ನವದೆಹಲಿ : ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ವ್ಯಕ್ತಿಯೊಬ್ಬರು ತಮ್ಮ ಬ್ಯಾಂಕ್ ಖಾತೆಗೆ ಅನಿರೀಕ್ಷಿತವಾಗಿ 9,900 ಕೋಟಿ ರೂ.ಗಳು ಜಮೆಯಾಗಿದ್ದು ನೋಡಿ ಬ್ಯಾಂಕಿಗೆ ದೌಡಾಯಿಸಿದ್ದಾರೆ.
ಉತ್ತರ ಪ್ರದೇಶದ ಬರೋಡಾ ಬ್ಯಾಂಕ್ನಲ್ಲಿ ಖಾತೆ ಹೊಂದಿರುವ ಭಾನು ಪ್ರಕಾಶ ಎಂಬವರಿಗೆ ತಮ್ಮ ಬ್ಯಾಂಕ್ ಖಾತೆಯಲ್ಲಿ ಇತ್ತೀಚೆಗೆ 99,99,94,95,999.99 ರೂ.ಗಳ ಬ್ಯಾಲೆನ್ಸ್ ಇರುವುದು ಗೊತ್ತಾಯಿತು. ಅವರಿಗೆ ಅವರ ಕಣ್ಣನ್ನೇ ನಂಬಲು ಸಾಧ್ಯವಾಗಲಿಲ್ಲ. ಅನಿರೀಕ್ಷಿತ ಮೊತ್ತ ನೋಡಿ ಕಂಗಾಲಾದ ಅವರು ತಕ್ಷಣವೇ ಈ ಬಗ್ಗೆ ತಿಳಿಸಲು ಬ್ಯಾಂಕ್ಗೆ ಧಾವಿಸಿದ್ದಾರೆ.
ಬ್ಯಾಂಕ್ ಸಹ ಈ ಬಗ್ಗೆ ಪರಿಶೀಲನೆ ನಡೆಸಿತು. ಪರಿಶೀಲನೆಯ ನಂತರ, ಭಾನು ಪ್ರಕಾಶ ಅವರ ಖಾತೆಯು ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲದ ಖಾತೆಯಾಗಿದ್ದು, ದುರದೃಷ್ಟವಶಾತ್ ಇದು ಅದು ಅನುತ್ಪಾದಕ ಆಸ್ತಿ (Non-Performing Asset) ಆಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ದೋಷವನ್ನು ಗುರುತಿಸಿದ ಬ್ಯಾಂಕ್ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿತು.
“ಈ ಸ್ಥಿತಿಗೆ ಸಾಫ್ಟ್ವೇರ್ ಗ್ಲಿಚ್ ಕಾರಣವಾಗಿದೆ, ಹೀಗಾಗಿ ಖಾತೆಯಲ್ಲಿ ಅಗಾಧ ಮೊತ್ತವನ್ನು ತೋರಿಸಿದೆ ” ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕ ರೋಹಿತ್ ಗೌತಮ ಹೇಳಿದ್ದಾರೆ.
ತಪ್ಪನ್ನು ಸರಿಪಡಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ಯಾವುದೇ ಸಂಭವನೀಯ ದುರುಪಯೋಗವನ್ನು ನಿಯಂತ್ರಿಸಲು ಭಾನು ಪ್ರಕಾಶ ಅವರ ಖಾತೆಯನ್ನು ತಡೆಹಿಡಿಯಲಾಗಿದೆ ಎಂದು ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ್ದಾರೆ.
NPA ಗಳಿಗೆ, ಲಿಂಕ್ ಮಾಡಲಾದ ಸಾಫ್ಟ್ವೇರ್ ದೋಷದಿಂದಾಗಿ ಹೀಗಾಗಿದೆ. ಉಳಿತಾಯ ಖಾತೆಗಳಿಗೆ ಕೆಲವು ಮಿತಿಗಳನ್ನು ವಿಧಿಸಲಾಗುತ್ತದೆ, ಹೆಚ್ಚಿನ ಸಮಸ್ಯೆಗಳನ್ನು ತಡೆಗಟ್ಟಲು ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ