ಸೂರತ್ : ಅತೀ ವೇಗದಲ್ಲಿ ವಾಹನ ಚಲಾಯಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಗೂಡ್ಸ್ ಟೆಂಪೋ ಚಾಲಕ ಆ ವ್ಯಕ್ತಿಯ ಮೇಲೆ ಟೆಂಪೋ ಹರಿಸಿದ ಅಮಾನುಷ ಘಟನೆ ಗುಜರಾತಿನ (Gujarat) ಸೂರತ್ನಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಇದನ್ನು ತಡೆಯಲು ಯತ್ನಿಸಿದ ಮಗನ್ನು ಸಲ್ಪ ದೂರ ಟೆಂಪೋ ಎಳೆದೊಯ್ದಿದೆ. ಘಟನೆಯಲ್ಲಿ ವಾಹನ ಮೈಮೇಲೆ ಹರಿದ ವ್ಯಕ್ತಿ ಮೃತ ಪಟ್ಟಿದ್ದಾರೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟೆಂಪೋ ಚಾಲಕನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ (ನ. 16) ಮಧ್ಯಾಹ್ನ 3:30ರ ಸುಮಾರಿಗೆ ರತ್ನಮಾಲಾ ಅಡ್ಡರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟ ವ್ಯಕ್ತಿಯನ್ನು 56 ವರ್ಷದ ಜಿತೇಂದ್ರ ಕಂಠಾರಿಯಾ ಎಂದು ಗುರುತಿಸಲಾಗಿದೆ.
ಕಂಠಾರಿಯಾ ಮತ್ತು ಅವರ ಮಗ ಟ್ರಾಫಿಕ್ ಸಿಗ್ನಲ್ನಲ್ಲಿ ಕಾಯುತ್ತಿದ್ದಾಗ ಟೆಂಪೋ ಅವರ ಮೋಟಾರ್ ಸೈಕಲ್ಗೆ ಡಿಕ್ಕಿ ಹೊಡೆದಿದೆ.ನಂತರ ಅತೀ ವೇಗದಲ್ಲಿ ಟೆಂಪೋ ಚಲಾಯಿಸುತ್ತಿದ್ದ ಟೆಂಪೋ ಚಾಲಕನ ಜತೆ ಅವರು ವಾಗ್ವಾದಕ್ಕೆ ಇಳಿದಿದ್ದಾರೆ. ನಂತರ ಚಾಲಕ ಇವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಂತರ ತನ್ನ ವಾಹನವನ್ನು ಕಂಠಾರಿಯಾ ಮೇಲೆ ಹರಿಸಿದ್ದಾನೆ, ನಂತರ ಆತ ಅಲ್ಲಿಂದ ಪರಾರಿಯಾಗುವ ಮೊದಲು ಕಂಠಾರಿಯಾ ಅವರನ್ನು ಸುಮಾರು 15 ಅಡಿಗಳಷ್ಟು ಎಳೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಜಿತೇಂದ್ರ ಕಂಠಾರಿಯಾ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟೆಂಪೋ ಚಾಲಕನನ್ನು ಹಿಡಿದು ನಿಲ್ಲಿಸಲು ಯತ್ನಿಸಿದ ಅವರ ಮಗನನ್ನು ಹಾಗೆಯೇ ಮಾಡಲು ಪ್ರಯತ್ನಿಸಿದ್ದಾನೆ.
ತಂದೆ-ಮಗ ಇಬ್ಬರು ತನ್ನ ಜೊತೆ ವಾಗ್ವಾದಕ್ಕೆ ಇಳಿದಾಗ ಹೆದರಿಕೆ ಉಂಟಾಗಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದೆ ಎಂದು ಆರೋಪಿ ನಂತರ ಹೇಳಿಕೆಯಲ್ಲಿ ಹೇಳಿಕೊಂಡಿದ್ದಾನೆ, ಅವರು ತನ್ನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾನೆ. ಸದ್ಯ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಅ
ನಿಮ್ಮ ಕಾಮೆಂಟ್ ಬರೆಯಿರಿ