1.5 ಕೆಜಿ ಚಿನ್ನದ ಆಸೆಗಾಗಿ ಅಜ್ಜನಿಂದಲೇ 2 ವರ್ಷದ ಮೊಮ್ಮಗನ ಅಪಹರಣ…!

ರಾಯಸೇನ್: ಕಾಂಗ್ರೆಸ್ ಶಾಸಕ (congress MLA) ದೇವೇಂದ್ರ ಪಟೇಲ್ ( Devendra Patel) ಅವರ ಸೋದರಳಿಯ ಯೋಗೇಂದ್ರ ಪಟೇಲ್ ಅವರ ಎರಡು ವರ್ಷದ ಮಗುವಿನ ಅಪಹರಣ ಪ್ರಕರಣದಲ್ಲಿ ಅಜ್ಜ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.
ಮಗುವಿನ ಅಜ್ಜನೇ 1.5 ಕೆಜಿ ಚಿನ್ನದ ಆಸೆಗಾಗಿ ಎರಡು ವರ್ಷದ ಮೊಮ್ಮಗನನ್ನು ಅಪಹರಿಸಿದ್ದು ನಂತರ ಬೆಳಕಿಗೆ ಬಂದಿದೆ..!
ಶಾಸಕ ದೇವೇಂದ್ರ ಪಟೇಲ್ ಅವರ ಸೋದರಳಿಯ ಯೋಗೇಂದ್ರ ಪಟೇಲ್ ಅವರ ಪುತ್ರನಾಗಿರುವ ಮಗುವನ್ನು ಗುರುವಾರ ಬೆಳಿಗ್ಗೆ ರಾಯಸೇನ್ ಜಿಲ್ಲೆಯ ಬೇಗಮ್‌ಗಂಜ್ ತಹಸಿಲ್ ವ್ಯಾಪ್ತಿಯ ಪಲೋಹಾ ಗ್ರಾಮದಲ್ಲಿರುವ ಅವರ ಮನೆಯಿಂದ ಅಪಹರಿಸಲಾಯಿತು. ನಂತರ ಪೊಲೀಸರು ತೀವ್ರ ಹುಡುಕಾಟ ನಡೆಸಿದ ಬಳಿಕ ತಡರಾತ್ರಿ ಸುಮಾರು 200 ಕಿ.ಮೀ ದೂರದಲ್ಲಿರುವ ಚಿಂದ್ವಾರ ಜಿಲ್ಲೆಯ ತಮಿಯಾ ಪಟ್ಟಣದಿಂದ ಪೊಲೀಸರು ಬಾಲಕನನ್ನು ರಕ್ಷಿಸಿದರು.

ರಾಯಸೇನ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪಂಕಜ್ ಪಾಂಡೆ ಅವರು, ಅಪಹರಣದ ಪ್ರಮುಖ ಆರೋಪಿ ಅರವಿಂದ ಪಟೇಲ್ ಮಗುವಿನ ತಂದೆಯ ಅಜ್ಜ, ಚಿನ್ನ ಸುಲಿಗೆ ಮಾಡುವ ಸಲುವಾಗಿ ಈ ಅಪಹರಣ ನಡೆದಿದೆ ಎಂದು ಹೇಳಿದ್ದಾರೆ.
“ಮಗುವಿನ ಪತ್ತೆಗಾಗಿ ನಾವು 11 ಪೊಲೀಸ್ ತಂಡಗಳನ್ನು ರಚಿಸಿದ್ದೆವು ಮತ್ತು ಸುಳಿವುಗಳ ಆಧಾರದ ಮೇಲೆ, ಅಪಹರಿಸಿದ ಹುಡುಗನನ್ನು ಚಿಂದ್ವಾರ ಜಿಲ್ಲೆಯ ತಮಿಯಾದಲ್ಲಿ ಅರವಿಂದ ಪಟೇಲ್ ಅವರ ಸ್ನೇಹಿತನ ಮನೆಯಲ್ಲಿ ಪತ್ತೆ ಮಾಡಿದೆವು” ಎಂದು ಪಾಂಡೆ ಹೇಳಿದರು.
ರಕ್ಷಿಸಿದ ನಂತರ, ಮಗುವನ್ನು ಆತನ ಕುಟುಂಬ ಸದಸ್ಯರೊಂದಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು. ಪೊಲೀಸ್ ಅಧಿಕಾರಿಯ ಪ್ರಕಾರ, ಅಪಹರಣವನ್ನು ಅರವಿಂದ ಪಟೇಲ್ ಮತ್ತು ಅವರ ಸಂಬಂಧಿ ರಾಕೇಶ ಪಟೇಲ್ ನಿಖರವಾಗಿ ಯೋಜಿಸಿದ್ದರು ಮತ್ತು ಮೂರನೇ ಸಹಚರನ ಸಹಾಯದಿಂದ ಇದನ್ನು ಕಾರ್ಯಗತಗೊಳಿಸಲಾಗಿತ್ತು. ಮೂವರು ಮಗುವಿನ ಬಿಡುಗಡೆ ಮಾಡಲು ಮಗುವಿನ ಕುಟುಂಬದಿಂದ 1.5 ಕೆಜಿ ಚಿನ್ನವನ್ನು ನೀಡುವಂತೆ ಕೇಳಿದ್ದರು.

ಪ್ರಮುಖ ಸುದ್ದಿ :-   ಹಾನಿಯಾದ ತೂಗು ಸೇತುವೆ ಮೇಲೆ ಭೋರ್ಗರೆವ ನದಿ ದಾಟಲು ಹುಚ್ಚು ಸಾಹಸ ಮಾಡಿದ ವ್ಯಕ್ತಿ : ಮೈ ಜುಂ ಎನ್ನುವ ದೃಶ್ಯದ ವೀಡಿಯೊ ವೈರಲ್‌

ಅಪಹರಣದಲ್ಲಿ ಆರೋಪಿಗಳು ಬಳಸಿದ್ದ ವ್ಯಾನ್ ಮತ್ತು ಮೋಟಾರ್‌ಬೈಕ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಮೂವರನ್ನೂ ವಿಚಾರಣೆ ನಡೆಸಲಾಗುತ್ತಿದೆ.
ಗುರುವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಗು ತನ್ನ ಮನೆಯಿಂದ ಕಣ್ಮರೆಯಾಗಿತ್ತು ಮತ್ತು ಪೊಲೀಸರು ತಕ್ಷಣ ಅದನ್ನು ಅಪಹರಣ ಪ್ರಕರಣವೆಂದು ಪರಿಗಣಿಸಿ, ಮಗು ಮತ್ತು ಆತನ ಅಪಹರಣಕಾರರನ್ನು ಪತ್ತೆಹಚ್ಚಲು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ನಿಫರ್ ಡಾಗ್‌ಗಳು ಮತ್ತು ಡ್ರೋನ್‌ಗಳನ್ನು ಬಳಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಕಾಂಗ್ರೆಸ್ ಶಾಸಕ ದೇವೇಂದ್ರ ಪಟೇಲ್ ಮಧ್ಯಪ್ರದೇಶದ ರೈಸೆನ್ ಜಿಲ್ಲೆಯ ಸಿಲ್ವಾನಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement