡಿದ್ರೆ, ದೇವ್ರು ಈ ಎಕ್ಸಾಮ್ ಎಲ್ಲಾ ಏನಿಕ್ಕೆ ಎಂಬ ಒಕ್ಕಣೆಯೂ ಫ್ಲೆಕ್ಸ್ನಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಫ್ಲೆಕ್ಸ್ ಫೋಟೊ ಹರಿದಾಡುತ್ತಿದೆ. ಫ್ಲೆಕ್ಸ್ ಹಾಕಿರುವವರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ