ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ : ಅಪ್ರಾಪ್ತನ ರಕ್ತದ ಮಾದರಿ ಬದಲಾಯಿಸಲು ಪಡೆದಿದ್ದ 3 ಲಕ್ಷ ರೂ. ವಶಕ್ಕೆ ಪಡೆದ ಪೊಲೀಸರು ; ಇಬ್ಬರು ವೈದ್ಯರ ಬಂಧನ

ಮೇ 19 ರಂದು ನಗರದ ಕಲ್ಯಾಣಿ ನಗರದಲ್ಲಿ ಕಾರು ಅಪಘಾತಕ್ಕೀಡಾಗಿ ಮೋಟಾರುಬೈಕಿನಲ್ಲಿದ್ದ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಸಾವಿಗೀಡಾದ ಪ್ರಕರಣದಲ್ಲಿ ಕಾರು ಚಾಲನೆ ಮಾಡಿದ್ದ ಅಪ್ರಾಪ್ತನ ರಕ್ತದ ಮಾದರಿಯನ್ನೇ ಬದಲಾಯಿಸಲು ವೈದ್ಯರಿಗೆ ಲಂಚ ನೀಡಿದ್ದ 3 ಲಕ್ಷ ರೂ.ಗಳನ್ನು ಪುಣೆ ಪೊಲೀಸರ ಅಪರಾಧ ವಿಭಾಗವು ಸೋಮವಾರ ವಶಪಡಿಸಿಕೊಂಡಿದೆ.
ಭಾನುವಾರ, 17 ವರ್ಷದ ಬಾಲಕನ ರಕ್ತದ ವರದಿಯನ್ನು ಬದಲಾಯಿಸಿದ ಆರೋಪದಲ್ಲಿ ಪುಣೆಯ ಸಾಸೂನ್ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಬಂಧಿಸಲಾಯಿತು. ಐಶಾರಾಮಿ ಪೋರ್ಷೆ ಕಾರನ್ನು ವೇಗವಾಗಿ ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ ಆರೋಪಿಯನ್ನು ವೈದ್ಯಕೀಯ ತಪಾಸಣೆಗಾಗಿ ಸಾಸೂನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಆರೋಪಿಗಳಲ್ಲಿ ಇಬ್ಬರು ವೈದ್ಯರಾದ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥರಾದ ಡಾ.ಅಜಯ ತಾವರೆ ಮತ್ತು ಸಿಎಂಒ ಡಾ ಶ್ರೀಹರಿ ಹಾಲ್ನೋರ್ ಮತ್ತು ಸಾಸೂನ್ ಆಸ್ಪತ್ರೆಯ ಇನ್ನೊಬ್ಬ ಉದ್ಯೋಗಿ ಅತುಲ್ ಘಟಕಮಲ್ಬೆ ಸೇರಿದ್ದಾರೆ. ರಕ್ತದ ಮಾದರಿ ದುರ್ಬಳಕೆ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರೂ ಆರೋಪಿಗಳನ್ನು ಮೇ 30ರವರೆಗೆ ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ.

ಪುಣೆ ಪೊಲೀಸ್ ಕಮಿಷನರ್ ಅಮಿತೇಶಕುಮಾರ ಪ್ರಕಾರ, ಸಂಗ್ರಹಿಸಲಾಗಿದ್ದ ಅಪ್ರಾಪ್ತನ ರಕ್ತವನ್ನು ಎಸೆಯಲಾಗಿತ್ತು ಮತ್ತು ಇದರ ಬದಲಿಗೆ ಇನ್ನೊಬ್ಬ ವ್ಯಕ್ತಿಯ ರಕ್ತದ ಮಾದರಿಯನ್ನು ಸಂಗ್ರಹಿಸಿ ಅಲ್ಲಿ ಇಡಲಾಯಿತು. ಹೀಗಾಗಿ ಹಣ ವಿನಿಮಯದ ಬಗ್ಗೆ ತನಿಖೆ ನಡೆಸಬೇಕಾಗಿರುವುದರಿಂದ ಪುಣೆ ಪೊಲೀಸರು ಇಬ್ಬರು ವೈದ್ಯರ ಕಸ್ಟಡಿಗೆ ಕೋರಿದ್ದಾರೆ.
“ನಾವು ಹಣವನ್ನು ಹಿಂಪಡೆಯಬೇಕಾಗಿದೆ. ಆರೋಪಿಯ ರಕ್ತದ ಮಾದರಿಯನ್ನು ಬದಲಿಸಲು ಯಾರ ರಕ್ತದ ಮಾದರಿಯನ್ನು ಬಳಸಲಾಗಿದೆ ಎಂಬುದನ್ನು ನಾವು ಕಂಡುಹಿಡಿಯಬೇಕು ಎಂದು ಪೊಲೀಸರು ನ್ಯಾಯಾಲಯದಲ್ಲಿ ಹೇಳಿದರು. ಏತನ್ಮಧ್ಯೆ, ಆರೋಪಿಗಳ ವಕೀಲರು ಪ್ರಕರಣದ ಸೆಕ್ಷನ್‌ಗಳು ಸ್ವಭಾವತಃ ಜಾಮೀನು ನೀಡಬಹುದಾದವು ಎಂದು ವಾದಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಮೆಡಿಕಲ್ ಕೌನ್ಸಿಲ್ ನಿಂದ ವೈದ್ಯರಿಗೆ ನೋಟಿಸ್‌
ಬಂಧನದ ನಂತರ, ಅರೆ ನ್ಯಾಯಾಂಗ ಸಂಸ್ಥೆಯಾದ ಮಹಾರಾಷ್ಟ್ರ ವೈದ್ಯಕೀಯ ಮಂಡಳಿ ಇಬ್ಬರೂ ವೈದ್ಯರಿಗೆ ನೋಟಿಸ್ ಜಾರಿ ಮಾಡಿದೆ. ಮೂಲಗಳ ಪ್ರಕಾರ, ಪ್ರತಿಕ್ರಿಯೆ ನೀಡಲು ವೈದ್ಯರಿಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಅಗತ್ಯವಿದ್ದಲ್ಲಿ ಅವರನ್ನು ವೈಯಕ್ತಿಕವಾಗಿಯೂ ಕರೆಯಬಹುದಾಗಿದೆ. ಮಹಾರಾಷ್ಟ್ರ ವೈದ್ಯಕೀಯ ಮಂಡಳಿಯು ಇಬ್ಬರು ವೈದ್ಯರನ್ನು ತಪ್ಪಿತಸ್ಥರೆಂದು ಕಂಡುಹಿಡಿದರೆ, ಕೌನ್ಸಿಲ್ ಅವರ ವೈದ್ಯಕೀಯ ಪರವಾನಗಿಗಳನ್ನು ಒಂದು ದಿನದಿಂದ ಹಿಡಿದು ಜೀವಮಾನದವರೆಗೆ ಅಮಾನತುಗೊಳಿಸಬಹುದು.
ಆಲ್ಕೋಹಾಲ್ ವರದಿಯುವ ನೆಗೆಟಿವ್‌ ಬರುವಂತೆ ಮಾಡಲು ಆರೋಪಿಯಾಗಿರುವ ಅಪ್ರಾಪ್ತನ ರಕ್ತದ ಮಾದರಿಗಳನ್ನು ಇನ್ನೊಬ್ಬ ವ್ಯಕ್ತಿಯ ರಕ್ತದ ಮಾದರಿಯೊಂದಿಗೆ ಬದಲಾಯಿಸಲಾಗಿದೆ ಎಂಬುದು ಹೊರಹೊಮ್ಮಿದ ನಂತರ ಬಂಧನಗಳನ್ನು ಮಾಡಲಾಗಿದೆ. ಅಪ್ರಾಪ್ತನ ಮೊದಲ ರಕ್ತದ ಮಾದರಿಯ ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಯ (ಎಫ್‌ಎಸ್‌ಎಲ್) ವರದಿಯು ಆತನ ದೇಹದಲ್ಲಿ ಆಲ್ಕೋಹಾಲ್ ಇದೆ ಎಂಬುದನ್ನು ತೋರಿಸಲಿಲ್ಲ. ಆದರೆ ಆತನ ಎರಡನೇ ರಕ್ತದ ಪರೀಕ್ಷೆ ಫಲಿತಾಂಶಗಳು ದೇಹದೊಳಗೆ ಆಲ್ಕೋಹಾಲ್‌ ಇತ್ತು ಎಂಬುದನ್ನು ಸೂಚಿಸಿವೆ. ಇದು ಮೊದಲ ವರದಿಯ ಸಿಂಧುತ್ವದ ಬಗ್ಗೆ ಅನುಮಾನ ಮೂಡಿಸಿತು. ನಂತರ ಎರಡೂ ಮಾದರಿಗಳ ಡಿಎನ್‌ಎ ಪರೀಕ್ಷೆಗಳನ್ನು ನಡೆಸಲಾಯಿತು. ಡಿಎನ್‌ಎ ಪರೀಕ್ಷೆಯಿಂದ ಎರಡು ರಕ್ತದ ಮಾದರಿಗಳು ಒಂದೇ ವ್ಯಕ್ತಿಯದ್ದಲ್ಲ, ಇದು ಬೇರೆ ವ್ಯಕ್ತಿಗಳ ರಕ್ತದ ಮಾದರಿಗಳು ಎಂಬುದನ್ನು ದೃಢಪಡಿಸಿತು. ಹೀಗಾಗಿ ಪ್ರಕರಣದ ಸಾಕ್ಷ್ಯಾಧಾರಗಳನ್ನು ಹಾಳುಮಾಡುವಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಹಾಗೂ ವೈದ್ಯರನ್ನು ಬಂಧಿಸಿದರು.

ಪ್ರಮುಖ ಸುದ್ದಿ :-   ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ...!

ಮೇ 19 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಾಸೂನ್ ಆಸ್ಪತ್ರೆಯಲ್ಲಿ ತೆಗೆದ ರಕ್ತದ ಮಾದರಿಯನ್ನು ಆಸ್ಪತ್ರೆಯ ಡಸ್ಟ್‌ಬಿನ್‌ಗೆ ಎಸೆಯಲಾಯಿತು ಮತ್ತು ಇನ್ನೊಬ್ಬ ವ್ಯಕ್ತಿಯ ರಕ್ತದ ಮಾದರಿಯನ್ನು ತೆಗೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಯಿತು… ಮುಖ್ಯ ವೈದ್ಯಾಧಿಕಾರಿ ಶ್ರೀಹರಿ ಹಾಲ್ನೋರ್ ಈ ರಕ್ತದ ಮಾದರಿಯನ್ನು ಬದಲಾಯಿಸಿದರು. . ತನಿಖೆಯ ಸಮಯದಲ್ಲಿ, ಸಾಸೂನ್‌ನ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಅಜಯ ತಾವ್ರೆ ಅವರ ಸೂಚನೆಯ ಮೇರೆಗೆ ಶ್ರೀಹರಿ ಹಾಲ್ನೋರ್ ಇದನ್ನು ಬದಲಾಯಿಸಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
“ಸಾಸೂನ್ ಆಸ್ಪತ್ರೆಯ ಸಿಸಿಟಿವಿಯ ಡಿವಿಆರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಫೋರ್ಜರಿ ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ವೈದ್ಯರನ್ನು ಬಂಧಿಸಲಾಗಿದೆ. ಈ ವೈದ್ಯರ ವಿರುದ್ಧ ಐಪಿಸಿಯ 120 ಬಿ, 467 ಮತ್ತು 201 ಸೆಕ್ಷನ್‌ಗಳನ್ನು ದಾಖಲಿಸಲಾಗಿದೆ. ಅಪ್ರಾಪ್ತ ಆರೋಪಿಯ ತಂದೆಯು ವೈದ್ಯ ಅಜಯ ತಾವ್ರೆ ಅವರೊಂದಿಗೆ ನೇರ ಸಂಪರ್ಕದಲ್ಲಿದ್ದರು. ರಕ್ತದ ಮಾದರಿಯನ್ನು ಬದಲಿಸಿದ ವ್ಯಕ್ತಿಗಾಗಿ ಕ್ರೈಂ ಬ್ರಾಂಚ್ ಹುಡುಕುತ್ತಿದೆಚಾಲಕನ ಅಪಹರಣ ಪ್ರಕರಣದಲ್ಲಿ . ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಅಪ್ರಾಪ್ತನ ತಂದೆಯನ್ನು ಕ್ರೈಂ ಬ್ರಾಂಚ್ ಕಸ್ಟಡಿಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿದ್ದೇವೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement