ವಕ್ಫ್ ತಿದ್ದುಪಡಿ ಮಸೂದೆ 2025 : ಮುಸ್ಲಿಂ ಸಮುದಾಯದಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಅಲಿಘರ್: ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ 2025 (Waqf (Amendment) Bill) ಅಂಗೀಕಾರವಾದ ನಂತರ, ದಾರಾ ಶಿಕೋಹ್ ಪ್ರತಿಷ್ಠಾನದ ಕಾರ್ಯಕರ್ತರು ಮತ್ತು ಆಲಿಘರ್‌ನ ಮುಸ್ಲಿಮರು ಸಿಹಿತಿಂಡಿಗಳನ್ನು ವಿತರಿಸಿ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ.
ಈ ವೇಳೆ ಮಾತನಾಡಿದ ದಾರಾ ಶಿಕೋಹ್ ಪ್ರತಿಷ್ಠಾನದ ಅಧ್ಯಕ್ಷ ಮೊಹಮ್ಮದ್ ಅಮೀರ್ ರಶೀದ್ ಅವರು, ಈ ಮಸೂದೆಯು ‘ಬಡ ಮತ್ತು ಸಮಸ್ತ’ ಮುಸ್ಲಿಮರ ಅಭಿವೃದ್ಧಿಗೆ ಪ್ರಯೋಜನಕಾರಿ ಎಂದು ಹೇಳಿದರು.
‘ವಕ್ಫ್ (ತಿದ್ದುಪಡಿ) ಮಸೂದೆ 2025 ರಾಜ್ಯಸಭೆಯಲ್ಲಿ ಅಂಗೀಕಾರವಾಗಿದೆ, ಬಡ ಮತ್ತು ಪಸ್ಮಾಂಡ ಮುಸ್ಲಿಮರು ತುಂಬಾ ಸಂತೋಷವಾಗಿದ್ದಾರೆ. ವಕ್ಫ್ (ತಿದ್ದುಪಡಿ) ಮಸೂದೆ 2025 ಹೊಸ ಭರವಸೆಯನ್ನು ತಂದಿದೆ. ನಾವು ಪಟಾಕಿಗಳನ್ನು ಸಿಡಿಸಿದ್ದೇವೆ, ಮೇಣದಬತ್ತಿಗಳನ್ನು ಬೆಳಗಿಸಿದ್ದೇವೆ ಮತ್ತು ಸಿಹಿತಿಂಡಿಗಳನ್ನು ವಿತರಿಸಿದ್ದೇವೆ. ಈ ವಕ್ಫ್ (ತಿದ್ದುಪಡಿ) ಮಸೂದೆ ಬಡ ಮುಸ್ಲಿಮರ ಅಭಿವೃದ್ಧಿಗೆ ಹೊಸ ಬಾಗಿಲುಗಳನ್ನು ತೆರೆಯುತ್ತದೆ’ ಎಂದು ವಿಶ್ವಾಸವಿದೆ ಎಂದು ತಿಳಿಸಿದರು.

ಮಸೂದೆಯನ್ನು ವಿರೋಧಿಸುತ್ತಿರುವವರನ್ನು “ಹುಸಿ ಜಾತ್ಯತೀತರು” ಟೀಕಿಸಿದ ಅವರು, ಮುಸ್ಲಿಮರನ್ನು “ಮೋಸಗೊಳಿಸಲು” ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು. ಅವರು ಮುಸ್ಲಿಂ ಸಮುದಾಯವನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಹುಸಿ ಜಾತ್ಯತೀತ ಮೌಲಾನಾಗಳು ಮುಸ್ಲಿಮರನ್ನು ಮೋಸಗೊಳಿಸುತ್ತಿದ್ದಾರೆ.ಮುಸ್ಲಿಮರು ತಮ್ಮ ವಾಸ್ತವತೆಯನ್ನು ಮತ್ತು ವಕ್ಫ್‌ನ ವಾಸ್ತವತೆಯನ್ನು ಅರಿಯಬೇಕು. ವಕ್ಫ್ ತಿದ್ದುಪಡಿ ಮಸೂದೆ ಮುಸ್ಲಿಮರ ಅಭಿವೃದ್ಧಿಗೆ ಬಾಗಿಲು ತೆರೆಯುತ್ತದೆ ಎಂಬ ವಿಶ್ವಾಸವಿದೆ ಎಂದು ರಶೀದ್ ಹೇಳಿದರು.
ಮಸೂದೆ ಅಂಗೀಕಾರದ ಬಳಿಕ ಸರ್ಕಾರವನ್ನು ಟೀಕಿಸಿರುವ ಕಾಂಗ್ರೆಸ್ ನಿಲುವಿನ ಬಗ್ಗೆಯೂ ರಶೀದ್ ಟೀಕಿಸಿ, ಅವರ ನಿಲುವು ನಕಾರಾತ್ಮಕವಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಕರ್ನಾಟಕ ನೂತನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ ಪ್ರಮಾಣ ವಚನ, 13 ಸಚಿವರಿಂದಲೂ ಪ್ರಮಾಣವಚನ ಸ್ವೀಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement