ವೀಡಿಯೊ..| ಬರಿಗೈಯಲ್ಲಿ ಚಿರತೆಯ ಕುತ್ತಿಗೆ ಅಮುಕಿ ಹಿಡಿದ ಗುಂಪು ; ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಆಕ್ಷೇಪ

ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ ಗ್ರಾಮಸ್ಥರ ಗುಂಪು ತಮ್ಮ ಕೈಗಳಿಂದಲೇ ಚಿರತೆ ಹಿಡಿದುಕೊಂಡಿರುವುದು ಕಂಡುಬಂದಿದೆ. ಉತ್ತರ ಪ್ರದೇಶದ ಮಹಾರಾಜಗಂಜ್‌ನ ಲಾಲ್‌ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ತಮ್ಮ ಪ್ರದೇಶದಲ್ಲಿ ಅವರೇ ಚಿರತೆ ಹಿಡಿದ ನಂತರ ಚಿರತೆಯ ಕುತ್ತಿಗೆಯನ್ನು ಕೆಲವರು ಬರಿ ಕೈಯಿಂದ ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆದರೆ ಚಿರತೆಯನ್ನು ನಿರ್ವಹಿಸಿದ ರೀತಿಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ವರದಿ ಪ್ರಕಾರ, ಚಿರತೆಯ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದ್ದರೂ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.

ಅರಣ್ಯ ಇಲಾಖೆಯ ನಿಷ್ಕ್ರಿಯತೆಯಿಂದ ಹತಾಶರಾದ ಸ್ಥಳೀಯರು ನಂತರ ತಾವೇ ಕ್ರಮಕ್ಕೆ ಮುಂದಾದರು. ಮತ್ತು ಚಿರತೆಯನ್ನು ತಾವೇ ಸೆರೆಹಿಡಿದರು.ತಮ್ಮ ಗ್ರಾಮದಲ್ಲಿ ಚಿರತೆಯ ಉಪಟಳದಿಂದಾಗಿ ಹೆಚ್ಚುತ್ತಿರುವ ಭಯದ ಪರಿಣಾಮವಾಗಿ ಅವರು ಇಂತಹ ನಿರ್ದಾರ ತೆಗೆದುಕೊಂಡರು ಎಂದು ಹೇಳಲಾಗಿದೆ.ಗ್ರಾಮಸ್ಥರು ಚಿರತೆಯನ್ನು ಹಿಡಿಯುವಲ್ಲಿ ಯಶಸ್ವಿಯಾದ ನಂತರ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ನಂತರ ಅರಣ್ಯ ಇಲಾಖೆಯವರು ಆಗಮಿಸಿದ್ದಾರೆ.

ಮಹಾರಾಜ್‌ಗಂಜ್ ಜಿಲ್ಲೆಯ ನೌತನ್ವಾ ತಹಸಿಲ್‌ನ ಲಾಲ್‌ಪುರ ಗ್ರಾಮದಲ್ಲಿ ಚಿರತೆಯ ಚಟುವಟಿಕೆಯಿಂದಾಗಿ ಗ್ರಾಮಸ್ಥರಲ್ಲಿ ಭಯದ ವಾತಾವರಣವಿತ್ತು. ಅರಣ್ಯ ಇಲಾಖೆಗೆ ತಿಳಿಸಿದರೂ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ಗ್ರಾಮಸ್ಥರ ಆಕ್ರೋಶ ಹೆಚ್ಚಾಯಿತು. ಕೊನೆಗೆ ಸಿಟ್ಟಿಗೆದ್ದ ಗ್ರಾಮಸ್ಥರೇ ಚಿರತೆಯನ್ನು ಹಿಡಿಯಲು ಯತ್ನಿಸಿದ್ದು, ಹರಸಾಹಸ ಪಟ್ಟು ಚಿರತೆಯನ್ನು ಹಿಡಿದಿದ್ದಾರೆ. ಈ ಸಂಪೂರ್ಣ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ತಂಡವು ಸ್ಥಳಕ್ಕೆ ತಲುಪಿ ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಕ್ರಮ ಕೈಗೊಂಡಿದೆ, ”ಎಂದು ಉತ್ತರ ಪ್ರದೇಶ. ORG ನ್ಯೂಸ್ ಹಂಚಿಕೊಂಡ ಶೀರ್ಷಿಕೆ ಹೇಳಿದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement