ಕಾರವಾರ : ಯುದ್ಧದಲ್ಲಿ ಮಡಿದ ರಷ್ಯಾ ಯೋಧ ಸರ್ಗೇಯ ಗಾಬ್ಲೇವ್ ಅವರ ಕೊನೆಯ ಆಸೆಯಂತೆ ಆನ್ಲೈನ್ ಮೂಲಕ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಹಿಂದೂ ಪದ್ಧತಿಯಂತೆ ಅವರ ಅಂತಿಮ ಸಂಸ್ಕಾರ ನಡೆಸಲಾಯಿತು ಎಂದು ವರದಿಯಾಗಿದೆ.
ದೂರದ ರಷ್ಯಾದ ಸರ್ಗೇಯ ಗಾಬ್ಲೇವ್ ಎಂಬವರು ಯುದ್ಧದಲ್ಲಿ ಮಡಿದ ನಂತರ ಅವರ ಕೊನೆಯ ಆಸೆಯಂತೆ ಅವರ ಅಂತ್ಯಕ್ರಿಯೆಯನ್ನು ಹಿಂದೂ ಪದ್ಧತಿಯಂತೆ ಗೋಕರ್ಣದಲ್ಲಿ ಆನ್ಲೈನ್ ಮೂಲಕ ನೆರವೇರಿಸಲಾಯಿತು ಎಂದು ವರದಿ ತಿಳಿಸಿದೆ.
ರಷ್ಯಾ -ಉಕ್ರೇನ್ ಯುದ್ಧದಲ್ಲಿ ಮಡಿದ ರಷ್ಯಾದ ಮೃತ ಯೋಧ ಸೆರ್ಗಯ್ ಗ್ರಾಬ್ಲವ್ ಎಂಬವರು ಕಳೆದ 18 ವರ್ಷದಿಂದ ಗೋಕರ್ಣಕ್ಕೆ ಬರುತಿದ್ದರು, ಹಿಂದೂ ಧರ್ಮದ ಕಡೆ ಅಪಾರ ಒಲವಿದ್ದ ಅವರು ಅದನ್ನು ಅನುಸರಣೆ ಮಾಡುತ್ತಿದ್ದರು. ಅವರು ವಾರಣಾಸಿಯಲ್ಲಿ ದೀಕ್ಷೆಯನ್ನೂ ಪಡೆದಿದ್ದರು.
ಯಾವಾಗ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಘೋಷಣೆಯಾಯಿತೋ ಅವರು ಈ ಯುದ್ಧದಲ್ಲಿ ಪಾಲ್ಲೊಂಡಿದ್ದರು. ಕರ್ತವ್ಯಕ್ಕೆ ತೆರಳಿದ್ದ ಅವರು ಏಪ್ರಿಲ್ 28 ರಂದು ಯುದ್ಧದಲ್ಲಿ ಹುತಾತ್ಮರಾಗಿದ್ದರು. ಆದರೆ ಅವರ ಕೊನೆಯ ಆಸೆಯಂತೆ ಅವರ ಕುಟುಂಬದವರು ಹಿಂದೂ ಪದ್ಧತಿಯಂತೆ ಅವರ ಅಂತ್ಯಕ್ರಿಯೆನ್ನು ವೀಡಿಯೊ ಕಾಲ್ ಮೂಲಕ ನೆರವೇರಿಸಿದ್ದಾರೆ. ಇದಕ್ಕೆ ರಷ್ಯಾದಲ್ಲಿ ಅವರ ಕುಟುಂಬದವರು ಕ್ರಿಯಾ ಕರ್ಮ ನೆರವೇರಿಸಿದರು. ಹಲವರು ಇದಕ್ಕೆ ಸಾಕ್ಷಿಯಾದರು.
ಸೆರ್ಗಾಯ್ ಗ್ರಾಬ್ಲವ್ ಸಂಬಂಧಿ ಎಲಿನಾ ಅವರ ಅಣತಿಯಂತೆ ಮೃತ ರಷ್ಯಾದ ಯೋಧನ ಅಪರ ಕಾರ್ಯವನ್ನು ಪುರೋಹಿತರಾದ ವೇದಮೂರ್ತಿ ಪ್ರಶಾಂತ ಹಿರೇಗಂಗೆ ನೇತೃತ್ವದಲ್ಲಿ ನಾರಾಯಣಬಲಿ ನಡೆಸಿ, ಪಿಂಡ ಬಿಟ್ಟು ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸಲಾಯಿತು. ಈ ಕಾರ್ಯವನ್ನು ರಷ್ಯಾದಿಂದ ಅವರ ಕುಟುಂಬದವರು ವೀಕ್ಷಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ