3ನೇ ಹೆಂಡತಿಯಿಂದ ವ್ಯಕ್ತಿಯ ಕೊಲೆ…2ನೇ ಹೆಂಡತಿಯಿಂದ ಮೃತದೇಹ ಪತ್ತೆ…3 ಮದುವೆಯಾಗಿದ್ದ ವ್ಯಕ್ತಿಯ ಕೊಲೆ ಹಿಂದಿತ್ತು ದ್ರೋಹ-ಪಿತೂರಿ…

ಭೋಪಾಲ್: ಮಧ್ಯಪ್ರದೇಶದ ಹಳ್ಳಿಯೊಂದರ ಬಾವಿಯಲ್ಲಿ ವ್ಯಕ್ತಿಯೊಬ್ಬನ ಶವ ಕಂಬಳಿಯಲ್ಲಿ ಸುತ್ತಿ ಚೀಲದಲ್ಲಿ ತುಂಬಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಸಾಮಾನ್ಯ ಕೊಲೆ ಪ್ರಕರಣದಂತೆ ಮೇಲ್ನೋಟಕ್ಕೆ ಕಂಡರೂ ನಂತರದಲ್ಲಿ ದ್ರೋಹ ಮತ್ತು ಪಿತೂರಿಯ ಕಥೆ ಎಂಬುದು ಬಹಿರಂಗವಾಯಿತು. ಮಧ್ಯಪ್ರದೇಶದ ಅನುಪ್ಪುರ ಜಿಲ್ಲೆಯ ಸಕಾರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಮೃತ ವ್ಯಕ್ತಿಯನ್ನು 60 ವರ್ಷದ ಭಯ್ಯಾಲಾಜ … Continued

ಒಂದು ಇಟ್ಟಿಗೆ ಬೆಲೆ ಎಷ್ಟು…? ಈ ಪಂಚಾಯತದಲ್ಲಿ ದರಕ್ಕಿಂತ 10 ಪಟ್ಟು ಹೆಚ್ಚು ಬಿಲ್‌ ಮಾಡಿದ್ರೂ ಅದಕ್ಕೆ ಓಕೆ….!

ಮಧ್ಯಪ್ರದೇಶದ ಶಹದೋಲ್‌ನ ಪಟೇರಾ ಟೋಲಾದಲ್ಲಿ ಅಂಗನವಾಡಿ ಕಟ್ಟಡದ ಗಡಿ ಗೋಡೆ ನಿರ್ಮಾಣಕ್ಕಾಗಿ, 2,500 ಇಟ್ಟಿಗೆಗಳಿಗೆ 1.25 ಲಕ್ಷ ರೂ. ಬಿಲ್ ಅನ್ನು ಮಧ್ಯಪ್ರದೇಶದ ಶಹದೋಲಿನ ಗ್ರಾಮ ಪಂಚಾಯತ ಅನುಮೋದಿಸಿದೆ. ಪೆರಿಬಹರಾ ಗ್ರಾಮದ ಚೇತನಪ್ರಸಾದ ಕುಶ್ವಾಹ ಅವರ ಹೆಸರಿನಲ್ಲಿ, ಸರಪಂಚ ಮತ್ತು ಪಂಚಾಯತ ಕಾರ್ಯದರ್ಶಿಯ ಶಾಮೀಲಿನಿಂದ ಬಿಲ್‌ ಸ್ವೀಕರಿಸಲಾಗಿದೆ ಎಂದು ಹೇಳಲಾದ ಈ ಬಿಲ್‌ ಸಾಮಾಜಿಕ ಮಾಧ್ಯಮ … Continued

ಗರ್ಭದಲ್ಲೇ ಮಗು ಸತ್ತಿದೆ ಎಂದ ಒಂದು ಆಸ್ಪತ್ರೆ….ಕೆಲವೇ ಗಂಟೆಗಳಲ್ಲಿ ಮತ್ತೊಂದು ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಮಹಿಳೆ…!

ಸತ್ನಾ : ಸರ್ಕಾರಿ ಆಸ್ಪತ್ರೆಯ ವೈದ್ಯರು ಭ್ರೂಣ ಮೃತಪಟ್ಟಿದೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಮಹಿಳೆಯೊಬ್ಬರು ಖಾಸಗಿ ನರ್ಸಿಂಗ್ ಹೋಂನಲ್ಲಿ ಆರೋಗ್ಯವಂತ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ನಡೆದಿದೆ. ಹೆರಿಗೆ ನೋವು ಆರಂಭವಾದ ನಂತರ ರಾಂಪುರ ಬಾಗೇಲನ್‌ನ ಚಕೇಹ್ರಾ ಗ್ರಾಮದ ನಿವಾಸಿಯಾದ ದುರ್ಗಾ ದ್ವಿವೇದಿ ಅವರನ್ನು ಸೋಮವಾರ ತಡರಾತ್ರಿ ಅಮತಪಟನ್ … Continued

ಇದೆಂಥ ಪವಾಡ…| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ…! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

ಸಕಂಡಿ: ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯಲ್ಲಿ ಗಣಿತ ಮತ್ತು ಮಾನವಶಕ್ತಿಯ ಪವಾಡವೇ ನಡೆದಿದೆ ಎಂದು ವರದಿಯಾಗಿದೆ. ಸಕಂಡಿ ಗ್ರಾಮದ ಸರ್ಕಾರಿ ಶಾಲೆಯ ಒಂದು ಗೋಡೆಗೆ ನಾಲ್ಕು ಲೀಟರ್ ಬಣ್ಣವನ್ನು ಹಚ್ಚಲು 168 ಕಾರ್ಮಿಕರು ಮತ್ತು 65 ಮೇಸ್ತ್ರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ವರದಿಗಳು ಹೇಳಿವೆ. ಇದರ ಬಿಲ್‌ ಈಗ ಆನ್ಲೈನ್‌ನಲ್ಲಿ ವೈರಲ್‌ ಆದ ನಂತರ ವ್ಯಾಪಕ ಟೀಕೆಗೆ ಗುರಿಯಾಗಿದೆ. … Continued

ಕೂದಲು ಹಿಡಿದು ಜಗ್ಗಾಡಿ ಹೊಡೆದಾಡಿಕೊಂಡ ಪ್ರಾಂಶುಪಾಲೆ-ಗ್ರಂಥಪಾಲಕಿ ; ವೀಡಿಯೊ ವೈರಲ್

ಪ್ರಾಂಶುಪಾಲರು ಮತ್ತು ಗ್ರಂಥಪಾಲಕರ ನಡುವೆ ವಾಗ್ವಾದದ ನಂತರ ಇಬ್ಬರ ಮಧ್ಯೆ ಹೊಡೆದಾಟಕ್ಕೆ ಕಾರಣವಾದ ಘಟನೆ ಮಧ್ಯಪ್ರದೇಶದ ಶಾಲೆಯೊಂದರಲ್ಲಿ ನಡೆದಿದೆ. ಅವರ ಜಗಳದ ವೀಡಿಯೊ ವೈರಲ್‌ ಆದ ನಂತರ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಲಾಗಿದೆ. ಅವರು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. ಭೋಪಾಲ್‌ನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿರುವ ಏಕಲವ್ಯ ಆದರ್ಶ ಶಾಲೆಯಲ್ಲಿ ಈ … Continued

ವೀಡಿಯೊ..| ಬಾಯಾರಿದ್ದ ಚಿರತೆಗಳಿಗೆ ಬಹಳ ಹತ್ತಿರ ಹೋಗಿ ನೀರು ಕುಡಿಸಿದ ತಪ್ಪಿಗೆ ಕೆಲಸ ಕಳೆದುಕೊಂಡ ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ..!

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಚಿರತೆ ಮತ್ತು ಅದರ ಮರಿಗಳಿಗೆ ನೀರು ನೀಡುತ್ತಿರುವ ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡ ಚಾಲಕನ ವಿರುದ್ಧ ಅಧಿಕೃತ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ನಂತರ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಅರಣ್ಯ ಇಲಾಖೆಯಲ್ಲಿ ಚಾಲಕನಾಗಿದ್ದ ಈತ ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ನಮೀಬಿಯಾದಿಂದ ತರಲಾಗಿದ್ದ ಚೀತಾಗಳಲ್ಲಿ ಒಂದಾದ ಜ್ವಾಲಾ ಮತ್ತು ಅದರ ನಾಲ್ಕು … Continued

ಮಧ್ಯರಾತ್ರಿ ಮನೆಗಳ ಡೋರ್‌ ಬೆಲ್‌ ಬಾರಿಸುವ ನಿಗೂಢ ಮಹಿಳೆ ; ನಂತರ ಮಾಯ | ಸಿಸಿಟಿವಿಯಲ್ಲಿ ದೃಶ್ಯಾವಳಿ ಸೆರೆ

ಮಧ್ಯಪ್ರದೇಶದ ಗ್ವಾಲಿಯರ್‌ ನಿವಾಸಿಗಳು ನಿಗೂಢ ಮಹಿಳೆಯೊಬ್ಬಳು ತಡರಾತ್ರಿಯಲ್ಲಿ ಭಯಾನಕ ರೀತಿಯಲ್ಲಿ ನಡೆದುಕೊಂಡು ಬಂದು ಮನೆಗಳ ಡೋರ್‌ಬೆಲ್‌ಗಳನ್ನು ಬಾರಿಸಿ ಕಣ್ಮರೆಯಾಗುತ್ತಿರುವುದಕ್ಕೆ ಬೆಚ್ಚಿಬಿದ್ದಿದ್ದಾರೆ. ಇದರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಹೊರಹೊಮ್ಮಿವೆ. ಮಾಧ್ಯಮ ವರದಿಗಳ ಪ್ರಕಾರ, ರಾಜಾ ಮಂಡಿ ಮತ್ತು ಸೋನಾ ಗಾರ್ಡನ್ ಪ್ರದೇಶದಲ್ಲಿ ನಿಗೂಢ ಮಹಿಳೆ ಮಧ್ಯರಾತ್ರಿಯಲ್ಲಿ ಡೋರ್‌ಬೆಲ್‌ಗಳನ್ನು ಬಾರಿಸುವುದು ಮತ್ತು ಯಾವುದೇ ಪ್ರತಿಕ್ರಿಯೆ ನೀಡದೆ ಹೊರಟು ಹೋಗುತ್ತಿರುವ … Continued

ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಮೊಮ್ಮಗನ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಅಜ್ಜ…!

ಸಿಧಿ : ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಪತ್ನಿಯನ್ನು ಕೊಂದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮೊಮ್ಮಗನ ಅಂತ್ಯಕ್ರಿಯೆ ವೇಳೆ ಚಿತೆಗೆ ಹಾರಿ ಅಜ್ಜ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಬಹ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಹೋಲಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಭಯರಾಜಯಾದವ್ (34) ಎಂದು ಗುರುತಿಸಲಾದ … Continued

ವೀಡಿಯೊ…| ಕಾರು ಗುದ್ದಿದ ಸಿಟ್ಟಿಗೆ ನಾಯಿ ಸೇಡು ತೀರಿಸಿಕೊಂಡಿದ್ದು ಹೇಗೆ ನೋಡಿ

ಬಾಲಿವುಡ್ ಚಲನಚಿತ್ರ ತೇರಿ ಮೆಹರ್‌ ಬಾನಿಯಾ ಅನ್ನು ನೆನಪಿಸಿಕೊಳ್ಳಿ, ಇದರಲ್ಲಿ ನಾಯಿಯೊಂದು ತನ್ನ ಮಾಲೀಕನ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳುತ್ತದೆ. ಮಧ್ಯಪ್ರದೇಶದ ಬುಂದೇಲ್‌ಖಂಡ್ ಪ್ರದೇಶದ ಸಾಗರ ಎಂಬಲ್ಲಿ ನಾಯಿ ಸೇಡಿನ ಸಂಚು ಬೆಳಕಿಗೆ ಬಂದಿದೆ. ಸಾಗರ ನಿವಾಸಿ ಪ್ರಹ್ಲಾದ ಸಿಂಗ್ ಘೋಶಿ ಎಂಬವರು ತಮ್ಮ ಕಾರನ್ನು ತಿರುಗಿಸುತ್ತಿದ್ದಾಗ ಆಕಸ್ಮಿಕವಾಗಿ ಕಾರು ನಾಯಿಗೆ ಡಿಕ್ಕಿ ಹೊಡೆದಿದೆ. ನಾಯಿಗೆ ಯಾವುದೇ … Continued

ಕುಡಿದ ಮತ್ತಿನಲ್ಲಿ ಗಂಡನಿಗೆ 12 ಬಾರಿ ಕಚ್ಚಿ ಗಾಯಗೊಳಿಸಿ, ಆಸಿಡ್ ಎರಚಿದ ಪತ್ನಿ…!

ಭೋಪಾಲ : ಮಧ್ಯಪ್ರದೇಶದ ಭೋಪಾಲದಲ್ಲಿ 61 ವರ್ಷದ ವ್ಯಕ್ತಿಯೊಬ್ಬನ ಮೇಲೆ ಆತನ ಪತ್ನಿ ಹಲ್ಲೆ ನಡೆಸಿದ್ದು, ಜಗಳದ ವೇಳೆ ಆತನಿಗೆ 12 ಬಾರಿ ಕಚ್ಚಿದ್ದಾಳೆ ಹಾಗೂ ಆಸಿಡ್ ಎರಚಿದ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಭೋಪಾಲದ ನಿಶಾತಪುರದ ವಿಶ್ವಕರ್ಮ ನಗರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 61 ವರ್ಷದ ವ್ಯಕ್ತಿಯ ಮೇಲೆ ಆತನ ಪತ್ನಿ … Continued