ಮದುವೆ ಸಂಭ್ರಮ ಕೆಲವೇ ಗಂಟೆಗಳಲ್ಲಿ ಮಾಯ : ಮೊದಲ ರಾತ್ರಿಯೇ ಮದುಮಗ ಆಸ್ಪತ್ರೆ ಸೇರಿದ…ಮದುಮಗಳು ಚಿನ್ನಾಭರಣ-ಹಣದೊಂದಿಗೆ ಪರಾರಿ…!

ಮದುವೆಯ ಸಂಭ್ರಮದ ಮೊದಲರಾತ್ರಿಯೇ ಮದುಮಗಳೇ ನವವಿವಾಹಿತನಿಗೆ ವಿಲನ್‌ ಆಗಿದ್ದು,ಪ್ರಜ್ಞಾಹೀನನಾದ ಮದುಮಗ ಆಸ್ಪತ್ರೆಗೆ ದಾಖಲಾಗಿದ್ದಾನೆ…! ಮದುಮಗನಿಗೆ ನೀಡುವ ಹಾಲಿನಲ್ಲಿ ನಿದ್ದೆ ಬರುವ ವಸ್ತು ಹಾಕಿ ಆತನ ಪ್ರಜ್ಞೆ ತಪ್ಪಿಸಿದ ವಧುವು ಲಕ್ಷಾಂತರ ರೂ.ಗಳ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಬೆಳಗಾಗುವಷ್ಟರಲ್ಲಿ ಪರಾರಿಯಾಗಿದ್ದಾಳೆ…!! ಮಧ್ಯಪ್ರದೇಶದ  ಛತ್ತರ್‌ಪುರ ಜಿಲ್ಲೆಯ ನೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. … Continued

ವೀಡಿಯೊ…| ತಡರಾತ್ರಿ ಪಿಜ್ಜಾ ಆರ್ಡರ್‌ ತೆಗೆದುಕೊಳ್ಳಲು ನಿರಾಕರಿಸಿದ್ದಕ್ಕೆ ಕೆಫೆಯಲ್ಲಿ ಗುಂಡು ಹಾರಿಸಿ ಸಿಬ್ಬಂದಿ ಬೆದರಿಸಿ ಪಿಜ್ಜಾ ತಿಂದ ಇಬ್ಬರು ಯುವಕರು…!

ಭೋಪಾಲ್ : ತಡರಾತ್ರಿ ಪಿಜ್ಜಾ ನೀಡಲು ಸಿಬ್ಬಂದಿ ನಿರಾಕರಿಸಿದ ಕಾರಣ ರೌಡಿಯೊಬ್ಬ ಕೆಫೆಯ ಪ್ರವೇಶ ದ್ವಾರದಲ್ಲಿ ಗುಂಡಿನ ದಾಳಿ ನಡೆಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬುಧವಾರ ನಡೆದಿದೆ ಎಂದು ವರದಿಯಾಗಿದೆ. ಈ ವೇಳೆ ಕೆಲವೇ ಜನರಿದ್ದರು ಮತ್ತು ಕೆಫೆ ಮುಚ್ಚುವ ಸಮಯದಲ್ಲಿ ಕೆಫೆಗೆ ಇಬ್ಬರು ಯುವಕರು ನುಗ್ಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಅವರಲ್ಲಿ ಒಬ್ಬ ಕೈಯಲ್ಲಿ ಕಪ್ಪು … Continued

ವೀಡಿಯೊ…| ನನ್ನಪ್ಪನನ್ನು ಜೈಲಿಗೆ ಹಾಕಿ ; ತಂದೆ ವಿರುದ್ಧ ದೂರು ನೀಡಲು ಪೊಲೀಸ್‌ ಠಾಣೆಗೆ ಬಂದ 5 ವರ್ಷದ ಪುಟ್ಟ ಪೋರ ; ಪೊಲೀಸರು ಸುಸ್ತು !

ಇತ್ತೀಚೆಗೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ 5 ವರ್ಷದ ಪುಟ್ಟ ಪೋರನೊಬ್ಬ ತನ್ನ ತಂದೆಯ ವಿರುದ್ಧ ದೂರು ದಾಖಲು ಮಾಡಲು ಪೊಲೀಸ್‌ ಠಾಣೆಗೆ ಬಂದಿದ್ದಾನೆ..! ಯಾರ ಭಯವೂ ಇಲ್ಲದೆ ನೇರವಾಗಿ ಪೊಲೀಸ್‌ ಠಾಣೆಗೆ ಬಂದ 5 ವರ್ಷದ ಬಾಲಕ ನದಿ ನೀರಿನಲ್ಲಿ ಆಟವಾಡಲು ಬಿಡದ ಹಾಗೂ ಜನನಿಬಿಡ ಬೀದಿಯಲ್ಲಿ ಆಟವಾಡುವುದನ್ನು ನಿರ್ಬಂಧಿಸಿದ್ದರಿಂದ ತಂದೆಯ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ … Continued

ಹಾವು ಹಿಡಿಯುವವನನ್ನು ಕಚ್ಚಿದ ನಂತರ ಸತ್ತು ಹೋದ ಕಾಳಿಂಗ ಸರ್ಪ…! ಹಾವು ಸತ್ತಿದ್ದು ನಿಜ, ಆದ್ರೆ ಅಸಲಿಯತ್ತೇನು..?

ಹಾವುಗಳು ವಿಶ್ವದ ಅತ್ಯಂತ ಅಪಾಯಕಾರಿ ಸರೀಸೃಪಗಳಲ್ಲಿ ಒಂದಾಗಿದೆ. ಅನೇಕ ವಿಷಪೂರಿತ ಹಾವುಗಳು ಯಾವುದೇ ಜೀವಿಗಳನ್ನು ಒಂದೇ ಕಡಿತದಿಂದ ಸಾಯಿಸುವಷ್ಟು ಸಾಂರ್ಥ್ಯ ಹೊಂದಿವೆ. ಅತ್ಯಂತ ವಿಷಪೂರಿತ ಹಾವುಗಳಲ್ಲಿ ಕಾಳಿಂಗ ಸರ್ಪ ಸಹ ಒಂದಾಗಿದೆ. ಅದರ ವಿಷದ ಒಂದು ಅಥವಾ ಎರಡು ಹನಿಗಳು ವಯಸ್ಕ ಮನುಷ್ಯನನ್ನು ಕೆಲವೇ ಕ್ಷಣಗಳಲ್ಲಿ ಸಾಯಿಸಬಹುದಾಗಿದೆ. ಆದರೆ ಕಾಳಿಂಗ ಸರ್ಪ ಯಾರನ್ನಾದರೂ ಕಚ್ಚಿದ ನಂತರ … Continued

ಮೈ ಜುಂ ಎನ್ನುವ ವೀಡಿಯೊ..| ಮಧ್ಯಪ್ರದೇಶದಲ್ಲಿ ವ್ಯಕ್ತಿಯನ್ನು ಜೀವಂತವಾಗಿ ನುಂಗಲು ಯತ್ನಿಸಿದ 15 ಅಡಿ ಹೆಬ್ಬಾವು…

ಮಧ್ಯಪ್ರದೇಶದ ಜಬಲ್‌ಪುರದ ಕಲ್ಯಾಣಪುರ ಪ್ರದೇಶದಲ್ಲಿ 15 ಅಡಿ ಉದ್ದದ ಹೆಬ್ಬಾವಿನ ದಾಳಿಯಿಂದ ವ್ಯಕ್ತಿಯೊಬ್ಬರು ಸ್ವಲ್ಪದರಲ್ಲೇ ಬದುಕುಳಿದಿದ್ದಾರೆ. ಕ್ಯಾಮೆರಾದಲ್ಲಿ ಸೆರೆಯಾದ ಭಯಾನಕ ಘಟನೆಯಲ್ಲಿ ತೆರೆದ ಮೈದಾನದಲ್ಲಿ ಮಲವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಹೆಬ್ಬಾವು ವ್ಯಕ್ತಿಯ ಕುತ್ತಿಗೆಗೆ ಬಲವಾಗಿ ಸುತ್ತು ಹಾಕಿ ಹಿಡಿದುಕೊಂಡಿದೆ. ಸಕಾಲದಲ್ಲಿ ನೆರವಿಗೆ ಬಂದ ಗ್ರಾಮಸ್ಥರಿಂದ ವ್ಯಕ್ತಿಯ ಜೀವ ಉಳಿದಿದೆ. ಇಂಡಿಯಾ ಟುಡೇ … Continued

ಕರ್ನಾಟಕ ಸೇರಿ ಹಲವು ರಾಜ್ಯಗಳಿಗೆ ಉಸ್ತುವಾರಿ, ಸಹ ಉಸ್ತುವಾರಿ ನೇಮಿಸಿದ ಬಿಜೆಪಿ

ನವದೆಹಲಿ: ಬಿಜೆಪಿಯು ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಿಗೆ ರಾಜ್ಯ ಉಸ್ತುವಾರಿಗಳು ಮತ್ತು ಸಹ-ಉಸ್ತುವಾರಿಗಳನ್ನು ನೇಮಕ ಮಾಡಿದೆ. ಮುಂಬರುವ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿಟ್ಟು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಶುಕ್ರವಾರ ಈ ನೇಮಕ ಮಾಡಿದ್ದಾರೆ. ವಿವಿಧ ರಾಜ್ಯಗಳ ಉಸ್ತುವಾರಿಗಳು ಹಾಗೂ ಸಹ ಉಸ್ತುವಾರಿಗಳು… ಕರ್ನಾಟಕ : ಡಾ. ರಾಧಾಮೋಹನದಾಸ್ ಅಗರ್ವಾಲ್-ಉಸ್ತುವಾರಿ, ಪ್ರಭಾಕರ ರೆಡ್ಡಿ- … Continued

ಫ್ರಿಡ್ಜ್‌ ಗಳಲ್ಲಿ ಗೋಮಾಂಸ ಪತ್ತೆಯಾದ ನಂತರ 11 ಮನೆಗಳು ನೆಲಸಮ

ಅಕ್ರಮ ಗೋಮಾಂಸ ವ್ಯಾಪಾರದ ವಿರುದ್ಧ ಕ್ರಮದ ಭಾಗವಾಗಿ ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಮಾಂಡ್ಲಾದಲ್ಲಿ 11 ವ್ಯಕ್ತಿಗಳು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿಕೊಂಡಿದ್ದ ಮೆನಗಳನ್ನು ನೆಲಸಮಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನೈನ್‌ಪುರದ ಭೈನ್‌ವಾಹಿ ಪ್ರದೇಶದಲ್ಲಿ ಮಾಂಸಕ್ಕಾಗಿ ಹೆಚ್ಚಿನ ಸಂಖ್ಯೆಯ ಹಸುಗಳನ್ನು ತರಲಾಗಿದೆ ಎಂಬ ಸುಳಿವು ದೊರೆತ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡ್ಲಾ ಪೊಲೀಸ್ ವರಿಷ್ಠಾಧಿಕಾರಿ … Continued

ವೀಡಿಯೊ..| ಯೋಗ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜ ಬೀಸುತ್ತ ಡ್ಯಾನ್ಸ್ ಮಾಡುವಾಗ ಪ್ರಾಣಬಿಟ್ಟ ನಿವೃತ್ತ ಸೈನಿಕ ; ಯೋಗ ಮಾಡುತ್ತಿದ್ದಾನೆಂದು ತಿಳಿದು ಚಪ್ಪಾಳೆ ತಟ್ಟಿದ ಜನ

ಮಧ್ಯಪ್ರದೇಶದ ಇಂದೋರ್ (Indore) ಯೋಗ ಕೇಂದ್ರದಲ್ಲಿ ಆಸ್ತ ಯೋಗ ಕ್ರಾಂತಿ ಅಭಿಯಾನದ ವತಿಯಿಂದ ನಡೆದ ಯೋಗ ಕಾರ್ಯಕ್ರಮದಲ್ಲಿ ನಗು ಮತ್ತು ತೂಕ ಇಳಿಸುವ ಯೋಗಕ್ಕೆ ಹೆಸರಾದ ಬಲ್ವಿಂದರ್ ಸಿಂಗ್ ಛಾಬ್ರಾ (Balwinder Singh Chhabra) ಎಂಬ ನಿವೃತ್ತ ಸೈನಿಕ ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ವೇದಿಕೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ಕುಸಿದುಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಯೋಗ … Continued

ವೀಡಿಯೊ | ಪೊಲೀಸರ “ನಿಷ್ಕ್ರಿಯತೆ”ಗೆ ಹತಾಶೆಗೊಂಡು ಠಾಣೆಗೆ ಬಂದು ಪೊಲೀಸ್ ಅಧಿಕಾರಿಗೆ ‘ಆರತಿ’ ಮಾಡಿದ ದಂಪತಿ..!. ಆದರೆ…

ಭೋಪಾಲ್: ಮಧ್ಯಪ್ರದೇಶದ ದಂಪತಿ ಪೊಲೀಸ್ ಠಾಣೆಗೆ ಆಗಮಿಸಿ ಅಧಿಕಾರಿಯೊಬ್ಬರಿಗೆ ‘ಆರತಿ’ ಮಾಡಿದ್ದಾರೆ…! ಆದರೆ ಇದು ಗೌರವ ಸೂಚಕವಾಗಿ ಮಾಡಿದ್ದಲ್ಲ, ಬದಲಾಗಿ ಕಳ್ಳತನದ ದೂರಿನಲ್ಲಿ ಪೊಲೀಸರ ನಿಷ್ಕ್ರಿಯತೆಯ ಬಗ್ಗೆ ತಮ್ಮ ಹತಾಶೆ ತೋರಿಸಲು ದಂಪತಿ ಈ ರೀತಿ ಮಾಡಿದ್ದಾರೆ ಎಂದು ವರದಿಯಾಗಿದೆ. ದಂಪತಿ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಮಾಲಾರ್ಪಣೆ ಮಾಡಲು ಪ್ರಯತ್ನಿಸಿದರು ಮತ್ತು ಅವರಿಗೆ ಮುಜುಗರವನ್ನುಂಟು ಮಾಡಲು ಶಾಲು … Continued

ಏಪ್ರಿಲ್‌-ಜೂನ್‌ ಅವಧಿಯಲ್ಲಿ ದೇಶದಲ್ಲಿ ಭಾರೀ ಬಿಸಿಲು ; ಕರ್ನಾಟಕದ ಈ ಭಾಗಗಳಲ್ಲಿ ಬಿಸಿಗಾಳಿಯ ಕೆಟ್ಟ ಪರಿಣಾಮ ; ಹವಾಮಾನ ಇಲಾಖೆ

ನವದೆಹಲಿ : ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಮುಂದಿನ ಹಲವು ದಿನಗಳಲ್ಲಿ ಬಿಸಿಲಿನ ಧಗೆ ಏರಲಿದೆ ಎಂದಿರುವ ಹವಾಮಾನ ಇಲಾಖೆ ಉಷ್ಣ ಮಾರುತದ ಎಚ್ಚರಿಕೆ ನೀಡಿದೆ. ಏಪ್ರಿಲ್‌ ಮೊದಲ ವಾರದಿಂದಲೇ ದೇಶದ ದಕ್ಷಿಣ, ಉತ್ತರ, ಕೇಂದ್ರ ಭಾಗಗಳಲ್ಲಿ ಉಷ್ಣ ಗಾಳಿ ಹೆಚ್ಚಲಿದೆ. ಏಪ್ರಿಲ್‌-ಜೂನ್‌ ತಿಂಗಳಲ್ಲಿ ಸಾಮನ್ಯಕ್ಕಿಂತ ಹೆಚ್ಚಿನ ತಾಪಮಾನ ಕಂಡು ಬರಲಿದೆ. ಕರ್ನಾಟಕ, ಆಂಧ್ರಪ್ರದೇಶ, ಗುಜರಾತ್‌, … Continued