ಪವಾಡ | ಏರ್ ಇಂಡಿಯಾ ವಿಮಾನ ಪತನ ; ಅವಶೇಷದ ಅಡಿಯಿಂದ ಜೀವಂತ ಹೊರಬಂದ ವ್ಯಕ್ತಿ…! ನಡೆದುಹೋದ ವೀಡಿಯೊ ವೈರಲ್‌

ಅಹಮದಾಬಾದ್‌ : ಅಹಮದಾಬಾದ್‌ನಲ್ಲಿ 200 ಕ್ಕೂ ಹೆಚ್ಚು ಜನರ ಪ್ರಾಣವನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ವಿಮಾನ AI171 ಅಪಘಾತದ ಅವಶೇಷಗಳಡಿಯಲ್ಲಿ ಒಬ್ಬ ವ್ಯಕ್ತಿ ಜೀವಂತವಾಗಿ ಪತ್ತೆಯಾಗಿದ್ದಾರೆ…! ಬದುಕುಳಿದ ಏಕೈಕ ವ್ಯಕ್ತಿ, 40 ವರ್ಷದ ಬಾರತೀಯ ಮೂಲದ ಬ್ರಿಟಿಷ್ ಪ್ರಜೆ ವಿಶ್ವಾಸಕುಮಾರ ರಮೇಶ ಅವರನ್ನು ಅವರನ್ನು ವಿಮಾನದ 11A ಸೀಟಿನಿಂದ ರಕ್ಷಿಸಲಾಗಿದೆ ಮತ್ತು ಪ್ರಸ್ತುತ ಅಸರ್ವಾದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ತಿಳಿಸಿದ್ದಾರೆ. ವಿಶ್ವಾಸಕುಮಾರ ರಮೇಶ ಅವರು, ತುರ್ತು ನಿರ್ಗಮನ ದ್ವಾರದ ಹಿಂದೆ ಇರುವ 11A ಸೀಟಿನಲ್ಲಿ ಕುಳಿತಿದ್ದರು.
ಗುಜರಾತ್‌ನಲ್ಲಿರುವ ತಮ್ಮ ಕುಟುಂಬದವರನ್ನು ಭೇಟಿ ಮಾಡಿ ಲಂಡನ್‌ಗೆ ಹಿಂತಿರುಗುತ್ತಿದ್ದ ವಿಶ್ವಾಸಕುಮಾರ ರಮೇಶ, ತಮ್ಮ ಆಸ್ಪತ್ರೆಯ ಹಾಸಿಗೆಯಿಂದಲೇ ವಿಮಾನ ಅಪಘಾತದ ಭಯಾನಕತೆಯನ್ನು ನೆನಪಿಸಿಕೊಂಡರು.
“ನನ್ನ ಸುತ್ತಲೂ ಶವಗಳಿದ್ದವು, ನನ್ನ ಸುತ್ತಲೂ ವಿಮಾನದ ತುಣುಕುಗಳಿದ್ದವು. ಯಾರೋ ನನ್ನನ್ನು ಹಿಡಿದು ಆಂಬ್ಯುಲೆನ್ಸ್‌ನಲ್ಲಿ ಇರಿಸಿದರು” ಎಂದು ಅವರು ನ್ಯೂಸ್ 18 ಗೆ ತಿಳಿಸಿದರು. ಹಿಂದೂಸ್ತಾನ್ ಅವರ ಎದೆ, ಕಣ್ಣುಗಳು ಮತ್ತು ಪಾದಗಳಿಗೆ ಗಾಯಗಳು” ಉಂಟಾಗಿವೆ.

“ಪೊಲೀಸರು 11A ಸೀಟಿನಲ್ಲಿ ಬದುಕುಳಿದ ಒಬ್ಬ ವ್ಯಕ್ತಿಯನ್ನು ಪತ್ತೆ ಮಾಡಿದರು. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆಯನ್ನು ನಾವು ಇನ್ನೂ ದೃಢೀಕರಿಸಲು ಸಾಧ್ಯವಿಲ್ಲ, ಏಕೆಂದರೆ ಅಪಘಾತವು ವಸತಿ ಪ್ರದೇಶದಲ್ಲಿ ಸಂಭವಿಸಿದೆ ಮತ್ತು ಆ ಸಂಖ್ಯೆ ಹೆಚ್ಚಾಗಬಹುದು” ಎಂದು ಅವರು ಹೇಳಿದರು.
ವಿಶ್ವಾಸಕುಮಾರ್ ರಮೇಶ ತಮ್ಮ ಸಹೋದರ ಅಜಯಕುಮಾರ ರಮೇಶ (45) ಅವರೊಂದಿಗೆ ಪ್ರಯಾಣಿಸುತ್ತಿದ್ದರು, ಅವರು ಏನಾಗಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ. ಟೇಕ್ ಆಫ್ ಆದ ನಂತರದ ಭಯಾನಕ ಘಟನೆಯ ಬಗ್ಗೆ ಮಾತನಾಡಿದ ಅವರು, “30 ಸೆಕೆಂಡುಗಳಲ್ಲಿ, ದೊಡ್ಡ ಶಬ್ದವಾಯಿತು ಮತ್ತು ನಂತರ ವಿಮಾನ ಅಪಘಾತಕ್ಕೀಡಾಯಿತು. ಇದೆಲ್ಲವೂ ಬಹಳ ವೇಗವಾಗಿ ಸಂಭವಿಸಿತು” ಎಂದು ಹೇಳಿದ್ದಾರೆ.

ಅಹಮದಾಬಾದ್ ವಿಮಾನ ಅಪಘಾತ
242 ಜನರನ್ನು ಹೊತ್ತೊಯ್ಯುತ್ತಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ಏರ್ ಇಂಡಿಯಾ ಫ್ಲೈಟ್ AI171, ಲಂಡನ್ ಗ್ಯಾಟ್ವಿಕ್‌ಗೆ ಹೋಗಲು ಅಹಮದಾಬಾದಿನ ಸರ್ದಾರ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಅಪಘಾತಕ್ಕೀಡಾಯಿತು. ದೀರ್ಘ ಪ್ರಯಾಣಕ್ಕಾಗಿ ಸಂಪೂರ್ಣವಾಗಿ ಇಂಧನ ತುಂಬಿದ ಜೆಟ್, ಹತ್ತಿರದ ವೈದ್ಯಕೀಯ ಕಾಲೇಜಿಗೆ ಸೇರಿದ ವೈದ್ಯರ ಹಾಸ್ಟೆಲ್‌ಗೆ ಡಿಕ್ಕಿ ಹೊಡೆಯಿತು, ಅಲ್ಲಿದ್ದ ಕೆಲವರ ಸಾವಿಗೂ ಕಾರಣವಾಯಿತು. ವಿಮಾನ ಪತನಗೊಂಡ ನಂತರ ಬೃಹತ್ ಬೆಂಕಿಯ ಉಂಡೆ ಮೇಲಕ್ಕೆದ್ದಿತು. ದಟ್ಟ ಹೊಗೆಯ ನಡುವೆಯೇ ತುರ್ತು ಸೇವೆಯ ತಂಡಗಳು ಸ್ಥಳಕ್ಕೆ ಧಾವಿಸಿ ಬಂದವು ಮತ್ತು 50 ಕ್ಕೂ ಹೆಚ್ಚು ಗಾಯಗೊಂಡವರನ್ನು ಆಸ್ಪತ್ರೆಗಳಲ್ಲಿ ದಾಖಲಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಈ ಘಟನೆಯನ್ನು “ಪದಗಳಿಗೆ ಮೀರಿದ ಹೃದಯವಿದ್ರಾವಕ” ಎಂದು ಬಣ್ಣಿಸಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಈಗಾಗಲೇ ಚಾಲನೆಯಲ್ಲಿವೆ ಎಂದು ದೃಢಪಡಿಸಿದರು. ನಾಗರಿಕ ವಿಮಾನಯಾನ ಮತ್ತು ತುರ್ತು ಅಧಿಕಾರಿಗಳೊಂದಿಗೆ ತಾವು ನಿಕಟ ಸಂಪರ್ಕದಲ್ಲಿರುವುದಾಗಿ ಅವರು ಹೇಳಿದರು.
ಪ್ರಧಾನಿ ಮೋದಿ ಅವರು ಮೃತರ ಕುಟುಂಬಗಳಿಗೆ ಸರ್ಕಾರದ ಸಂಪೂರ್ಣ ಬೆಂಬಲ ಭರವಸೆ ನೀಡಿದರು, ಅಪಘಾತದ ಕಾರಣದ ಬಗ್ಗೆ ಸಂಪೂರ್ಣ ತನಿಖೆಗೆ ಕರೆ ನೀಡಿದರು.

ಪ್ರಮುಖ ಸುದ್ದಿ :-   ಅಹಮದಾಬಾದ್‌ ವಿಮಾನ ಅಪಘಾತ : ಪತನಗೊಂಡ ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement