ಕುಡಿದ ಅಮಲಿನಲ್ಲಿ ಮದುವೆ ಮಂಟಪದಲ್ಲಿ ವಧುವಿನ ತಂದೆ-ತಾಯಿಗೆ ಕಪಾಳಮೋಕ್ಷ ಮಾಡಿದ ವರ..! ಪೊಲೀಸರನ್ನು ಕರೆಸಿದ ವಧು…!!

ವರನೊಬ್ಬ ಕುಡಿದ ಮತ್ತಿನಲ್ಲಿ ವಧುವಿನ ಪೋಷಕರಿಗೆ ಕಪಾಳಮೋಕ್ಷ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ತಕ್ಷಣವೇ ವಧು ಪೊಲೀಸರಿಗೆ ಕರೆ ಮಾಡಿ ವರನನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾಳೆ.
ಉತ್ತರ ಪ್ರದೇಶದ ಬಂದಾ ಎಂಬಲ್ಲಿ ಈ ಘಟನೆ ನಡೆದಿದ್ದು, ಅಂಜಲಿ (18) ಎಂಬಾಕೆ ದಿಲೀಪ (25) ಎಂಬಾತನನ್ನು ವಿವಾಹವಾಗಬೇಕಿತ್ತು. ಸಂಪ್ರದಾಯದಂತೆ ಮದುವೆ ನಡೆಯುತ್ತಿದ್ದ ವೇಳೆ ವರ ದಿಲೀಪ ಏಕಾಏಕಿ ಅಂಜಲಿಯ ತಾಯಿ ಮನೀಶಾ ಮತ್ತು ತಂದೆ ಸಂತೋಷ ಅವರಿಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಯಿತು, ವಧು ಮದುವೆಯ ಸಮಾರಂಭವನ್ನೇ ನಿಲ್ಲಿಸಿದ್ದಾಳೆ ಹಾಗೂ ಘಟನೆಯ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದಾಳೆ.
ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ದಿಲೀಪ, ಅವರ ಅಣ್ಣ ದೀಪಕ, ಅವರ ಚಿಕ್ಕಪ್ಪ ಮಾತಾ ಪ್ರಸಾದ ಮತ್ತು ಅವರ ತಂದೆ ರಾಮಕೃಪಾಲ ಅವರನ್ನು ಠಾಣೆಗೆ ಕರೆದೊಯ್ದರು.

ಸಂಬಂಧಿಕರು ಮತ್ತು ಪೊಲೀಸರು ಮಧ್ಯಪ್ರವೇಶಿಸಿದ ನಂತರ, ಎರಡೂ ಕಡೆಯವರು ಮದುವೆಯನ್ನು ಮುಂದುವರಿಸಲು ಒಪ್ಪಿಕೊಂಡರು. ನಂತರ ವಿದ್ಯಾವಾಸಿನಿ ದೇವಸ್ಥಾನದಲ್ಲಿ ಉಭಯ ಪಕ್ಷಗಳ ಸಮ್ಮುಖದಲ್ಲಿ ಜಯಮಾಲಾ ಸಮಾರಂಭ ನೆರವೇರಿತು.
“ವಿಷಯವನ್ನು ಅವರ ಗಮನಕ್ಕೆ ತರಲಾಯಿತು ಮತ್ತು ಎರಡೂ ಕಡೆಯವರು ಮನವರಿಕೆ ಮಾಡಿದ ನಂತರ ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸಲಾಯಿತು. ಎರಡೂ ಕಡೆಯವರು ಒಪ್ಪಿಕೊಂಡಿದ್ದರಿಂದ ಯಾವುದೇ ಔಪಚಾರಿಕ ದೂರು ದಾಖಲಾಗಲಿಲ್ಲ. ಮದುವೆಯನ್ನು ಪೂರ್ಣಗೊಳಿಸಿ ಮೆರವಣಿಗೆ ಹೊರಟಿತು” ಎಂದು ಗಿರ್ವಾನ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ರಾಕೇಶಕುಮಾರ ತಿವಾರಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement