ಆದಿತ್ಯ ಎಲ್​-1 ಬಾಹ್ಯಾಕಾಶ ನೌಕೆ ಉಡಾವಣೆ ದಿನವೇ ನನಗೆ ಕ್ಯಾನ್ಸರ್​ ಇರುವುದು ಪತ್ತೆಯಾಯ್ತು : ಇಸ್ರೋ ಅಧ್ಯಕ್ಷ ಸೋಮನಾಥ​

ನವದೆಹಲಿ/ತಿರುವನಂತಪುರಂ: ಇಸ್ರೋದ ಮಹಾತ್ವಾಕಾಂಕ್ಷೆಯ ಆದಿತ್ಯ ಎಲ್‌1 ಸೋಲಾರ್‌ ಮಿಷನ್‌ ಉಡಾವಣೆಯಾದ ದಿನವೇ ತಮಗೆ ಕ್ಯಾನ್ಸರ್‌ ಇರುವುದು ಪತ್ತೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ ಬಹಿರಂಗಪಡಿಸಿದ್ದಾರೆ ಆದರೆ ಈಗ ಅವರು ಸಂಪೂರ್ಣ ಆರೋಗ್ಯವಾಗಿರುವುದಾಗಿ ಹೇಳಿದ್ದಾರೆ. ತರ್ಮಾಕ್ ಮೀಡಿಯಾ ಹೌಸ್‌ಗೆ ನೀಡಿದ ಸಂದರ್ಶನದಲ್ಲಿ, ಇಸ್ರೋ ಅಧ್ಯಕ್ಷ ಎಸ್ ಸೋಮನಾಥ ಅವರು, ತಮ್ಮ ಹೊಟ್ಟೆಯಲ್ಲಿನ ಕ್ಯಾನ್ಸರ್‌ ಬೆಳವಣಿಗೆಯನ್ನು ತೆಗೆದುಹಾಕಲು … Continued