ಮಹಾಕುಂಭ ಮೇಳ : ಕಿನ್ನರ ಅಖಾಡದಿಂದ ನಟಿ ಮಮತಾ ಕುಲಕರ್ಣಿ ಉಚ್ಛಾಟನೆ

ಲಕ್ನೋ : ಬಾಲಿವುಡ್‌ ಮಾಜಿ ನಟಿ ಮಮತಾ ಕುಲಕರ್ಣಿ (Mamata Kulkarni) ಅವರನ್ನು ಅವರನ್ನು ಕಿನ್ನರ ಅಖಾಡದ ಮಹಾಮಂಡಲೇಶ್ವರ ಹುದ್ದೆಯಿಂದ ತೆಗೆದುಹಾಕಲಾಗಿದೆ.
ಇವರೊಂದಿಗೆ ಲಕ್ಷ್ಮೀ ನಾರಾಯಣ ತ್ರಿಪಾಠಿ (Laxmi Narayan) ಅವರನ್ನು ಆಚಾರ್ಯ ಮಹಾಮಂಡಲೇಶ್ವರ ಹುದ್ದೆಯಿಂದ ತೆಗೆದುಹಾಕಲಾಗಿದೆ. ಕಿನ್ನರ್ ಅಖಾಡದ ಸಂಸ್ಥಾಪಕ ಅಜಯ ದಾಸ್ ಅವರು ಈ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಿನ್ನರ್ ಅಖಾಡದ ಸಂಸ್ಥಾಪಕ ಅಜಯ ದಾಸ್, ಕಿನ್ನರ್ ಅಖಾಡವನ್ನು ಹೊಸದಾಗಿ ಮರುಸಂಘಟಿಸಲಾಗುವುದು. ಅಲ್ಲದೆ, ನೂತನ ಆಚಾರ್ಯ ಮಹಾಮಂಡಲೇಶ್ವರರನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ. ಸಂಸ್ಥಾಪಕರ ಒಪ್ಪಿಗೆಯಿಲ್ಲದೆ ತ್ರಿಪಾಠಿ ಅವರು ಕುಲಕರ್ಣಿ ಅವರನ್ನು ನೇಮಕ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಮಮತಾ ಕುಲಕರ್ಣಿ ಅವರು ತಮ್ಮ ಪಿಂಡ ದಾನವನ್ನು ಮಾಡಿದ್ದರು. ಆ ನಂತರ ಅವರು ಸನ್ಯಾಸಿ ದೀಕ್ಷೆಯನ್ನು ಸ್ವೀಕರಿಸಿದ್ದರು. ಇದಾದ ನಂತರ ಅವರನ್ನು ಕಿನ್ನರ ಅಖಾರದ ಮಹಾಮಂಡಲೇಶ್ವರನನ್ನಾಗಿ ಮಾಡಲಾಯಿತು. ಆಗ ವಿವಾದ ಸೃಷ್ಟಿಯಾಗಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಮಮತಾ ಕುಲಕರ್ಣಿ ಅವರು ಲಕ್ಷ್ಮಿ ನಾರಾಯಣ ತ್ರಿಪಾಠಿ ಅವರು ತಮ್ಮ 23 ವರ್ಷಗಳ ತಪಸ್ಸು ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು. ನಂತರ ಮಮತಾ ಕುಲಕರ್ಣಿಯ ಪರೀಕ್ಷೆ ಮಾಡಲಾಯಿತು. ಅದರಲ್ಲಿ ಅವಳು ಉತ್ತೀರ್ಣಳಾಗಿದ್ದರು. ನಂತರ ಆಕೆಯನ್ನು ಮಹಾಮಂಡಲೇಶ್ವರರಾಗಲು ಆಹ್ವಾನಿಸಲಾಯಿತು. ಆ ಬಳಿಕ ತಾನು ಮತ್ತೆ ಬಾಲಿವುಡ್‌ಗೆ ಹೋಗುವುದಿಲ್ಲ, ಸನಾತನ ಧರ್ಮವನ್ನು ಪ್ರಚಾರ ಮಾಡುತ್ತೇನೆ ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement