ಕಾಡಿಗೆ ಬಿಟ್ಟು ಬಂದರೂ ಮತ್ತೆ ಅದೇ ಅರಳಿಮರದ ಜಾಗಕ್ಕೆ ಬಂದ ನಾಗಿಣಿ; ಅದನ್ನು ನೋಡಲು ಜನರ ದಂಡು

ಧಾರ: ಮಧ್ಯಪ್ರದೇಶದ ಧಾರ ಜಿಲ್ಲೆಯ ಗಂಧವಾನಿ ಪ್ರದೇಶದ ಸಣ್ಣ ಗ್ರಾಮವಾದ ಸಾಲಿ ಒಂದು ನಾಗಿಣಿ(ಹೆಣ್ಣು ನಾಗರ ಹಾವು)ಯ ಕಾರಣದಿಂದ ರಾಜ್ಯಾದ್ಯಂತ ಚರ್ಚೆಯ ಕೇಂದ್ರಬಿಂದುವಾಗಿದೆ. ಗ್ರಾಮದ ರಸ್ತೆ ಬದಿಯ ಒಂದೇ ಸ್ಥಳದಲ್ಲಿ ಹಲವು ದಿನಗಳಿಂದ ನಿರಂತರವಾಗಿ ಕಾಣಿಸಿಕೊಳ್ಳುತ್ತಿರುವ ನಾಗಿಣಿ ಗ್ರಾಮಸ್ಥರಲ್ಲಿ ಆಶ್ಚರ್ಯ, ಕುತೂಹಲ ಮತ್ತು ಭಕ್ತಿಭಾವ ಮೂಡಿಸಿದೆ. ಅಷ್ಟೇ ಅಲ್ಲದೆ, ಅರಣ್ಯ ಇಲಾಖೆ ರಕ್ಷಿಸಿ ಕಾಡಿಗೆ ಬಿಟ್ಟ … Continued

ಎರಡು ಬಾರಿ ಕಚ್ಚಿದ ವಿಷಪೂರಿತ ಹಾವು ; ತೀವ್ರ ಅಸ್ವಸ್ಥಗೊಂಡ ಪೊಲೀಸ್ ಕಾನ್‌ಸ್ಟೆಬಲ್‌ ಜೀವ ಉಳಿಸಲು ನೆರವಾದ ಎಐ(AI)

ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವಿಷಕಾರಿ ಹಾವು ಎರಡು ಬಾರಿ ಕಚ್ಚಿದ ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ ಒಬ್ಬರಿಗೆ ತುರ್ತು ಸಂದರ್ಭದಲ್ಲಿ ಎಐ (AI) ಉಪಕರಣದಿಂದ ಪಡೆದ ಮಾಹಿತಿಯು ಚಿಕಿತ್ಸೆಗೆ ನೆರವಾದ ಘಟನೆ ವರದಿಯಾಗಿದೆ. ಹಾವಿನ ಚಿತ್ರವನ್ನು ಎಐ (AI) ಟೂಲ್‌ ಮೂಲಕ ವಿಶ್ಲೇಷಿಸಿ, ಅದರ ಜಾತಿ ಹಾಗೂ ವಿಷದ ಪರಿಣಾಮಗಳ ಕುರಿತು ಮಾಹಿತಿ ಪಡೆಯಲಾಗಿತ್ತು. ಈ … Continued

ಮದುವೆ ಮನೆಯಲ್ಲಿ ಪೊಲೀಸ್ ಅಧಿಕಾರಿ ಹತ್ಯೆ ; ಹೆಸರು ಬದಲಿಸಿಕೊಂಡು ನಕಲಿ ವೈದ್ಯನಾಗಿ ಬದುಕಿದ್ದ ಆರೋಪಿ 28 ವರ್ಷಗಳ ನಂತರ ಸೆರೆ…!

ನವದೆಹಲಿ: ಸುಮಾರು 28 ವರ್ಷಗಳ ಕಾಲ ಪೊಲೀಸರ ಕಣ್ಣಿಗೆ ಮಣ್ಣೆರಚಿ, ತನ್ನ ಗುರುತನ್ನೇ ಬದಲಿಸಿಕೊಂಡು ಮಧ್ಯಪ್ರದೇಶದ ಸಣ್ಣ ಪಟ್ಟಣದಲ್ಲಿ ‘ಡಾ. ಝಟ್ಕಾ’ ಎಂಬ ಹೆಸರಿನಲ್ಲಿ ವೈದ್ಯನಂತೆ ನಟಿಸಿ ಹೊಸ ಜೀವನ ಕಟ್ಟಿಕೊಂಡಿದ್ದ ಪರಾರಿಯಾಗಿದ್ದ ಕುಖ್ಯಾತ ವ್ಯಕ್ತಿಯನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ಕೊನೆಗೂ ಬಂಧಿಸಿದೆ. 53 ವರ್ಷದ ರಾಜಿಂದರ ಬೈರಾಗಿ ಅಲಿಯಾಸ್ ರಾಜಿಂದರ ಸಿಂಗ್ ಯಾದವ್ … Continued

ಸಾವೂ ಬೇರ್ಪಡಿಸಲಿಲ್ಲ ಇವರಿಬ್ಬರ ಬಂಧವನ್ನು…; ಯಜಮಾನನ ಶವಯಾತ್ರೆಯಲ್ಲೇ ಪ್ರಾಣ ಬಿಟ್ಟ ನಿಷ್ಠಾವಂತ ನಾಯಿ ʼದುಗ್ಗುʼ

ಭೋಪಾಲ್:  ಪ್ರೀತಿಗೆ ಮಾತುಗಳ ಅಗತ್ಯವಿಲ್ಲ… ನಿಷ್ಠೆಗೆ ಭಾಷೆಯ ಅಗತ್ಯವಿಲ್ಲ… ಕೆಲವೊಮ್ಮೆ ಮನುಷ್ಯರಿಗಿಂತಲೂ ಪ್ರಾಣಿಗಳೇ ಸಂಬಂಧಗಳ ನಿಜವಾದ ಅರ್ಥವನ್ನು ಬದುಕಿನ ಕೊನೆಯ ಕ್ಷಣದವರೆಗೂ ತೋರಿಸಿಬಿಡುತ್ತವೆ. ಅಂತಹ ಮನಮಿಡಿಯುವ ಘಟನೆ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯಲ್ಲಿ ನಡೆದಿದೆ. 15 ವರ್ಷಗಳ ಕಾಲ ತನ್ನ ಯಜಮಾನನೇ ತನ್ನ ಪ್ರಪಂಚ ಎಂದು ಬದುಕಿದ ‘ದುಗ್ಗು’ ಎಂಬ ಸಾಕು ನಾಯಿ, ಮೃತಪಟ್ಟ ಯಜಮಾನನ ಅಂತಿಮ … Continued

ಸೋಶಿಯಲ್ ಮೀಡಿಯಾದಲ್ಲಿ ಮನೆಯಲ್ಲಿದ್ದ ಒಡವೆ ಪ್ರದರ್ಶಿಸಿದ ಯೂಟ್ಯೂಬರ್ ; ಮನೆ ಹೊಕ್ಕು ಚಿನ್ನಾಭರಣ ಕದ್ದೊಯ್ದ ಕಳ್ಳರು !

ಶಿವಪುರಿ :  ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್ ಮತ್ತು ಫಾಲೋವರ್ಸ್ ಗಳಿಸಲು ತಮ್ಮ ಮನೆಯ ಒಳಾಂಗಣ, ಮನೆಯೊಳಗಿನ ವಸ್ತುಗಳು ಹಾಗೂ ಸಂಪತ್ತನ್ನು ಪ್ರದರ್ಶಿಸುವವರಿಗೆ ಮಧ್ಯಪ್ರದೇಶದ ಈ ಘಟನೆ ಒಂದು ದೊಡ್ಡ ಎಚ್ಚರಿಕೆ ಗಂಟೆಯಾಗಿದೆ. ಯೂಟ್ಯೂಬರ್ ಒಬ್ಬರು ತಮ್ಮ ಮನೆಯ ಒಳಗಿನ ದೃಶ್ಯ ಹಾಗೂ ಒಡವೆ-ನಗದನ್ನು ವೀಡಿಯೊ ಮಾಡಿ ಶೇರ್ ಮಾಡಿದ ಕೆಲವೇ ದಿನಗಳಲ್ಲಿ, ಕಳ್ಳರು ಅವರ ಮನೆಗೇ … Continued

ತ್ವಿಶಾ ಶರ್ಮಾ ಸಾವಿನ ಪ್ರಕರಣ ; ಪ್ರಮುಖ ಸಾಕ್ಷಿಯ ಮೇಲೆ ಹಲ್ಲೆ, ಬೆದರಿಕೆ : ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಭೋಪಾಲ್ : ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿರುವ ತ್ವಿಶಾ ಶರ್ಮಾ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆರೋಪಿ ಸಮರ್ಥ ಸಿಂಗ್‌ನ ಸ್ನೇಹಿತರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಕೋರ್ಟ್‌ನಲ್ಲಿ ಸಾಕ್ಷಿ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣದ ಪ್ರಮುಖ ಸಾಕ್ಷಿಯೊಬ್ಬರು ಆರೋಪಿಸಿದ್ದಾರೆ. ಯುವತಿಯ ಕುಟುಂಬಸ್ಥರು … Continued

ತ್ವಿಶಾ ಶರ್ಮಾ ಸಾವು : ಅತ್ತೆ-ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್‌ ಬಂಧಿಸಿದ ಸಿಬಿಐ

ಭೋಪಾಲ್‌ : ತ್ವಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಸಿಬಿಐ (CBI) ಅಧಿಕಾರಿಗಳು,ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ತ್ವಿಶಾ ಅತ್ತೆ ಗಿರಿಬಾಲಾ ಸಿಂಗ್ ಅವರನ್ನು ಭೋಪಾಲ್‌ನಲ್ಲಿ ಗುರುವಾರ ಬಂಧಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಟ್ವಿಶಾ ಶರ್ಮಾ ಅವರು ತಮ್ಮ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಗಿರಿಬಾಲಾ ಸಿಂಗ್ ಅವರಿಗೆ ಮೇ 15 ರಂದು ಭೋಪಾಲ್‌ನ 10ನೇ … Continued

ಟ್ವಿಶಾ ಶರ್ಮಾ ಸಾವಿನ ಪ್ರಕರಣ: 10 ದಿನಗಳಿಂದ ತಲೆಮರೆಸಿಕೊಂಡಿದ್ದ ಪತಿ ಕೊನೆಗೂ ಅರೆಸ್ಟ್

 ಭೋಪಾಲ್: ತನ್ನ ಪತ್ನಿ ಟ್ವಿಶಾ ಶರ್ಮಾ ಸಾವಿಗೀಡಾದ ನಂತರ ಕಳೆದ 10 ದಿನಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಓಡಾಡುತ್ತಿದ್ದ ಪತಿ ಸಮರ್ಥ ಸಿಂಗ್‌ನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಿಂದ ವಕೀಲನಾಗಿರುವ ಸಮರ್ಥ ಸಿಂಗ್, ಮಧ್ಯಪ್ರದೇಶ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ತನ್ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆದ ಕೆಲವೇ ಗಂಟೆಗಳಲ್ಲಿ ಜಬಲಪುರ ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದ. ಆದರೆ, ಭೋಪಾಲ … Continued

ತಾನು ಬದುಕಿರುವಾಗಲೇ ಮರಣಾ ನಂತರದ ಕ್ರಿಯಾ ಕರ್ಮ ನೆರವೇರಿಸಿ ಸಾವಿರಾರು ಜನರಿಗೆ ಊಟ ಹಾಕಿಸಿದ ವೃದ್ಧ ; ಕಾರಣ..?

ಶಿವಪುರಿ (ಮಧ್ಯಪ್ರದೇಶ) : ನನ್ನ ಮರಣದ ನಂತರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸುವವರು ಯಾರು ಎಂಬ ಚಿಂತೆ ಆ 60 ವರ್ಷದ ವೃದ್ಧನನ್ನು ಬಹುವಾಗಿ ಕಾಡುತ್ತಿತ್ತು. ಇದೇ ಕಾರಣಕ್ಕೆ ಆತ ಬದುಕಿರುವಾಗಲೇ ತನಗಾಗಿ ಸ್ವತಃ ತಾನೇ ಮರಣೋತ್ತರ ಕ್ರಿಯಾ ಕರ್ಮಗಳನ್ನು ನೆರವೇರಿಸಿದ ಅಪರೂಪದ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ. ಈ ವಿಲಕ್ಷಣ ಘಟನೆ ಶಿವಪುರಿಯ ಕರೇರಾ ವ್ಯಾಪ್ತಿಯ … Continued

ಸಿನಿಮೀಯ ಸ್ಟೈಲ್‌ನಲ್ಲಿ ಐಎಎಸ್ ಕೋಚಿಂಗ್‌ ಅಕಾಡೆಮಿ ನಿರ್ದೇಶಕಿ ಅಪಹರಣ: 1.89 ಕೋಟಿ ರೂ. ಸುಲಿಗೆ ಮಾಡಿ ಆಸ್ಪತ್ರೆ ಐಸಿಯುವಿನಲ್ಲಿ ಅಡಗಿದ್ದ ಆರೋಪಿ…!

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಅತ್ಯಂತ ಭೀಕರ ಹಾಗೂ ಸಿನಿಮೀಯ ಮಾದರಿಯ ಹೈಪ್ರೊಫೈಲ್‌  ಅಪಹರಣ ಹಾಗೂ ಸುಲಿಗೆ ಪ್ರಕರಣವೊಂದು ನಡೆದಿದೆ. ದೆಹಲಿ ಮೂಲದ ಪ್ರಖ್ಯಾತ ‘ಶುಭ್ರಾ ರಂಜನ್ ಐಎಎಸ್ ಅಕಾಡೆಮಿ’ಯ ನಿರ್ದೇಶಕಿಯನ್ನು ಅಪಹರಿಸಿ, ನಾಲ್ಕು ಗಂಟೆಗಳ ಕಾಲ ಒತ್ತೆಯಾಳಾಗಿ ಇರಿಸಿಕೊಂಡು, ಹಣೆ ಮೇಲೆ ಪಿಸ್ತೂಲ್ ಇಟ್ಟು ಬರೋಬ್ಬರಿ 1.89 ಕೋಟಿ ರೂಪಾಯಿಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡ … Continued