ಲಕ್ನೋ: ಒಂದು ವಾರದ ಹಿಂದೆ ಭಾರತೀಯ ಆಹಾರ ನಿಗಮದ (ಎಫ್ಸಿಐ) ಗೋದಾಮಿನಲ್ಲಿ 145 ಮಂಗಗಳನ್ನು ಸತ್ತಿದ್ದು, ಅವುಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪದ ಮೇಲೆ ಉತ್ತರ ಪ್ರದೇಶದ ಹತ್ರಾಸ್ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಶುಕ್ರವಾರ (ನವೆಂಬರ್ 22) ಪೊಲೀಸರು ಗುಂಡಿಯಲ್ಲಿ ಹೂತಿದ್ದ ಮಂಗಗಳ ದೇಹಗಳನ್ನು ಹೊರತೆಗೆದಿದ್ದಾರೆ. ನಂತರ ಪಶುವೈದ್ಯರ ತಂಡವು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿದೆ.
ನವೆಂಬರ್ 20 ರಂದು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 286 ಮತ್ತು 291 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿಯಾಗಿ, ಆರೋಪಿಗಳ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ನಿಬಂಧನೆಗಳನ್ನು ಅನ್ವಯಿಸಲಾಗಿದೆ.
“ನವೆಂಬರ್ 19 ರಂದು ಎಫ್ಸಿಐನ ಗೋಡೌನ್ನಲ್ಲಿ ಹಲವಾರು ಮಂಗಗಳನ್ನು ಹೂಳಲಾಗಿದೆ ಎಂಬ ಮಾಹಿತಿ ಬಂದಿತ್ತು ಎಂದು ದೂರುದಾರ ಹರ್ಷಿತ್ ಗೌರ್ ಆರೋಪಿಸಿದ್ದಾರೆ. ತಾನು ಘಟನೆಯ ಬಗ್ಗೆ ಎಸ್ಡಿಎಂ ಹತ್ರಾಸ್ ಮತ್ತು ಸರ್ಕಲ್ ಆಫೀಸರ್ ಸದರ್ ಅವರಿಗೆ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ನವೆಂಬರ್ 7ರಂದು ಎಫ್ಸಿಐ ಗೋದಾಮಿನಲ್ಲಿ ಕೀಟಗಳು ಮತ್ತು ಇಲಿಗಳಿಂದ ದಾನ್ಯಗಳನ್ನು ರಕ್ಷಿಸಲು ಗೋಧಿ ಚೀಲಗಳ ಮೇಲೆ ಅಲ್ಯೂಮಿನಿಯಂ ಫಾಸ್ಫೈಡ್ ಅನ್ನು ಸಿಂಪಡಿಸಲಾಗಿತ್ತು.
ನವೆಂಬರ್ 9ರಂದು ಕೆಲವು ಮಂಗಗಳು ಆಹಾರ ಧಾನ್ಯಗಳ ಧೂಮೀಕರಣವನ್ನು ಬಳಸಿದವು ಎಂದು ಎಫ್ಸಿಐ ಸಿಬ್ಬಂದಿ ಹರ್ಷಿತ್ ಗೌರ್ ಅವರಿಗೆ ಮಾಹಿತಿ ನೀಡಿದರು.ಮಂಗಗಳು ಗೋಡೌನ್ ಪ್ರವೇಶಿಸಿದ ನಂತರ ಸಾವಿಗೀಡಾಗಿವೆ. ಹಿಂದೂ ಸಂಪ್ರದಾಯಗಳ ಪ್ರಕಾರ ಮಂಗಗಳನ್ನು ಸಮಾಧಿ ಮಾಡಲಾಗಿದೆ ಎಂದು ಗೌರ್ ಹೇಳಿದ್ದಾರೆ.
ನವೆಂಬರ್ 7ರ ರಾತ್ರಿ ಗೋಡೌನ್ನ ಮುರಿದ ಕಿಟಕಿಯ ಮೂಲಕ ಕೋತಿಗಳ ಪಡೆ ಗೋದಾಮಿನೊಳಗೆ ಪ್ರವೇಶಿಸಿತು, ನಂತರ ಅವುಗಳಿಗೆ ಉಸಿರಾಟದ ತೊಂದರೆಯಾಗಿದೆ ಎಂದು ಹೇಳಲಾಗಿದೆ. ನವೆಂಬರ್ 9 ರಂದು ಕಾರ್ಮಿಕರು ಗೋದಾಮನ್ನು ತೆರೆದಾಗ, ಹಲವಾರು ಮಂಗಗಳು ಸತ್ತಿರುವುದನ್ನು ನೋಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹತ್ರಾಸ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ಎಫ್ಸಿಐ ತಂಡವನ್ನೂ ರಚಿಸಿದೆ.
ಕೋತಿಗಳ ಸಾವಿನ ಬಗ್ಗೆ ಅಥವಾ ಘಟನೆಯ ಬಗ್ಗೆ ಯಾವುದೇ ಗೋಡೌನ್ ಉದ್ಯೋಗಿ ಬಹಿರಂಗಪಡಿಸಿಲ್ಲ ಎಂದು ಗೌರ್ ಆರೋಪಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ತಿನ ಹಲವು ಮುಖಂಡರು ಸ್ಥಳಕ್ಕೆ ಬಂದ ನಂತರ ಶವಗಳನ್ನು ಹೊರತೆಗೆಯಲಾಗಿದೆ.
ಎಫ್ಸಿಐನ ಗೋದಾಮು 17,000 ಮೆಟ್ರಿಕ್ ಟನ್ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಕಲ್ವಾರಿ ರಸ್ತೆಯ ಸಮೀಪದಲ್ಲಿದೆ. ಸುಮಾರು 12,000 ಮೆಟ್ರಿಕ್ ಟನ್ ಗೋಧಿಯನ್ನು ಇಲ್ಲಿ ಸಂಗ್ರಹಿಸಲಾಗಿದೆ. ಜಿಲ್ಲೆಯಾದ್ಯಂತ ಪಡಿತರದಾರರಿಗೆ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತದೆ ಮತ್ತು ಸರಬರಾಜು ಮಾಡಲಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ