ಆದಿತ್ಯ ಎಲ್​-1 ಬಾಹ್ಯಾಕಾಶ ನೌಕೆ ಉಡಾವಣೆ ದಿನವೇ ನನಗೆ ಕ್ಯಾನ್ಸರ್​ ಇರುವುದು ಪತ್ತೆಯಾಯ್ತು : ಇಸ್ರೋ ಅಧ್ಯಕ್ಷ ಸೋಮನಾಥ​

ನವದೆಹಲಿ/ತಿರುವನಂತಪುರಂ: ಇಸ್ರೋದ ಮಹಾತ್ವಾಕಾಂಕ್ಷೆಯ ಆದಿತ್ಯ ಎಲ್‌1 ಸೋಲಾರ್‌ ಮಿಷನ್‌ ಉಡಾವಣೆಯಾದ ದಿನವೇ ತಮಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ ಬಹಿರಂಗಪಡಿಸಿದ್ದಾರೆ ಆದರೆ ಈಗ ಅವರು ಸಂಪೂರ್ಣ ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ.
ತರ್ಮಾಕ್ ಮೀಡಿಯಾ ಹೌಸ್‌ಗೆ ನೀಡಿದ ಸಂದರ್ಶನದಲ್ಲಿ, ಇಸ್ರೋ ಅಧ್ಯಕ್ಷ ಎಸ್ ಸೋಮನಾಥ ಅವರು, ತಮ್ಮ ಹೊಟ್ಟೆಯಲ್ಲಿನ ಕ್ಯಾನ್ಸರ್‌ ಬೆಳವಣಿಗೆಯನ್ನು ತೆಗೆದುಹಾಕಲು ಆಪರೇಷನ್ ಮಾಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ನಂತರ ಅವರಿಗೆ ಕೀಮೋಥೆರಪಿ ಮೂಲಕ ಚಿಕಿತ್ಸೆ ನೀಡಲಾಯಿತು. ಈಗ ರೋಗದಿಂದ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಹಾಗೂ ಆರೋಗ್ಯವಾಗಿದ್ದೇನೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಚಂದ್ರಯಾನ-3 ಮಿಷನ್‌ನ ಉಡಾವಣೆ ಸಮಯದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳಿವೆ ಎಂಬುದು ತಮ್ಮ ಅರಿವಿಗೆ ಬಂದಿತ್ತು. ಆದರೆ ಅದರ ಬಗ್ಗೆ ಹೆಚ್ಚು ಸ್ಪಷ್ಟವಾಗಿರಲಿಲ್ಲ ಎಂದು ಅವರು ಹೇಳಿದರು.

ಆದಿತ್ಯ L-1 ಉಡಾವಣೆ ದಿನದಂದು ಸ್ಕ್ಯಾನ್ ಮಾಡಿದಾಗ ತಮಗೆ ಕ್ಯಾನ್ಸರ್‌ ಬಗ್ಗೆ ಸುಳಿವು ಸಿಕ್ಕಿತು. ಉಡಾವಣೆಯ ನಂತರ, ನಾನು ಚೆನ್ನೈನಲ್ಲಿ ಹೆಚ್ಚಿನ ಪರೀಕ್ಷೆಗಳಿಗೆ ಒಳಗಾಗಬೇಕಾಯಿತು. ಅದು ನನ್ನ ದೊಡ್ಡ ಕರುಳಿನಲ್ಲಿ ಕ್ಯಾನ್ಸರ್ ಬೆಳವಣಿಗೆಯನ್ನು ದೃಢೀಕರಿಸಿತು. ಈ ರೋಗನಿರ್ಣಯದ ನಂತರ, ನಾನು ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿಗೆ ಒಳಗಾಗಿದ್ದೇನೆ” ಎಂದು ಸೋಮನಾಥ ಹೇಳಿದರು.
ರೋಗಪತ್ತೆಯ ನಂತರ ನಿಸ್ಸಂದೇಹವಾಗಿ, ತಾನು ಹಾಗೂ ಕುಟುಂಬದವರು ಆಘಾತಕ್ಕೊಳಗಾಗಿದ್ದರು. ಆದರೆ ಈಗ, ನಾನು ಕ್ಯಾನ್ಸರ್ ಅನ್ನು ಗ್ರಹಿಸಿದ್ದೇನೆ ಮತ್ತು ಅದರ ಚಿಕಿತ್ಸೆಯು ಪರಿಹಾರ ಹೊಂದಿದೆ. ಇದೇ ರೀತಿಯ ಸವಾಲುಗಳನ್ನು ಜಯಿಸಿದ ಕುಟುಂಬ ಸದಸ್ಯರಿಂದ ಸಲಹೆ ಪಡೆದದ್ದು ತಮ್ಮ ಆತಂಕ ನಿವಾರಿಸಲು ಸಹಾಯ ಮಾಡಿತು ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಬಿಎಸ್‌ಇ ಕಾರ್ಯಕ್ರಮದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸ್ಟಂಪ್ಡ್‌ ಔಟ್‌ ಮಾಡಿದ ಬ್ರೋಕರ್‌ : ವೀಕ್ಷಿಸಿ

“ನಾನು ಪ್ರಕ್ರಿಯೆಗೆ ಒಳಗಾದ ಸಮಯದಲ್ಲಿ ಸಂಪೂರ್ಣ ಗುಣವಾಗುವ ಬಗ್ಗೆ ನನಗೆ ಅನಿಶ್ಚಿತತೆ ಇತ್ತು. ನಿಯಮಿತವಾಗಿ ತಪಾಸಣೆ ಮತ್ತು ಸ್ಕ್ಯಾನ್‌ಗೆ ಒಳಗಾಗುತ್ತಿದ್ದೇನೆ. ಈಗ ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಮತ್ತು ನನ್ನ ಕೆಲಸವನ್ನು ಪುನರಾರಂಭಿಸಿದ್ದೇನೆ ಎಂದು ಅವರು ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ನಾಲ್ಕು ದಿನಗಳನ್ನು ಕಳೆದ ನಂತರ ಅವರು ತಮ್ಮ ಕೆಲಸವನ್ನು ಪುನರಾರಂಭಿಸಿದರು. ಈಗ ವರ್ಷಕ್ಕೊಮ್ಮೆ ತಪಾಸಣೆಗೆ ಒಳಗಾಗುತ್ತೇನೆ ಎಂದು ತಿಳಿಸಿದರು.
ನಾನು ಈಗ ಯಾವುದೇ ನೋವನ್ನು ಅನುಭವಿಸುವುದಿಲ್ಲ. ನನಗೆ ಈಗ ಯಾವುದೇ ನೋವು ಇಲ್ಲ. ಇದು ಕೇವಲ ಬೆಳವಣಿಗೆಯಾಗಿದೆ. ಅವರು ಅದನ್ನು ಪತ್ತೆಹಚ್ಚಿದರು ಮತ್ತು ಅದನ್ನು ತೆಗೆದುಹಾಕಿದ್ದಾರೆ” ಎಂದು ಅವರು ಮಾಧ್ಯಮ ಔಟ್ಲೆಟ್‌ನ ರೈಟ್ಟೇಕ್ ಕಾರ್ಯಕ್ರಮದ ಸಂದರ್ಶನದಲ್ಲಿ ಹೇಳಿದರು.
ರೋಗನಿರ್ಣಯ ಮತ್ತು ಚಿಕಿತ್ಸೆಯ ಅವಧಿಯಲ್ಲೂ ತಾವು ತಮ್ಮ ಜವಾಬ್ದಾರಿ ಹಾಗೂ ಕೆಲಸವನ್ನು ಮುಂದುವರಿಸಿದ್ದೆ ಎಂದು ಅವರು ಹೇಳಿದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement