ಹಾವು ಹಿಡಿಯುವವನನ್ನು ಕಚ್ಚಿದ ನಂತರ ಸತ್ತು ಹೋದ ಕಾಳಿಂಗ ಸರ್ಪ…! ಹಾವು ಸತ್ತಿದ್ದು ನಿಜ, ಆದ್ರೆ ಅಸಲಿಯತ್ತೇನು..?

ಹಾವುಗಳು ವಿಶ್ವದ ಅತ್ಯಂತ ಅಪಾಯಕಾರಿ ಸರೀಸೃಪಗಳಲ್ಲಿ ಒಂದಾಗಿದೆ. ಅನೇಕ ವಿಷಪೂರಿತ ಹಾವುಗಳು ಯಾವುದೇ ಜೀವಿಗಳನ್ನು ಒಂದೇ ಕಡಿತದಿಂದ ಸಾಯಿಸುವಷ್ಟು ಸಾಂರ್ಥ್ಯ ಹೊಂದಿವೆ. ಅತ್ಯಂತ ವಿಷಪೂರಿತ ಹಾವುಗಳಲ್ಲಿ ಕಾಳಿಂಗ ಸರ್ಪ ಸಹ ಒಂದಾಗಿದೆ. ಅದರ ವಿಷದ ಒಂದು ಅಥವಾ ಎರಡು ಹನಿಗಳು ವಯಸ್ಕ ಮನುಷ್ಯನನ್ನು ಕೆಲವೇ ಕ್ಷಣಗಳಲ್ಲಿ ಸಾಯಿಸಬಹುದಾಗಿದೆ. ಆದರೆ ಕಾಳಿಂಗ ಸರ್ಪ ಯಾರನ್ನಾದರೂ ಕಚ್ಚಿದ ನಂತರ ಅದೇ ಸಾಯುವುದನ್ನು ಎಂದಾದರೂ ಕೇಳಿದ್ದೀರಾ? ಇಂಥದೊಂದು ಅಸಾಮಾನ್ಯ ಘಟನೆ ಮಧ್ಯಪ್ರದೇಶದ ಸಾಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಹಾವು ಹಿಡಿಯುವ ಯುವಕನಿಗೆ ಕಾಳಿಂಗ ಸರ್ಪ ಕಚ್ಚಿದ ನಂತರ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅದರೆ ಕಚ್ಚಿದ ಕಾಳಿಂಗ ಸರ್ಪವೇ ಸತ್ತು ಹೋಗಿದೆ. ಎಂಬುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ನಾರ್ಯವಳ್ಳಿ ಠಾಣೆಯ ಪೊಲೀಸರು ಘಟನೆಯ ಬಗ್ಗೆ ತಿಳಿದು ಹಾವು ಹಿಡಿಯುವವರನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದಾಗ ಇಡೀ ಘಟನೆಯ ಅಸಲಿಯತ್ತು ಬಯಲಾಗಿದೆ ಎಂದು ವರದಿ ತಿಳಿಸಿದೆ.
ದಿ ಕಿಲ್ಲರ್ ಬೈಟ್
ಮಧ್ಯಪ್ರದೇಶದ ಬುಂದೇಲ್‌ಖಂಡ್ ಪ್ರದೇಶದಲ್ಲಿ ಕಾಳಿಂಗ ಸರ್ಪಗಳು ಹೆಚ್ಚಾಗಿ ಕಂಡುಬರುತ್ತದೆ. ಈ ಕಪ್ಪು ಹಾವಿನ ವಿಷವು ಎಷ್ಟು ಪ್ರಬಲವಾಗಿದೆಯೆಂದರೆ ಕಚ್ಚಿಸಿಕೊಂಡ ವ್ಯಕ್ತಿ ನೀರನ್ನು ಕೇಳುವ ಮೊದಲೇ ಸಾಯುತ್ತಾನೆ ಎಂಬ ಪ್ರತೀತಿ ಆ ಪ್ರದೇಶದಲ್ಲಿದೆ. ಅಂದರೆ ಅದರ ವಿಷ ಅಷ್ಟು ವೇಗವಾಗಿ ದೇಹವನ್ನೆಲ್ಲ ವ್ಯಾಪಿಸಿ ವ್ಯಕ್ತಿ ಸಾಯುತ್ತಾನೆ ಎಂಬುದನ್ನು ಅದು ಸೂಚಿಸುತ್ತದೆ. ಆದರೆ ಈ ಕುತೂಹಲಕಾರಿ ಘಟನೆಯಲ್ಲಿ ವ್ಯಕ್ತಿಗೆ ಕಚ್ಚಿದ ಕಾಳಿಂಗ ಸರ್ಪವೇ ಸತ್ತು ಹೋಗಿದೆ ಎಂಬ ಸುದ್ದಿ ವ್ಯಾಪಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

ನಡೆದಿದ್ದಾದರೂ ಏನು..?
ವರದಿಗಳ ಪ್ರಕಾರ, ನಾರಾಯಾವಳಿ ಎಂಬಲ್ಲಿನ ಸಾಗರ-ಖುರೈ ರಸ್ತೆಯಲ್ಲಿನ ತಡೆಗೋಡೆಯ ಸಮೀಪದಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಜನರು ತಕ್ಷಣವೇ ಹಾವು ಹಿಡಿಯುವ ಚಂದ್ರಕುಮಾರ ಅಹಿರ್ವಾರ್ ಎಂಬವರಿಗೆ ಮಾಹಿತಿ ನೀಡಿದ್ದಾರೆ.
ಜುಲೈ 18 ರಂದು ನಗರದ ಪ್ರಮುಖ ರಸ್ತೆ ತಡೆಗೋಡೆಯ ಬಳಿ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು ಎಂದು ಚಂದ್ರಕುಮಾರ ತಿಳಿಸಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ ಹಾವನ್ನು ಹಿಡಿದಿದ್ದಾರೆ. ಸುಮಾರು 6-7 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿಯಲಾಯಿತು.ಆದರೆ ಕೋಪಗೊಂಡ ಅದು ಎರಡು ಬಾರಿ ಅಬ್ಬರಿಸಿತು ಮತ್ತು ನಂತರ ಚಂದ್ರಕುಮಾರ ಅವರ ಎರಡೂ ಹೆಬ್ಬೆರಳುಗಳನ್ನು ಕಚ್ಚಿತು.
ನಂತರ ಚಂದ್ರಕುಮಾರ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು. ಅದೃಷ್ಟವಶಾತ್ ಅವರು ಸಂಪೂರ್ಣ ಗುಣಮುಖರಾಗಿ ಮನೆಗೆ ತೆರಳಿದರು. ನಂತರ, ಅವನನ್ನು ಕಚ್ಚಿದ ಅದೇ ಹಾವು ನಂತರ ಸೆರೆಯಲ್ಲಿ ಸತ್ತಿದೆ ಎಂಬ ಸುದ್ದಿ ಸಿಕ್ಕಿದೆ. ಹಾವು ಹಿಡಿಯುವವ ಅದನ್ನು ಹಿಡಿದಿದ್ದಾನೆ. ಅದನ್ನು ಪ್ಲಾಸ್ಟಿಕ್ ಬಾಕ್ಸ್‌ನಲ್ಲಿ ತುಂಬಿದ್ದಾನೆ. ಆದರೆ ಪ್ಲಾಸ್ಟಿಕ್ ಬಾಕ್ಸ್‌ಗೆ ಗಾಳಿ ಹೋಗಲು ಯಾವುದೇ ರಂಧ್ರಗಳನ್ನು ಮಾಡಲಿಲ್ಲ ಎಂದು ಕೆಲವು ಸ್ಥಳೀಯರು ಹೇಳಿದ್ದಾರೆ. ಪರಿಣಾಮವಾಗಿ, ಹಾವಿಗೆ ಆಮ್ಲಜನಕದ ಪೂರೈಕೆಯಾಗದೆ ಉಸಿರಾಡಲು ಸಾಧ್ಯವಾಗದೆ ಹಾವು ತನ್ನ ಪ್ರಾಣವನ್ನು ಕಳೆದುಕೊಂಡಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement