ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾರಿ ನಿರ್ದೇಶನಾಲಯದ (ಇ ಡಿ) ಕ್ಸಡಿಯಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬಿಡುಗಡೆ ಮಾಡುವ ಕುರಿತು ಮಧ್ಯಂತರ ಆದೇಶ ನೀಡಲು ದೆಹಲಿ ಹೈಕೋರ್ಟ್ ಬುಧವಾರ ನಿರಾಕರಿಸಿದೆ.
ತನ್ನ ಬಂಧನವನ್ನು ಪ್ರಶ್ನಿಸಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸ್ವರಣಕಾಂತಾ ಶರ್ಮಾ ಅವರು ಕೇಜ್ರಿವಾಲ್ ಅವರ ಅರ್ಜಿಯಲ್ಲಿ ಕೋರಲಾದ ಪರಿಹಾರಗಳ ಸ್ವರೂಪವನ್ನು ಗಮನಿಸಿದರೆ, ಇ.ಡಿ.ಯ ಪ್ರತಿಕ್ರಿಯೆ ಕೇಳದೆ ಆದೇಶ ಹೊರಡಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟರು ಹಾಗೂ ಏಪ್ರಿಲ್‌ 2ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಇ.ಡಿ.ಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಏಪ್ರಿಲ್ 3 ಕ್ಕೆ ಪ್ರಕರಣ ಮುಂದೂಡಿತು. ಆದರೆ, ಮಧ್ಯಂತರ ಆದೇಶ ನೀಡಿಲ್ಲ.
ಇದಕ್ಕೂ ಮುನ್ನ ಕೇಜ್ರಿವಾಲ್ ಪರವಾಗಿ ಹಿರಿಯ ವಕೀಲ ಅಭಿಷೇಕ ಮನು ಸಿಂಘ್ವಿ ಮತ್ತು ಜಾರಿ ನಿರ್ದೇಶನಾಲಯದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್ ವಿ ರಾಜು ವಾದ ಮಂಡಿಸಿದರು.

ಮಾಫಿಸಾಕ್ಷಿಗಳಾಗಿ ಮಾರ್ಪಟ್ಟವರ ಹೇಳಿಕೆಗಳ ಆಧಾರದ ಮೇಲೆ ಕೇಜ್ರಿವಾಲ್‌ ಅವರನ್ನು ಬಂಧಿಸಲಾಗಿದೆ. ಇದನ್ನು ಹೊರತುಪಡಿಸಿ ಕೇಜ್ರಿವಾಲ್‌ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ. ನೆಪಗಳನ್ನೊಡ್ಡಿ ಆರೋಪಿಗಳಿಗೆ ಜಾಮೀನು ಕೊಡಿಸಲಾಗುತ್ತದೆ. ಆ ನಂತರ ಅವರು ಮಾಫಿ ಸಾಕ್ಷಿಗಳಾಗಿ ಕೇಜ್ರಿವಾಲ್‌ ವಿರುದ್ಧ ಸಾಕ್ಷ್ಯ ನುಡಿಯುತ್ತಾರೆ. ಅಬಕಾರಿ ನೀತಿ ಹಗರಣ ಕುರಿತಾದ ಪ್ರತಿಯೊಂದು ಪ್ರಕರಣದಲ್ಲಿಯೂ ಇದೇ ರೀತಿ ಆಗಿದೆ. ಇದು ಸಾಂವಿಧಾನಿಕ ರಕ್ಷಣೆಗಳನ್ನು ಗಾಳಿಗೆ ತೂರುತ್ತದೆ ಎಂದು ಅಭಿಷೇಕ ಮನು ಸಿಂಘ್ವಿ ವಾದಿಸಿದರು.
ಪ್ರಕರಣದಲ್ಲಿ ರಾಘವ ಮಾಗುಂಟಗೆ ಚಿತ್ರಹಿಂಸೆ ನೀಡಲಾಯಿತು. ಅವರ ತಂದೆ ನೀಡಿದ ಹೇಳಿಕೆ ಆಧರಿಸಿ ಆತನಿಗೆ ಜಾಮೀನು ದೊರೆಯಿತು.ಶರತ್‌ ರೆಡ್ಡಿಯ ವಿಚಾರದಲ್ಲಿ ಆತನಿಂದ ಪಡೆದಿದ್ದ ಒಂಭತ್ತು ಹೇಳಿಕೆಗಳಲ್ಲಿ ಆತ ನನ್ನ ವಿರುದ್ಧ ಯಾವುದೇ ಹೇಳಿಕೆ ನೀಡಲಿಲ್ಲ. ಆದರೆ, ಬಂಧನಕ್ಕೊಳಗಾದ ಹದಿನೆಂಟು ದಿನಗಳ ನಂತರವಷ್ಟೇ ಇ ಡಿ ಮಾತು ಕೇಳಿ ಹೇಳಿಕೆ ನೀಡಲಾರಂಭಿಸಿದ. ಕೇಜ್ರಿವಾಲ್‌ ವಿರುದ್ಧ ಹೇಳಿಕೆ ನೀಡಿದ ಒಂಭತ್ತು ದಿನಗಳ ನಂತರ ಆತನಿಗೆ ವೈದ್ಯಕೀಯ ಜಾಮೀನು ಮಂಜೂರಾಯಿತು. ಇಪ್ಪತ್ತು ದಿನಗಳ ನಂತರ ಮಾಫಿ ಸಾಕ್ಷ್ಯ ಮಾಡಲಾಯಿತು. ಇದೆಲ್ಲಾ ಏನನ್ನು ಹೇಳುತ್ತವೆ ಎಂದು ಅವರು ಕೋರ್ಟ್‌ ಗಮನಕ್ಕೆ ತಂದರು. ಹಾಗೂ ಇ ಡಿ ಯ ವಿಳಂಬ ಧೋರಣೆ ಕುರಿತು ನ್ಯಾಯಾಲಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರಮುಖ ಸುದ್ದಿ :-   ದಕ್ಷಿಣ ಭಾರತದಲ್ಲಿ ತೀವ್ರ ನೀರಿನ ಬಿಕ್ಕಟ್ಟು : 42 ಜಲಾಶಯದಲ್ಲಿ ಕೇವಲ 17%ರಷ್ಟು ನೀರಿನ ಸಂಗ್ರಹ ಮಾತ್ರ ಬಾಕಿ

ಇದು ಕೇವಲ ಕೇವಲ ಕ್ರಿಮಿನಲ್ ಕಾನೂನು ಪ್ರಕರಣವಲ್ಲ ಬದಲಿಗೆ ಲೋಕಸಭಾ ಚುನಾವಣೆಗೆ ಸ್ವಲ್ಪ ಮೊದಲು ಹಾಲಿ ಮುಖ್ಯಮಂತ್ರಿಯ ಬಂಧನವಾಗಿರುವುದನ್ನು ಒಳಗೊಂಡ ದೊಡ್ಡ ಸಾಂವಿಧಾನಿಕ ಸಮಸ್ಯೆಯನ್ನು ಒಳಗೊಂಡಿದೆ. ಮುಖ್ಯಮಂತ್ರಿಗಳನ್ನು ಬಂಧಿಸುವುದು ಸಹಜವಾದರೂ ಇದೇ ಸಮಯದಲ್ಲಿ ಬಂಧನವಾದದ್ದು ಏಕೆ ಎಂಬ ಪ್ರಶ್ನೆ ಇದೆ. ಚುನಾವಣೆಗೆ ಮುಂಚಿತವಾಗಿ ಆಮ್ ಆದ್ಮಿ ಪಕ್ಷವನ್ನು (ಎಎಪಿ) ನಿಷ್ಕ್ರಿಯಗೊಳಿಸುವ ಉದ್ದೇಶದಿಂದ ಈ ಬಂಧನ ನಡೆದಿದೆ. ತನಿಖಾ ಸಂಸ್ಥೆಗೆ ಅಸಹಕಾರ ತೋರಿದ್ದಾರೆಂಬುದು ಬಂಧನಕ್ಕೆ ಆಧಾರವಾಗದು. ಕೇಜ್ರಿವಾಲ್‌ ಸಹಕರಿಸಲಿಲ್ಲ ಎಂದು ಚುನಾವಣೆಗೆ ಮುಂಚಿತವಾಗಿ ಕಸ್ಟಡಿ ವಿಚಾರಣೆ ನಡೆಸಲು ಬಯಸಿದ್ದಾಗಿ ಇ.ಡಿ. ಹೇಳಲು ಸಾಧ್ಯವಿಲ್ಲ ಎಂದು ಸಿಂಘ್ವಿ ವಾದಿಸಿದರು.
ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್ ವಿ ರಾಜು ಅವರು ವಾದ ಮಂಡಿಸಿ, ಇ.ಡಿ.ಗೆ ಪ್ರತಿಕ್ರಿಯೆ ಸಲ್ಲಿಸಲು ಸಮಯಾವಕಾಶ ಅಗತ್ಯವಿದೆ.
ಇದೊಂದು ದೊಡ್ಡ ಅರ್ಜಿಯಾಗಿದ್ದರಿಂದ ವಿವರವಾದ ಉತ್ತರ ಸಲ್ಲಿಸಲು ಬಯಸುತ್ತೇವೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ರಾಷ್ಟ್ರದ ಸಂಪತ್ತಿನಲ್ಲಿ ಮುಸ್ಲಿಮರಿಗೆ ಮೊದಲ ಆದ್ಯತೆ ; ಮನಮೋಹನ ಸಿಂಗ್ ಹಳೆಯ ವೀಡಿಯೊ ಮೂಲಕ ಕಾಂಗ್ರೆಸ್ಸಿಗೆ ತಿರುಗೇಟು ನೀಡಿದ ಬಿಜೆಪಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement