ಬಸ್‌ ಒಳಗೆ ಜಗಳ ; ಚಾಕುವಿನಿಂದ ಇರಿದು ಪ್ರಯಾಣಿಕನ ಕೊಲೆ

ಶಿರಸಿ : ಹೆಂಡತಿ ಜೊತೆ ಬೆಂಗಳೂರಿಗೆ  ವಾಪಸ್ ಬರುತ್ತಿದ್ದ ವ್ಯಕ್ತಿಯನ್ನು ಚಾಕು ಇರಿದು ಕೊಲೆ ಮಾಡಲಾಗಿದೆ. ಇಂಥದ್ದೊಂದು ಘಟನೆ ಉತ್ತರ ಕನ್ನಡ ( ಉತ್ತರ ಕನ್ನಡ  ಜಿಲ್ಲೆಯ ಶಿರಸಿಯಲ್ಲಿ (Sirsi) ಶನಿವಾರ ಸಂಜೆ ನಡೆದಿದೆ. ಗಂಗಾಧರ ಎಂಬಾತ ಕೊಲೆಯಾದ ವ್ಯಕ್ತಿ. ಪ್ರೀತಮ್ ಡಿಸೋಜಾ ಎಂಬಾತ ಚಾಕು ಇರಿದು ಕೊಲೆ ಮಾಡಿದ ಆರೋಪಿಯಾಗಿದ್ದ. ಆದರೆ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದುತಿಳಿದುಬಂದಿದೆ.
ಹೆಂಡತಿ ಜೊತೆ ಮಾವನ ಮನೆಯಿಂದ ಬೆಂಗಳೂರಿಗೆ ಹೋಗಲು ಶಿರಸಿಯಲ್ಲಿ ಬಸ್‌ ಹತ್ತಿದ ನಂತರ ಈ ಘಟನೆ ನಡೆದಿದೆ. ಶಿರಸಿ ಪಂಡಿತ ಸರ್ಕಾರಿ ಆಸ್ಪತ್ರೆ ಬಳಿ ಬಸ್‌ನಲ್ಲಿ ಸಣ್ಣ ಜಗಳ ನಡೆದಿದೆ. ಈ ವೇಳೆ ಗಂಗಾಧರ ಅವರ ಮೇಲೆ ಪ್ರೀತಮ್ ಡಿಸೋಜಾ ಚಾಕುವಿನಿಂದ ದಾಳಿ ಮಾಡಿದ್ದಾನೆ.
ಕೊಲೆಯಾದ ಗಂಗಾಧರ ಶಿವಮೊಗ್ಗ ಜಿಲ್ಲೆಯ ಸಾಗರದವರು ಎಂದು ಹೇಳಲಾಗಿದೆ. ಇವರು 6 ತಿಂಗಳ ಹಿಂದೆ ಶಿರಸಿಯ ಅಚ್ಚನಳ್ಳಿ ಮೂಲದ ಯುವತಿ ಜೊತೆ ವಿವಾಹವಾಗಿದ್ದರು. ಅವರು ಕಾರ್ಯಕ್ರಮದ ನಿಮಿತ್ತ ಶಿರಸಿ ಅಚ್ಚನಳ್ಳಿಯಲ್ಲಿರುವ ಮಾವನ ಮನೆಗೆ ಪತ್ನಿ ಜೊತೆ ಆಗಮಿಸಿದ್ದರು. ಶನಿವಾರ ರಾತ್ರಿ ವಾಪಸ್ ಬೆಂಗಳೂರಿಗೆ ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement