ವೀಡಿಯೊ…| : ಭಾರತದ 21ನೇ ಶತಮಾನದ ಪುಷ್ಪಕ ‘ವಿಮಾನ’ ಯಶಸ್ವಿಯಾಗಿ ಉಡಾವಣೆ…!

ಬೆಂಗಳೂರು : “ಸ್ವದೇಶಿ ಬಾಹ್ಯಾಕಾಶ ನೌಕೆ” ಎಂದು ಕರೆಯಲ್ಪಡುವ ಇಸ್ರೋದ ಎಸ್‌ಯುವಿ ಗಾತ್ರದ ರೆಕ್ಕೆಯ ರಾಕೆಟ್ ʼಪುಷ್ಪಕʼ ಶುಕ್ರವಾರ ಬೆಳಿಗ್ಗೆ ಚಿತ್ರದುರ್ಗ ಸಮೀಪದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಲ್ಲಿ (ಎಟಿಆರ್) ತನ್ನ ಮರುಬಳಕೆ ಮಾಡಬಹುದಾದ ರಾಕೆಟ್‌ (ಆರ್‌ಎಲ್‌ವಿ)ʼಪುಷ್ಪಕʼವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಆರ್‌ಎಲ್‌ವಿಯನ್ನು ಶುಕ್ರವಾರ ಬೆಳಗ್ಗೆ 7 ಗಂಟೆಗೆ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ ಎಂದು ಇಸ್ರೋ ಮಾಹಿತಿ ನೀಡಿದೆ. ಚಳ್ಳಕೆರೆ ರನ್ ವೇಯಿಂದ ಬೆಳಗ್ಗೆ 7 ಗಂಟೆ ಸುಮಾರಿಗೆ ರಾಕೆಟ್ ಉಡಾವಣೆಯಾಗಿದೆ. ಇದು ಆರ್‌ಎಲ್‌ವಿಯ ಮೂರನೇ ಲ್ಯಾಂಡಿಂಗ್ ಮಿಷನ್. ಬಾಹ್ಯಾಕಾಶ ಸಂಸ್ಥೆ ಹಿಂದಿನ ಕಾರ್ಯಾಚರಣೆಗಳನ್ನು 2016 ಮತ್ತು ಕಳೆದ ವರ್ಷ ಏಪ್ರಿಲ್‌ನಲ್ಲಿ ಯಶಸ್ವಿಯಾಗಿ ನಡೆಸಿತ್ತು.
ಉಡಾವಣೆಯಾದ ಸ್ವಲ್ಪ ಹೊತ್ತಿನ ನಂತರ ಮರಳಿ ರನ್‌ ವೇಯಲ್ಲಿ ರಾಕೆಟ್‌ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ್ದು, ಮರುಬಳಕೆ ಮಾಡಬಹುದಾದ ರಾಕೆಟ್ ವಿಭಾಗಕ್ಕೆ ಪ್ರವೇಶಿಸುವ ಭಾರತದ ಪ್ರಯತ್ನದಲ್ಲಿ ಪ್ರಮುಖ ಮೈಲಿಗಲ್ಲನ್ನು ದಾಖಲಿಸಿದೆ. ಪರೀಕ್ಷಾರ್ಥವಾಗಿ ವಾಯುಪಡೆಯ ಹೆಲಿಕಾಪ್ಟರ್‌ನಿಂದ ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು. ಫಲಿತಾಂಶಗಳು “ಅತ್ಯುತ್ತಮ ಮತ್ತು ನಿಖರ” ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಖ್ಯಸ್ಥ ಎಸ್ ಸೋಮನಾಥ ಹೇಳಿದ್ದಾರೆ.

ರಾಮಾಯಣದಲ್ಲಿ ಹೆಸರಿಸಲಾದ ಪೌರಾಣಿಕ ಬಾಹ್ಯಾಕಾಶ ನೌಕೆ ʼಪುಷ್ಪಕ ವಿಮಾನʼದ ಹೆಸರನ್ನು ಇದಕ್ಕೆ ಇಡಾಲಾಗಿದೆ. ಉಡಾವಣಾ ವಾಹನವನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಸುಮಾರು 4.5 ಕಿಮೀ ಎತ್ತರಕ್ಕೆ ಕೊಂಡೊಯ್ಯಲಾಯಿತು. ಬಳಿಕ ಪೂರ್ವನಿರ್ಧರಿತ ಪಿಲ್‌ಬಾಕ್ಸ್ ನಿಯತಾಂಕಗಳನ್ನು ಸರಿಯಾಗಿಸಿದ ನಂತರ ಉಡಾವಣೆ ಮಾಡಲಾಗಿದೆ
“ಪುಷ್ಪಕ ಎಂಬ ರೆಕ್ಕೆಯ ರಾಕೆಟ್‌ ಅನ್ನು ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್‌ನಿಂದ ಮೇಲಕ್ಕೆತ್ತಲಾಯಿತು ಮತ್ತು 4.5 ಕಿಮೀ ಎತ್ತರದಿಂದ ಬಿಡುಗಡೆ ಮಾಡಲಾಯಿತು. ರನ್‌ವೇಯಿಂದ 4 ಕಿಮೀ ದೂರದಲ್ಲಿ ಬಿಡುಗಡೆಯಾದ ನಂತರ, ಪುಷ್ಪಕ ಸ್ವಯಂಪ್ರೇರಿತವಾಗಿ ರನ್‌ವೇಯನ್ನು ಸಮೀಪಿಸಿತು. ಅದು ನಿಖರವಾಗಿ ಇಳಿಯಿತು. ರನ್‌ವೇ ತನ್ನ ಬ್ರೇಕ್ ಪ್ಯಾರಾಚೂಟ್, ಲ್ಯಾಂಡಿಂಗ್ ಗೇರ್ ಬ್ರೇಕ್‌ಗಳು ಮತ್ತು ನೋಸ್ ವೀಲ್ ಸ್ಟೀರಿಂಗ್ ವ್ಯವಸ್ಥೆಯನ್ನು ಬಳಸಿಕೊಂಡು ರನ್‌ ವೇನಲ್ಲಿ ಸ್ಥಗಿತಗೊಂಡಿತು ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಮುಖ ಸುದ್ದಿ :-   ಬೆಂಗಳೂರಿನ ಹಲವೆಡೆ ಜೋರಾಗಿ ಮಳೆ

ಪರೀಕ್ಷಾರ್ಥ ಹಾರಾಟವು ಪುಷ್ಪಕದ ಮೂರನೇ ಹಾರಾಟವಾಗಿದೆ, ಇದು ಹೆಚ್ಚು ಸಂಕೀರ್ಣ ಸಂದರ್ಭಗಳಲ್ಲಿ ಅದರ ರೊಬೊಟಿಕ್ ಲ್ಯಾಂಡಿಂಗ್ ಸಾಮರ್ಥ್ಯದ ಪರೀಕ್ಷೆಯ ಭಾಗವಾಗಿದೆ. ಪುಷ್ಪಕ ಕಾರ್ಯಾಚರಣೆಯನ್ನು ನಿಯೋಜಿಸಲು ಇನ್ನೂ ಹಲವು ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ
ಪುಷ್ಪಕ ಉಡಾವಣಾ ವಾಹನವು ಬಾಹ್ಯಾಕಾಶವನ್ನು ಕೈಗೆಟುಕುವಂತೆ ಮಾಡಲು ಭಾರತದ ದಿಟ್ಟ ಪ್ರಯತ್ನವಾಗಿದೆ” ಎಂದು ಇಸ್ರೋ ಅಧ್ಯಕ್ಷ ಸೋಮನಾಥ ಈ ಹಿಂದೆ ಪ್ರತಿಪಾದಿಸಿದ್ದರು.
ಇದು ಭಾರತದ ಭವಿಷ್ಯದ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನವಾಗಿದೆ, ಅದರಲ್ಲಿನ ಅತ್ಯಂತ ದುಬಾರಿ ಭಾಗ, ಎಲ್ಲಾ ದುಬಾರಿ ಎಲೆಕ್ಟ್ರಾನಿಕ್ಸ್ ಅನ್ನು ಹೊಂದಿರುವ ಉಡಾವಣಾ ವಾಹನವನ್ನು ಭೂಮಿಗೆ ಸುರಕ್ಷಿತವಾಗಿ ಮರಳಿ ತರುವ ಮೂಲಕ ಮರುಬಳಕೆ ಮಾಡಬಹುದಾಗಿದೆ. ನಂತರ, ಇದನ್ನು ಬಳಸಿ ಕಕ್ಷೆಯಲ್ಲಿರುವ ಉಪಗ್ರಹಗಳಿಗೆ ಇಂಧನ ತುಂಬುವಿಕೆ ಅಥವಾ ನವೀಕರಣ ಮಾಡಲು ಉಪಗ್ರಹಗಳನ್ನು ಕಕ್ಷೆಯಿಂದ ಮರಳಿ ಪಡೆಯುವುದನ್ನು ಸಹ ಮಾಡಬಹುದು. ಭಾರತವು ಬಾಹ್ಯಾಕಾಶದಲ್ಲಿ ಅವಶೇಷಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತದೆ ಮತ್ತು ಪುಷ್ಪಕ ಅದರತ್ತ ಒಂದು ಹೆಜ್ಜೆಯಾಗಿದೆ” ಎಂದು ಅವರು ಹೇಳಿದರು.

RVL 2016 ರಲ್ಲಿ ಮೊದಲ ಬಾರಿಗೆ ಹಾರಿತು ಮತ್ತು ಬಂಗಾಳ ಕೊಲ್ಲಿಯಲ್ಲಿ ವರ್ಚುವಲ್ ರನ್‌ವೇಯಲ್ಲಿ ಯಶಸ್ವಿಯಾಗಿ ಇಳಿಯಿತು. ಯೋಜನೆಯ ಪ್ರಕಾರ, ಅದು ಸಮುದ್ರದಲ್ಲಿ ಮುಳುಗಿತು ಮತ್ತು ಅದನ್ನು ಮರಳಿ ಪಡೆಯಲು ಸಾಧ್ಯವಗಲಿಲ್ಲ.. ಸ್ವಯಂ ಲ್ಯಾಂಡಿಂಗ್‌ಗಾಗಿ ಚಿನೂಕ್ ಹೆಲಿಕಾಪ್ಟರ್‌ನಿಂದ ಪುಷ್ಪಕ ರಾಕೆಟ್ ಅನ್ನು ಆಗಸದಲ್ಲಿ ಇಳಿಸಿದಾಗ ಎರಡನೇ ಪರೀಕ್ಷೆಯನ್ನು 2023 ರಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಸೋಮನಾಥ ಅವರ ಪ್ರಕಾರ ಸಂಪತ್ತಿನ ಅಧಿಪತಿ ಕುಬೇರನ ವಾಹನ ಎಂದು ಕರೆಯಲ್ಪಡುವ ರಾಮಾಯಣದಲ್ಲಿ ಉಲ್ಲೇಖಿಸಲಾದ ‘ಪುಷ್ಪಕ ವಿಮಾನ’ದ ಹೆಸರಿನ ಪುಷ್ಪಕವನ್ನು ರಾಕೆಟ್‌ಗೆ ಇಡಲಾಗಿದೆ.
ಇಂಜಿನಿಯರ್‌ಗಳು ಮತ್ತು ವಿಜ್ಞಾನಿಗಳ ಸಮರ್ಪಿತ ತಂಡದಿಂದ ಬಾಹ್ಯಾಕಾಶ ನೌಕೆಯ ತಯಾರಿಕೆಯು 10 ವರ್ಷಗಳ ಹಿಂದೆ ಪ್ರಾರಂಭವಾಯಿತು. 6.5 ಮೀಟರ್ ಏರೋಪ್ಲೇನ್ ತರಹದ ಕ್ರಾಫ್ಟ್ 1.75 ಟನ್ ತೂಗುತ್ತದೆ. ಅದರ ಇಳಿಯುವಿಕೆಯ ಸಮಯದಲ್ಲಿ, ಸಣ್ಣ ಥ್ರಸ್ಟರ್‌ಗಳು ವಾಹನವು ಇಳಿಯಬೇಕಾದ ನಿಖರವಾದ ಸ್ಥಳಕ್ಕೆ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಈ ಯೋಜನೆಗೆ ಸರ್ಕಾರ ₹ 100 ಕೋಟಿಗೂ ಹೆಚ್ಚು ಹೂಡಿಕೆ ಮಾಡಿದೆ.

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement