ಲಕ್ನೋ : ಅಯೋಧ್ಯೆಯ ರಾಮಮಂದಿರದ ಟ್ರಸ್ಟ್ಗೆ ದಾನಿಯೊಬ್ಬರು ಬರೋಬ್ಬರಿ 2,100 ಕೋಟಿ ರೂ.. ಮೊತ್ತದ ಚೆಕ್ ಕಳಹಿಸಿದ್ದಾರೆ. ಈ ಚೆಕ್ ಮೇಲೆ ದಾನಿ ಹೆಸರು, ವಿಳಾಸ, ಫೋನ್ ನಂಬರ್ ಇದೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಟ್ವಿಸ್ಟ್ ಏನೆಂದರೆ ಚೆಕ್ ಕಳುಹಿಸಿದ ದಾನಿ ಅದನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿ ಹೆಸರಿಗೆ ಟ್ರಸ್ಟ್ಗೆ ಪೋಸ್ಟ್ ಮಾಡಿದ್ದು, ಇದು ಗೊಂದಲಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ.
ಈಗ ಈ ಚೆಕ್ ಬಗ್ಗೆ ಸಂಪೂರ್ಣ ವಿವರ ತಿಳಿಯಲು ಪ್ರಧಾನಿ ಸಚಿವಾಲಯವನ್ನು ಸಂಪರ್ಕಿಸಲು ಟ್ರಸ್ಟ್ ಮುಂದಾಗಿದೆ. ಶ್ರೀರಾಮ ಜನಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತರಾಯ ಅವರು ಪ್ರಧಾನಮಂತ್ರಿಗಳ ಪರಿಹಾರ ನಿಧಿಯ ಹೆಸರಿನಲ್ಲಿ ಬರೆದ ಚೆಕ್ ಅನ್ನು ಅಂಚೆ ಮೂಲಕ ಟ್ರಸ್ಟ್ಗೆ ಕಳುಹಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.
ಎರಡು ದಿನಗಳ ಹಿಂದೆಯೇ ಚೆಕ್ ತಮ ಕಚೇರಿಗೆ ತಲುಪಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಪ್ರಧಾನಿ ಕಚೇರಿಗೆ ಕಳುಹಿಸುವಂತೆ ಟ್ರಸ್ಟ್ನ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಪಡೆಯಲು ಟ್ರಸ್ಟ್ ಅದರ ಕಾನೂನುಬದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ಕಚೇರಿಗೆ (PMO)ಗೆ ಚೆಕ್ ಕಳುಹಿಸಿ ಹೆಚ್ಚಿನ ಸ್ಪಷ್ಟತೆಯನ್ನು ಪಡೆಯಲು ಮುಂದಾಗಿದೆ.
ಮತ್ತೊಂದೆಡೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಗುರುವಾರ 2023-24ನೇ ಹಣಕಾಸು ವರ್ಷದ ಆದಾಯ ಮತ್ತು ವೆಚ್ಚದ ವಿವರಗಳನ್ನು ಬಹಿರಂಗಪಡಿಸಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಬ್ಯಾಂಕ್ ಖಾತೆಯಲ್ಲಿ ಎಫ್ಡಿ ರೂಪದಲ್ಲಿ 2,600 ಕೋಟಿಗಳನ್ನು ಇಡಲಾಗಿದೆ. ದೇವಾಲಯ ನಿರ್ಮಾಣಕ್ಕೆ ಟ್ರಸ್ಟ್ 776 ರೂ. ದೇವಾಲಯದ ಟ್ರಸ್ಟ್ನಿಂದ ವೆಚ್ಚ ಮಾಡಲಾಗಿದೆ. ಈವರೆಗೆ 1,850 ಕೋಟಿ ರೂ.ಗಳನ್ನು ದೇವಾಲಯ ನಿರ್ಮಾಣ ಮತ್ತು ಇತರ ವೆಚ್ಚಗಳಿಗೆ ಖರ್ಚು ಮಾಡಲಾಗಿದೆ ಎಂದು ತಿಳಿಸಲಾಗಿದೆ.ಕಳೆದ ವರ್ಷ ದೇವಸ್ಥಾನ ನಿರ್ಮಾಣಕ್ಕೆ 776 ಕೋಟಿ ರೂ., ದೇವಸ್ಥಾನಕ್ಕೆ 540 ಕೋಟಿ ರೂ., ಹಾಗೂ ಇತರೆ ವೆಚ್ಚಕ್ಕೆ 136 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದೆ.
ಇಡೀ ದೇವಾಲಯ ನಿರ್ಮಾಣಕ್ಕೆ ಈವರೆಗೆ 1,850 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಆರ್ಥಿಕ ವರ್ಷದಲ್ಲಿ 850 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಲಾಗಿದೆ.
ಕಳೆದ ಆರ್ಥಿಕ ವರ್ಷದಲ್ಲಿ 363.34 ಕೋಟಿ ರೂ. ಬ್ಯಾಂಕ್ ಬಡ್ಡಿ ರೂಪದಲ್ಲಿ ಬಂದಿದ್ದು, 58 ಕೋಟಿ ರೂ. ಹುಂಡಿ ಮೂಲಕ 24.50 ಕೋಟಿ ರೂ., ಆನ್ಲೈನ್ ಮೂಲಕ 71 ಕೋಟಿ ರೂ. ಅನಿವಾಸಿ ಭಾರತೀಯರಿಂದ 10.43 ಕೋಟಿ ದೇಣಿಗೆ ಬಂದಿದೆ.
ನಿಮ್ಮ ಕಾಮೆಂಟ್ ಬರೆಯಿರಿ