ಬೆಂಗಳೂರು: ಬೆಂಗಳೂರಿನಲ್ಲಿ ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಭಾನುವಾರ ಬಂಧಿಸಲಾಗಿದೆ. ಚಾಲಕ ಲೋಕೇಶ ಎಂಬವರಿಗೆ ಚಪ್ಪಲಿಯಿಂದ ಹೊಡೆಯುವವೀಡಿಯೊ ವೈರಲ್ ಆದ ನಂತರ ಪಂಖುರಿ ಮಿಶ್ರಾ (28) ಎಂಬ ಮಹಿಳೆಯನ್ನು ಬಂಧಿಸಲಾಯಿತು.
ಈಗ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬೆಳ್ಳಂದೂರು ನಿವಾಸಿ ಪಂಖುರಿ ತನ್ನ ಪತಿಯೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಶನಿವಾರ ಬೆಳ್ಳಂದೂರು ವೃತ್ತದಲ್ಲಿ ಈ ಘಟನೆ ನಡೆದಿದೆ. ಲೋಕೇಶ ಆಟೋ ತಮ್ಮ ಬೈಕ್ಗೆ ಟಚ್ ಮಾಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ, . ಆಟೋ ಚಾಲಕ ಲೋಕೇಶ ಎಂಬುವರಿಗೆ ಚಪ್ಪಲಿಯಲ್ಲಿ ಹೊಡೆದಿದ್ದರು. ಆದರೆ ಈ ಆರೋಪವನ್ನು ಚಾಲಕ ನಿರಾಕರಿಸಿದ್ದಾರೆ
ಈ ಕೃತ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನಾಕ್ರೋಶ ವ್ಯಕ್ತವಾಗಿತ್ತು. ಪೊಲೀಸರು, ಲೋಕೇಶ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದರು.
ವೀಡಿಯೊ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಲಾಯಿತು. ಬಳಿಕ ಅವರಿಗೆ ಮತ್ತೆ ಈ ರೀತಿಯ ದುರ್ವರ್ತನೆ ತೋರಿದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿ ಠಾಣಾ ಜಾಮೀನು ನೀಡಿ ಬಿಡುಗಡೆಗೊಳಿಸಲಾಯಿತು.
ಜಗಳದ ಸಮಯದಲ್ಲಿ ಲೋಕೇಶ ಘಟನೆಯನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದಾಗ ಆತನ ಮೇಲೆ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾಳೆ. “ಬನೇಗಾ ವೀಡಿಯೋ? ಚಲ್.. ಬನಾ ವೀಡಿಯೊ (ನೀನು ವೀಡಿಯೊ ಮಾಡುತ್ತೀಯಾ? ಹೋಗಿ ವೀಡಿಯೊ ಮಾಡು),” ಎಂದು ಮಹಿಳೆ ಚಾಲಕನಿಗೆ ಹಿಂದಿಯಲ್ಲಿ ಹೇಳುವುದನ್ನು ಕೇಳಬಹುದು, ಮಹಿಳೆ ಪದೇ ಪದೇ ತನ್ನ ಚಪ್ಪಲಿಯಿಂದ ಚಾಲಕನಿಗೆ ಥಳಿಸುವುದು ವೀಡಿಯೊದಲ್ಲಿ ಕಂಡುಬಂದಿದೆ.
ನಂತರ ಮಹಿಳೆ ಯಾರಿಗೋ ಕರೆ ಮಾಡಿ, ಚಾಲಕ “ಅನುಚಿತವಾಗಿ ವರ್ತಿಸುತ್ತಿದ್ದಾನೆ” ಎಂದು ಹೇಳುತ್ತಿರುವುದು ಕಂಡುಬಂದಿದೆ.
“ಮೊದಲು ಅವನು ನನ್ನ ಕಾಲಿನ ಆಟೋ ಹತ್ತಿಸಿದ್ದಾನೆ, ಈಗ ವೀಡಿಯೊ ರೆಕಾರ್ಡ್ ಮಾಡುತ್ತಿದ್ದಾನೆ” ಎಂದು ಅವಳು ಫೋನ್ ನಲ್ಲಿ ಹೇಳುತ್ತಿರುವುದು ಕೇಳುತ್ತದೆ. ಜಗಳದ ಸಮಯದಲ್ಲಿ ಆಕೆಯ ಪತಿ ದ್ವಿಚಕ್ರ ವಾಹನದಲ್ಲಿ ಕುಳಿತು ಘಟನೆಯನ್ನು ರೆಕಾರ್ಡ್ ಮಾಡುತ್ತಿರುವುದು ಕಂಡುಬಂದಿದೆ.
ಬೆಂಗಳೂರಿನ ರಿಕ್ಷಾ ಚಾಲಕರೊಬ್ಬರ ಮೇಲೆ ದರ್ಬಾರ್ ನಡೆಸಲು ಹೋಗಿ ಮಹಿಳೆ ತಾನೇ ಕ್ಷಮೆ ಕೇಳುವ ಪರಿಸ್ಥಿತಿ ತಂದುಕೊಂಡಿದ್ದಾಳೆ. ಆಟೋ ಡ್ರೈವರ್ (Auto driver) ಜೊತೆ ಕಿರಿಕ್ ಮಾಡಿಕೊಂಡ ಬಿಹಾರದ ಮಹಿಳೆಯೊಬ್ಬಳು, ಚಪ್ಪಲಿಯಿಂದ ಡ್ರೈವರ್ಗೆ ಹೊಡೆದಿದ್ದಳು. ಇಂದು ಆತನ ಕಾಲಿಗೆ ಬಿದ್ದಿದ್ದಾಳೆ. ನಾನೇನೂ ಮಾಡಿಲ್ಲ, ತಪ್ಪು ನನ್ನದಲ್ಲ ಎಂದು ಹಿಂದಿಯಲ್ಲಿ ದಬಾಯಿಸಿದ್ದ ಆಕೆ ಈಗ ತಪ್ಪಾಯ್ತು ಎಂದು ಕ್ಷಮೆ ಕೇಳಿದ್ದಾಳೆ.
ಮಹಿಳೆ ಸ್ಥಳೀಯ ಭಾಷೆಯಾದ ಕನ್ನಡದ ಬದಲು ಹಿಂದಿಯಲ್ಲಿ ವಾದಿಸುತ್ತಿದ್ದಂತೆ ತಾನು ರೆಕಾರ್ಡ್ ಮಾಡಲು ಪ್ರಾರಂಭಿಸಿದೆ ಎಂದು ಲೋಕೇಶ ಹೇಳಿದ್ದಾರೆ. ಘಟನೆಯ ನಂತರ, ದಂಪತಿ ಆಟೋ ಚಾಲಕನಿಗೆ ಕ್ಷಮೆಯಾಚಿಸುತ್ತಾ ಆತನ ಪಾದಗಳಿಗೆ ನಮಸ್ಕರಿಸುತ್ತಿರುವುದು ಕಂಡುಬಂದಿದೆ.
ಈ ನಡುವೆ ಠಾಣೆಯಲ್ಲಿ ಹೇಳಿಕೆ ನೀಡಿರುವ ಮಹಿಳೆ, ನಾನು ಗರ್ಭಿಣಿ ಆಗಿದ್ದು, ಆಸ್ಪತ್ರೆಗೆ ಹೋಗಿ ಬರುತ್ತಿದ್ದೆ. ಈ ವೇಳೆ ಬೈಕಿಗೆ ಹಿಂದಿನಿಂದ ಆಟೋ ಡಿಕ್ಕಿ ಹೊಡೆದಿತ್ತು ಎಂದು ಹೇಳಿಕೆ ನೀಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಆಟೋ ಡ್ರೈವರೇ ನನ್ನನ್ನು ಬೈದು ಹಲ್ಲೆಗೆ ಯತ್ನಿಸಿದ್ದ. ಈ ವೇಳೆ ನಾನು ಕೂಡ ಕೋಪಗೊಂಡು ಚಪ್ಪಲಿಯಿಂದ ಹಲ್ಲೆ ಮಾಡಿದೆ. ಕೋಪದ ಭರದಲ್ಲಿ ತಾಳ್ಮೆ ಕಳೆದುಕೊಂಡು ಹೀಗೆ ಮಾಡಿದೆ ಎಂಬುದಾಗಿ ಮಹಿಳೆ ಒಪ್ಪಿಕೊಂಡಿದ್ದಾರೆ. ನಂತರ ಎಲ್ಲರ ಮುಂದೆ ಆಟೋ ಚಾಲಕನ ಕಾಲಿಗೆ ಬಿದ್ದು, ಕ್ಷಮೆ ಕೇಳಿದ ಮಹಿಳೆ ಮತ್ತು ಅವರ ಪತಿ, “ನಮ್ಮಿಂದ ತಪ್ಪಾಗಿದೆ” ಎಂದು ಹೇಳಿದ್ದಾರೆ.
ಬಿಹಾರದ ನಿವಾಸಿ ಪಂಖುರಿ ಕೂಡ ಕನ್ನಡ ಜನರ ಬಗ್ಗೆ ತನಗೆ ಯಾವುದೇ ದ್ವೇಷವಿಲ್ಲ ಎಂದು ಹೇಳಿದರು. “ನಾವು ಬೆಂಗಳೂರನ್ನು ಪ್ರೀತಿಸುತ್ತೇವೆ, ನಾವು ಸಂಸ್ಕೃತಿಯನ್ನು ಪ್ರೀತಿಸುತ್ತೇವೆ ಮತ್ತು ನಾವು ಜನರನ್ನು ಪ್ರೀತಿಸುತ್ತೇವೆ” ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ