ಲೋಕಸಭೆ ಚುನಾವಣೆ 2024 : ಬಿಜೆಪಿ ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ 33 ಹಾಲಿ ಸಂಸದರಿಗೆ ಕೊಕ್‌…!

ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ 195 ಅಭ್ಯರ್ಥಿಗಳ ಹೆಸರುಗಳೊಂದಿಗೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಅದರಲ್ಲಿ 33 ಹಾಲಿ ಸಂಸದರಿಗೆ ಟಿಕೆಟ್‌ ನೀಡಿಲ್ಲ…!
ಪಟ್ಟಿಯಲ್ಲಿ ಬಿಜೆಪಿ ಅಸ್ಸಾಂನ 11 ಲೋಕಸಭಾ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಅವರಲ್ಲಿ ಆರು ಅಭ್ಯರ್ಥಿಗಳು ಹಾಲಿ ಸಂಸದರಾಗಿದ್ದರೆ ಉಳಿದ ಐವರು ಹೊಸ ಮುಖಗಳಾಗಿವೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ರಾಜದೀಪ ರಾಯ್ ಅವರು ಗೆದ್ದ ಸಿಲ್ಚಾರ್ ಲೋಕಸಭಾ ಕ್ಷೇತ್ರದಿಂದ ಪರಿಮಲ್ ಸುಕ್ಲಬೈಧ್ಯ ಅವರನ್ನು ಪಕ್ಷವು ಕಣಕ್ಕಿಳಿಸಿದೆ. ಪ್ರಸ್ತುತ ಬಿಜೆಪಿ ಸಂಸದ ಹೋರೆನ್ ಸಿಂಗ್ ಬೇ ಹೊಂದಿರುವ ಸ್ವಾಯತ್ತ ಜಿಲ್ಲೆ (ST) ಸ್ಥಾನದಿಂದ ಪಕ್ಷದ ಅಭ್ಯರ್ಥಿ ಅಮರ್ ಸಿಂಗ್ ಟಿಸ್ಸೊ ಸ್ಪರ್ಧಿಸಲಿದ್ದಾರೆ. ಬಿಜುಲಿ ಕಲಿತಾ ಮೇಧಿ ಅವರು ರಾಣಿ ಓಜಾ ಅವರ ಹಿಡಿತದಲ್ಲಿರುವ ಗುವಾಹತಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. 2019 ರಲ್ಲಿ ಪಲ್ಲಬ ಲೋಚನ ದಾಸ್ ಗೆದ್ದಿದ್ದ ತೇಜಪುರ ಲೋಕಸಭಾ ಕ್ಷೇತ್ರದಿಂದ ರಂಜಿತ್ ದತ್ತಾ ಸ್ಪರ್ಧಿಸಲಿದ್ದಾರೆ.
ಹಾಲಿ ಸಂಸದ ರಾಮೇಶ್ವರ ತೇಲಿ ಅವರನ್ನು ಕೈಬಿಟ್ಟಿರುವ ಬಿಜೆಪಿ ದಿಬ್ರುಗಢ ಕ್ಷೇತ್ರದಿಂದ ಕೇಂದ್ರ ಸಚಿವ ಸರ್ಬಾನಂದ್ ಸೋನೊವಾಲ್ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದೆ.

ಛತ್ತೀಸ್‌ಗಢದ 11 ಸ್ಥಾನಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ನಾಲ್ಕು ಹೊಸ ಮುಖಗಳು…
ಜಾಂಜಗೀರ್ ಚಂಪಾ (ಎಸ್‌ಸಿ) ಕ್ಷೇತ್ರದಿಂದ ಹಾಲಿ ಸಂಸದ ಗುಹರಾಮ ಅಜ್ಗಲ್ಲಿ ಬದಲಿಗೆ ಪಕ್ಷದ ಅಭ್ಯರ್ಥಿ ಕಮಲೇಶ ಜಂಗ್ಡೆ ಅವರು ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ರಾಯ್ಪುರದಿಂದ ಬಿಜೆಪಿಯ ಹಿರಿಯ ನಾಯಕ ಬ್ರಿಜಮೋಹನ ಅಗರವಾಲ್ ಕಣಕ್ಕೆ ಇಳಿಯಲಿದ್ದಾರೆಯೇ ಹೊರತು 2019ರಲ್ಲಿ ಗೆದ್ದಿರುವ ಸುನಿಲಕುಮಾರ ಸೋನಿ ಅಲ್ಲ. ರಾಜ್ಯದ ಮಹಾಸಮುಂಡ್ ಕ್ಷೇತ್ರದಿಂದ, ಹಾಲಿ ಸಂಸದ ಚುನ್ನಿ ಲಾಲ್ ಸಾಹು ಬದಲಿಗೆ ಬಿಜೆಪಿ ಅಭ್ಯರ್ಥಿ ರೂಪಕುಮಾರಿ ಚೌಧರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.ಕಂಕೇರ್ (ST) ಸ್ಥಾನಕ್ಕೆ ಹಾಲಿ ಸಂಸದ ಮೋಹನ ಮಾಂಡವಿ ಬದಲಿಗೆ ಬಿಜೆಪಿ ಭೋಜರಾಜ ನಾಗ್ ಅವರಿಗೆ ಟಿಕೆಟ್‌ ನೀಡಲಾಗಿದೆ.

ಗುಜರಾತಿನಲ್ಲಿ ಐದು ಹಾಲಿ ಸಂಸದರಿಗೆ ಕೊಕ್‌…
ಬನಸ್ಕಾಂತ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ಪ್ರಭಾತಭಾಯ್ ಸಾವಭಾಯಿ ಪಟೇಲ್ ಬದಲಿಗೆ ಪಕ್ಷದ ಅಭ್ಯರ್ಥಿ ರೇಖಾಬೆನ್ ಹಿತೇಶಭಾಯಿ ಚೌಧರಿ ಸ್ಪರ್ಧಿಸಲಿದ್ದಾರೆ.
ಅಹಮದಾಬಾದ್ ಪಶ್ಚಿಮ (SC) ಸ್ಥಾನದಿಂದ, ಮೂರು ಅವಧಿಯ ಸಂಸದ ಕಿರಿತ್ ಸೋಲಂಕಿ ಅವರ ಬದಲಿಗೆ ದಿನೇಶ ಭಾಯ್ ಮಕ್ವಾನಾ ಅವರಿಗೆ ಟಿಕೆಟ್‌ ನೀಡಲಾಗಿದೆ. ರಾಜಕೋಟ್ ಲೋಕಸಭಾ ಸ್ಥಾನಕ್ಕೆ ಬಿಜೆಪಿಯು ಹಾಲಿ ಸಂಸದ ಮೋಹನಭಾಯ್ ಕಲ್ಯಾಣಜಿ ಕುಂದರಿಯಾ ಅವರಿಗೆ ಟಿಕೆಟ್‌ ನಿರಾಕರಿಸಿದ್ದು, ಕೇಂದ್ರ ಸಚಿವ ಪರಶೋತ್ತಮ ರೂಪಾಲಾ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದ್ದಾರೆ.
ಪ್ರಸ್ತುತ ಪಕ್ಷದ ಸಂಸದ ರಮೇಶ್‌ಭಾಯ್ ಲವಜಿಭಾಯಿ ಧದುಕ್ ಅವರ ಪೋರಬಂದರ ಕ್ಷೇತ್ರದಲ್ಲಿ ಪಕ್ಷವು ಕೇಂದ್ರ ಸಚಿವ ಮನ್ಸುಖ ಮಾಂಡವಿಯಾ ಅವರಿಗೆ ಟಿಕೆಟ್‌ ನೀಡಿದೆ. ಗುಜರಾತಿನ ಪಂಚಮಹಲ್ ಕ್ಷೇತ್ರದಿಂದ ಹಾಲಿ ಸಂಸದ ರತನ ಸಿನ್ಹ ಮಗನ ಸಿನ್ಹ ರಾಥೋಡ್ ಬದಲಿಗೆ ರಾಜಪಾಲ ಸಿನ್ಹ ಮಹೇಂದ್ರಸಿಂಗ ಜಾಧವ ಅವರಿಗೆ ಟಿಕೆಟ್‌ ನೀಡಲಾಗಿದೆ.
ಜಾರ್ಖಂಡದಲ್ಲಿ, ಬಿಜೆಪಿಯು ಮನೀಶ ಜೈಸ್ವಾಲ ಅವರನ್ನು ಹಜಾರಿಬಾಗ ಕ್ಷೇತ್ರದಿಂದ ಕಣಕ್ಕಿಳಿಸಿದೆ, ಅಲ್ಲಿ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರ ಪುತ್ರ ಜಯಂತ ಸಿನ್ಹಾ ಆ ಕ್ಷೇತ್ರದ ಸಂಸದರಾಗಿದ್ದಾರೆ. ಲೋಹರ್ದಗಾ (ST) ಸ್ಥಾನಕ್ಕೆ ಮೂರು ಬಾರಿ ಸಂಸದರಾಗಿದ್ದ ಸುದರ್ಶನ ಭಗತ್ ಬದಲಿಗೆ ಸಮೀರ್ ಓರಾನ್ ಅವರಿಗೆ ಟಿಕೆಟ್‌ ನೀಡಲಾಗಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಮಧ್ಯಪ್ರದೇಶದಲ್ಲಿ ಏಳು ಹೊಸ ಮುಖಗಳಿಗೆ ಅಭ್ಯರ್ಥಿ…
ಗ್ವಾಲಿಯರ್ ಲೋಕಸಭಾ ಸ್ಥಾನಕ್ಕೆ ಪಕ್ಷವು ತನ್ನ ಹಾಲಿ ಸಂಸದ ವಿವೇಕ ನಾರಾಯನ ಶೆಜ್ವಾಲ್ಕರ್ ಬದಲಿಗೆ ಭರತ ಸಿಂಗ್ ಕುಶ್ವಾಹ ಅವರಿಗೆ ಟಿಕೆಟ್‌ ನೀಡಲಾಗಿದೆ.
ಗುನಾ ಕ್ಷೇತ್ರದಿಂದ ಹಾಲಿ ಸಂಸದ ಕೃಷ್ಣಪಾಲ ಸಿಂಗ್ ಯಾದವ್ ಅವರ ಬದಲಿಗೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಟಿಕೆಟ್‌ ನೀಡಲಾಗಿದೆ.
ಸಾಗರ ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ರಾಜಬಹದ್ದೂರ್ ಸಿಂಗ್ ಅವರ ಬದಲಿಗೆ ಲತಾ ವಾಂಖೆಡೆ ಅವರಿಗೆ ಟಿಕೆಟ್‌ ನೀಡಲಾಗಿದೆ.
ವೀರೇಂದ್ರ ಖಾಟಿಕ್ ಅವರು ಟಿಕಮ್‌ಗಢ (ಎಸ್‌ಸಿ) ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ವಿದಿಶಾ ಸಂಸದ ರಮಾಕಾಂತ ಭಾರ್ಗವ ಅವರನ್ನು ಬಿಜೆಪಿ ಕೈಬಿಟ್ಟಿದ್ದು, ಅವರ ಬದಲಿಗೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ ಅವರಿಗೆ ಟಿಕೆಟ್‌ ನೀಡಲಾಗಿದೆ. ಪ್ರಸ್ತುತ ಸಾಧ್ವಿ ಪ್ರಜ್ಞಾ ಸಿಂಗ್ ಸಂಸದರಾಗಿರುವ ಭೋಪಾಲ ಕ್ಷೇತ್ರದಿಂದ ಅಲೋಕ ಶರ್ಮಾ ಅವರಿಗೆ ಟಿಕೆಟ್‌ ನೀಡಲಾಗಿದೆ.
ರತ್ಲಾಮ್ (ಎಸ್‌ಟಿ) ಕ್ಷೇತ್ರದಿಂದ ಬಿಜೆಪಿ ಸಂಸದ ಗುಮಾನ್ ಸಿಂಗ್ ದಾಮೋರ್ ಅವರ ಬದಲಿಗೆ ಅನಿತಾ ನಗರ ಸಿಂಗ್ ಚೌಹಾಣ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ರಾಜಸ್ಥಾನದ 15 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ್ದು, ಚುರು, ಭರತಪುರ, ಜಲೋರ್, ಉದಯಪುರ ಮತ್ತು ಬನ್ಸ್ವಾರಾ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.
ಪಕ್ಷವು ತ್ರಿಪುರಾ ಪಶ್ಚಿಮ ಕ್ಷೇತ್ರದಿಂದ ತ್ರಿಪುರಾ ಮಾಜಿ ಮುಖ್ಯಮಂತ್ರಿ ಬಿಪ್ಲವಕುಮಾರ ದೇಬ್ ಅವರನ್ನು ಅಭ್ಯರ್ಥಿಯನ್ನಾಗಿ ಹೆಸರಿಸಿದೆ, ಪ್ರಸ್ತುತ ಪಕ್ಷದ ಸಂಸದೆ ಪ್ರತಿಮಾ ಭೂಮಿಕ ಅವರು ಹಾಲಿ ಸಂಸದರಾಗಿದ್ದಾರೆ.
ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಅಲಿಪುರ್ದೂರ ಕ್ಷೇತ್ರದಿಂದ ಮನೋಜ ತಿಗ್ಗಾ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಬಿಜೆಪಿಯು ಪಶ್ಚಿಮ ಬಂಗಾಳದ ಸಂಸದ ಜಾನ್ ಬಾರ್ಲಾ ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ.

ಮತದಾರರೊಂದಿಗಿನ ಸಂಪರ್ಕ ಕಡಿತ ಮತ್ತು ಪಕ್ಷವು ನಡೆಸಿದ ಸಮೀಕ್ಷೆಗಳಲ್ಲಿ ಹೊರಹೊಮ್ಮಿದ ಪ್ರಬಲವಾದ ಆಡಳಿತ ವಿರೋಧಿ ಭಾವನೆಗಳು ದೆಹಲಿಯಲ್ಲಿ ನಾಲ್ವರು ಹಾಲಿ ಬಿಜೆಪಿ ಸಂಸದರ ವಿರುದ್ಧ ಇದೆ ಎಂಬುದು ಕಂಡುಬಂದಿದೆ ಎಂಬುದಾಗಿ ವರದಿಯಾಗಿದೆ. ಶನಿವಾರ ಬಿಡುಗಡೆ ಮಾಡಲಾದ ಲೋಕಸಭೆ ಚುನಾವಣೆಯ 195 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಹಾಲಿ ಸಂಸದರಾದ ರಮೇಶ ಬಿಧುರಿ (ದಕ್ಷಿಣ ದೆಹಲಿ), ಮೀನಾಕ್ಷಿ ಲೇಖಿ (ನವದೆಹಲಿ), ಪರ್ವೇಶ ಸಾಹಿಬ್ ಸಿಂಗ್ (ಪಶ್ಚಿಮ ದೆಹಲಿ) ಮತ್ತು ಡಾ ಹರ್ಷವರ್ಧನ (ಚಾಂದಿನಿ ಚೌಕ್) ಅವರಿಗೆ ಟಿಕೆಟ್‌ ನೀಡಲಾಗಿದೆ. ದೆಹಲಿಯು ಏಳು ಲೋಕಸಭಾ ಸ್ಥಾನಗಳನ್ನು ಹೊಂದಿದೆ. ಮೊದಲ ಪಟ್ಟಿಯಲ್ಲಿ ಈಶಾನ್ಯ ದೆಹಲಿಯಿಂದ ಭೋಜ್‌ಪುರಿ ನಟ-ರಾಜಕಾರಣಿಯಾಗಿರುವ ಮನೋಜ ತಿವಾರಿ ಅವರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.
ರಮೇಶ ಬಿಧುರಿ ಬದಲಿಗೆ ದೆಹಲಿ ವಿಧಾನಸಭೆಯ ಪ್ರತಿಪಕ್ಷದ ನಾಯಕ ರಾಮವೀರ ಸಿಂಗ್ ಬಿಧುರಿ ಮತ್ತು ಪರ್ವೇಶ ಸಾಹಿಬ್ ಸಿಂಗ್ (ಪಶ್ಚಿಮ ದೆಹಲಿ) ಸ್ಥಾನಕ್ಕೆ ದಕ್ಷಿಣ ದೆಹಲಿಯ ಮಾಜಿ ಮೇಯರ್ ಕಮಲ್ಜೀತ್ ಸೆಹ್ರಾವತ್ ಅವರಿಗೆ ಟಿಕೆಟ್‌ ನೀಡಲಾಗಿದೆ. ನವದೆಹಲಿ ಕ್ಷೇತ್ರದಿಂದ ಮೀನಾಕ್ಷಿ ಲೇಖಿ ಅವರ ಬದಲಿಗೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೆ ಟಿಕೆಟ್‌ ನೀಡಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement