ಮುಂಬೈ: ಇಲ್ಲಿನ ಸ್ಪಾವೊಂದರಲ್ಲಿ ಹತ್ಯೆಗೀಡಾದ ಹಿಸ್ಟರಿ ಶೀಟರ್ ಒಬ್ಬ ತನಗೆ ತೊಂದರೆ ಮಾಡಬಹುದಾದ ಸಂಭಾವ್ಯ 22 ಶತ್ರುಗಳ ಹೆಸರನ್ನು ತಮ್ಮ ದೇಹದ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಅಧಿಕಾರಿಗಳು ಹತ್ಯೆಗೀಡಾದ ವ್ಯಕ್ತಿಯು ತನ್ನ ತೊಡೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ 22 ವ್ಯಕ್ತಿಗಳ ಹೆಸರಿನಿಂದಲೇ ಹಂತಕರ ಬಗ್ಗೆ ತಮ್ಮ ಆರಂಭಿಕ ಸುಳಿವು ಪಡೆದಿದ್ದಾರೆ. ತನಗೆ ಏನಾದರೂ ಅನಾಹುತ ಸಂಭವಿಸಿದಲ್ಲಿ ತಾನು ಹಚ್ಚೆ ಹಾಕಿಸಿಕೊಂಡ ವ್ಯಕ್ತಿಗಳೇ ಜವಾಬ್ದಾರರಾಗಿರುತ್ತಾರೆ ಎಂದು ಮೃತ ಬರೆದುಕೊಂಡಿದ್ದ. ಸ್ಪಾ ಮಾಲೀಕನ ಹೆಸರು ಸಹ ಆತ ಹಚ್ಚೆ ಹಾಕಿಸಿಕೊಂಡಿದ್ದ ಶತ್ರುಗಳ ಪಟ್ಟಿಯಲ್ಲಿ ಇತ್ತು. ಇದು ಕೊಲೆಗಾರರ ಸುಳಿವು ದೊರೆಯಲು ಕಾರಣವಾಯಿತು.
ಇದರ ಆಧಾರದ ಮೇಲೆ ಅವರು ಅಪರಾಧದ ನಂತರ ಒಂದು ದಿನದ ನಂತರ ಕನಿಷ್ಠ ಐವರು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಆತನಲ್ಲದೆ ಇನ್ನೂ ಇಬ್ಬರು ಬಂಧಿತ ಆರೋಪಿಗಳ ಹೆಸರು ವಾಘಮಾರೆ ಹಾಕಿಸಿಕೊಂಡ ಹಚ್ಚೆಯಲ್ಲಿತ್ತು ಎನ್ನಲಾಗಿದೆ.
ಹತ್ಯೆಯಾದ ಗುರು ವಾಘಮಾರೆ (48) ಮಾಹಿತಿ ಹಕ್ಕು ಕಾರ್ಯಕರ್ತ ಎಂದು ಹೇಳಿಕೊಳ್ಳುತ್ತಿದ್ದ. ಆದರೆ ಆತನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ, ಆತ ಬುಧವಾರ ಮುಂಜಾನೆ ಮಧ್ಯ ಮುಂಬೈನ ವರ್ಲಿಯಲ್ಲಿರುವ ಸಾಫ್ಟ್ ಟಚ್ ಎಂಬ ಸ್ಪಾದಲ್ಲಿ ಕೊಲ್ಲಲ್ಪಟ್ಟ. ಶವಪರೀಕ್ಷೆಯ ಸಮಯದಲ್ಲಿ, ಆತನು ತನ್ನ ಸಂಭಾವ್ಯ ಶತ್ರುಗಳ ಹೆಸರನ್ನು ತನ್ನ ತೊಡೆಯ ಮೇಲೆಹೆಚ್ಚೆ ಹಾಕಿಸಿಕೊಂಡಿರವುದು ಕಂಡುಬಂದಿದೆ. ಇದು ಪ್ರಕರಣ ಭೇದಿಸಲು ಸಹಾಯ ಮಾಡಿತು ಎಂದು ಅಧಿಕಾರಿ ಹೇಳಿದರು.
ವಾಘಮಾರೆ ಹಣ ಸುಲಿಗೆಗಾಗಿ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ವಾಘಮಾರೆಯನ್ನು ಕೊಲ್ಲಲು ಸ್ಪಾ ಮಾಲೀಕ ಶೇರೇಕರ ಸುಪಾರಿ’ ನೀಡಿದ್ದ ಎಂಬ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ. ವಾಘಮಾರೆಯನ್ನು ಕೊಲ್ಲಲು ಸ್ಪಾ ಮಾಲೀಕ, ಮೊಹಮ್ಮದ್ ಫಿರೋಜ್ ಅನ್ಸಾರಿ (26) ಎಂಬಾತನಿಗೆ 6 ಲಕ್ಷ ರೂ.ಗಳಿಗೆ ಸುಪಾರಿ ನೀಡಿದ್ದ ಎಂಬುದು ತನಿಖೆ ವೇಳೆ ಗೊತ್ತಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮೊಹಮ್ಮದ್ ಫಿರೋಜ್ ಅನ್ಸಾರಿ ಮತ್ತು ಸಂತೋಷ ಶೇರೇಕರ ಒಬ್ಬರಿಗೊಬ್ಬರು ಪರಿಚಯವವಿದ್ದವರು. ಅನ್ಸಾರಿ ಸಹ ಮುಂಬೈ ಬಳಿಯ ನಲ್ಲಸೊಪಾರಾದಲ್ಲಿ ಸ್ಪಾ ನಡೆಸುತ್ತಿದ್ದ, ಅದು ಕಳೆದ ವರ್ಷ ಪೊಲೀಸ್ ದಾಳಿಯ ನಂತರ ಮುಚ್ಚಲಾಗಿತ್ತು. ವಾಘಮಾರೆ ಅಧಿಕಾರಿಗಳಿಗೆ ನೀಡಿದ ದೂರಿನ ಮೇರೆಗೆ ಆತನ ಸ್ಪಾ ಮೇಲೆ ದಾಳಿ ನಡೆಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.
ವಾಘಮಾರೆ ಇಂತಹ ದೂರುಗಳನ್ನು ದಾಖಲಿಸುವುದನ್ನು ಮತ್ತು ಸ್ಪಾ ಮಾಲೀಕರಿಂದ ಹಣ ಸುಲಿಗೆ ಮಾಡುತ್ತಿದ್ದುದನ್ನು ತಡೆಯಲು ಈ ಅನ್ಸಾರಿ ಸ್ಪಾ ಮಾಲೀಕ ಶೇರೇಕರನನ್ನು ಸಂಪರ್ಕಿಸಿದ್ದ. ಆಗ ವಾಘಮಾರೆಯನ್ನು ಇನ್ನಿಲ್ಲದಂತೆ ಮಾಡಬೇಕು ಎಂದು ಶೇರೇಕರ್ ಅನ್ಸಾರಿ ಬಳಿ ಹೇಳಿದ್ದ, ಹಾಗೂ ಅನ್ಸಾರಿಗೆ ಸುಪಾರಿ ನೀಡಿದ್ದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ನಂತರ ಅನ್ಸಾರಿ ದೆಹಲಿ ನಿವಾಸಿ ಸಾಕಿಬ್ ಅನ್ಸಾರಿ ಎಂಬಾತನನ್ನು ಸಂಪರ್ಕಿಸಿದ ಮತ್ತು ಮೂರು ತಿಂಗಳ ಹಿಂದೆ ವಾಘಮಾರೆ ಮುಗಿಸಲು ಸಂಚು ರೂಪಿಸಲಾಯಿತು. ಮೂರು ತಿಂಗಳ ಕಾಲ ವಾಘ್ಮಾರೆ ದಿನಚರಿ ಅಧ್ಯಯನ ಮಾಡಿದ ನಂತರ, ಆರೋಪಿಗಳು ವಾಗಮಾರೆಯನ್ನು ಶೇರೇಕರ ಸ್ಪಾದಲ್ಲಿಯೇ ಕೊಲ್ಲಲು ಯೋಜಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಮಂಗಳವಾರ ಸಂಜೆ ವಾಘಮಾರೆ ತನ್ನ 21 ವರ್ಷದ ಗೆಳತಿಯೊಂದಿಗೆ ತನ್ನ ಜನ್ಮದಿನವನ್ನು ಆಚರಿಸಿಕೊಂಡಿದ್ದ. ಸಿಯಾನ್ನಲ್ಲಿರುವ ಮದ್ಯದ ಬಾರ್ನ ಹೊರಗಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ರೈನ್ಕೋಟ್ಗಳನ್ನು ಧರಿಸಿದ್ದ ಇಬ್ಬರು ದಾಳಿಕೋರರು ಕಂಡಿದ್ದಾರೆ. 7,000 ರೂಪಾಯಿ ಬೆಲೆಯ ಕತ್ತರಿಗಳ ಪ್ರತ್ಯೇಕವಾದ ಬ್ಲೇಡ್ಗಳನ್ನು ಬಳಸಿ ವಾಘಮಾರೆಯನ್ನು ಕೊಲೆ ಮಾಡಿದ್ದಾರೆ. ಒಂದು ಬ್ಲೇಡ್ನಿಂದ ಆತನ ಕತ್ತು ಸೀಳಲು ಬಳಸಿದರೆ, ಇನ್ನೊಂದನ್ನು ಹೊಟ್ಟೆಗೆ ಇರಿದಿದ್ದ. ದುಷ್ಕರ್ಮಿಗಳಲ್ಲಿ ಒಬ್ಬ ಮದ್ಯದ ಬಾರ್ ಬಳಿಯ ಪಾನ್ ಅಂಗಡಿಯಿಂದ ಎರಡು ಗುಟ್ಕಾ ಪ್ಯಾಕೆಟ್ಗಳನ್ನು ಯುಪಿಐ ಮೂಲಕ ಹಣ ಪಾವತಿಸಿ ಖರೀದಿಸಿದ್ದ. ಯುಪಿಐ ದಾಖಲೆಯಲ್ಲಿ ಆತನ ಹೆಸರು ಮೊಹಮ್ಮದ್ ಫಿರೋಜ್ ಅನ್ಸಾರಿ ಎಂದು ತೋರಿಸಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಅನ್ಸಾರಿ ಯುಪಿಐ ಐಡಿಗೆ ಲಿಂಕ್ ಮಾಡಲಾದ ಫೋನ್ ಸಂಖ್ಯೆಯಿಂದ ಶೇರೇಕರಗೆ ಅನೇಕ ಕರೆಗಳು ಬಂದಿವೆ ಎಂದು ತನಿಖೆಯಲ್ಲಿ ಕಂಡುಬಂದಿದೆ. ನಂತರ ಇದು ಎರಡರ ನಡುವಿನ ಲಿಂಕ್ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲು ಕಾರಣವಾಯಿತು.
ವಾಘಮಾರೆ 2010 ರಿಂದ ಮುಂಬೈ, ನವಿ ಮುಂಬೈ, ಥಾಣೆ ಮತ್ತು ಪಾಲ್ಘರ್ನಲ್ಲಿ ಸ್ಪಾ ಮಾಲೀಕರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದ ಮತ್ತು ಆತನ ವಿರುದ್ಧ ಸುಲಿಗೆ, ಅತ್ಯಾಚಾರ ಮತ್ತು ಕಿರುಕುಳದ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.
ವಾಘಮಾರೆ ವಿರುದ್ಧ ಎಂಟು ಕಾಗ್ನೈಸಬಲ್ ಅಪರಾಧ ಪ್ರಕರಣಗಳು ಮತ್ತು 22 ನಾನ್-ಕಾಗ್ನೈಸಬಲ್ ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ