
ದೀಪಾವಳಿಯ ಸಂದರ್ಭದಲ್ಲಿ ಎದ್ದು ಕಾಣುವ ಯುವಕನೊಬ್ಬನ ಅಪಾಯಕಾರಿ ಪ್ರಯತ್ನದ ವೀಡಿಯೊವೊಂದು ವೈರಲ್ ಆಗಿದೆ. ಹಾಗೂ ಸಾಕಷ್ಟು ಅಸಮಾಧಾನಕ್ಕೂ ಕಾರಣವಾಗಿದೆ.
ಪಟಾಕಿ ಹೊಡೆಯುವುದನ್ನು ಸಾಮಾನ್ಯವಾಗಿ ಸಂಭ್ರಮಿಸಲುವ ಬದಲು, ತಾನು ಧೈರ್ಯಶಾಲಿ ಎಂದು ತೋರಿಸಲು ಆತ ತನ್ನ ದೇಹಕ್ಕೆ ಪಟಾಕಿಗಳನ್ನು ಕಟ್ಟಿಕೊಂಡು ಸಾಹಸ ಪ್ರದರ್ಶಿಸಿದ್ದಾನೆ. ಈತ ತನ್ನ ಕೈಗಳನ್ನು ತಲೆಯ ಮೇಲೆ ತಂದು ಕಟ್ಟಿಕೊಂಡಿದ್ದಾನೆ, ಕಾಲುಗಳಿಗೆ ಒಂದು ಉದ್ದದ ಪಟಾಕಿ ಸರವನ್ನು ಕಟ್ಟಿಕೊಂಡಿದ್ದಾನೆ. ಪಟಾಕಿಗಳನ್ನು ಹಚ್ಚಿದಾಗ, ಈತನ ದೇಹಕ್ಕೆ ಕಟ್ಟಿಕೊಂಡಿದ್ದಂತೆ ಪಟಾಕಿಗಳು ಒಂದರ ನಂತರ ಒಂದು ಸ್ಫೋಟಗೊಂಡವು. ಪಟಾಕಿ ಸಿಡಿಯುವಾಗ ಈ ವ್ಯಕ್ತಿಯ ಶರೀರಕ್ಕೆ ಬೆಂಕುಯ ಕಿಡಿ ತಗುಲಿ ಶೇಕ್ ಆಗುತ್ತಿದ್ದುದು ಕಂಡುಬಂದಿದೆ. ಇದರಿಂದಾಗಿ ಈ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಹೇಳಲಾಗಿದ್ದು, ಇದು ಇನ್ನಷ್ಟು ದೊಡ್ಡ ಅಪಾಯಕ್ಕೆ ಕಾರಣವಾಗಬಹುದಾಗಿತ್ತು.

ಮೂಲತಃ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಲಾದ ಈ ವೀಡಿಯೊ ಬಗ್ಗೆ “ಯುವಕರಲ್ಲಿ ರೀಲ್ಸ್ ಮಾಡುವ ಹುಚ್ಚು ಎಷ್ಟು ಬೆಳೆದಿದೆಯೆಂದರೆ, ಒಂದು ಪರಿಪೂರ್ಣ ರೀಲ್ಗಾಗಿ ಅವರು ಓಡುತ್ತಿರುವ ರೈಲುಗಳು, ಎತ್ತರದ ಕಟ್ಟಡಗಳು, ವೇಗದ ಕಾರುಗಳು ಹೀಗೆ ಯಾವುದೇ ಅಪಾಯಕ್ಕೂ ಸಿಲುಕಲು ಸಿದ್ಧರಾಗಿದ್ದಾರೆ. ಪ್ರಸಿದ್ಧಿಯ ಸ್ಪರ್ಧೆಯು ನಿಜವಾಗಿಯೂ ಜೀವಕ್ಕಿಂತ ಮುಖ್ಯವಾಗಿದೆಯೇ?” ಎಂಬ ಈ ವೀಡಿಯೊಕ್ಕೆ ಶೀರ್ಷಿಕೆ ನೀಡಲಾಗಿದೆ.
ಈ ವೀಡಿಯೊ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನವನ್ನು ತಕ್ಷಣ ಸೆಳೆಯಿತು. ಈ ಸಾಹಸವನ್ನು ‘ಅತ್ಯಂತ ಅಪಾಯಕಾರಿ’ ಎಂದು ಕರೆದು ಹಲವರು ಟೀಕಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಟೀಕೆ
ಒಂದು ಸಣ್ಣ ತಪ್ಪಾದರೂ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತಿತ್ತು ಎಂದು ಅನೇಕರು ಹೇಳಿದ್ದಾರೆ. ಕೇವಲ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆಯಲು ಈ ಅಪಾಯಕಾರಿ ಕೃತ್ಯಕ್ಕೆ ಯತ್ನಿಸಿದ್ದಕ್ಕಾಗಿ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಒಬ್ಬ ಬಳಕೆದಾರ “ಈ ರೀತಿ ಧೀರನಾಗಲು ಎಂದಿಗೂ ಪ್ರಯತ್ನಿಸಬೇಡಿ” ಎಂದು ಸಲಹೆ ನೀಡಿದ್ದಾರೆ. “ಇದು ರೀಲ್ಗಾಗಿ ಅಲ್ಲ, ಒಂದು ಹೊತ್ತಿನ ಊಟಕ್ಕಾಗಿ ಮಾಡುತ್ತಿರುವುದು” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬ ವ್ಯಕ್ತಿ, “ಅವನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ; ಅವನು ಕೇವಲ ಸ್ವಲ್ಪ ಹಣ ಸಂಪಾದಿಸಲು ನಿಮ್ಮೆಲ್ಲರಿಗೂ ಮನರಂಜನೆ ನೀಡುತ್ತಿದ್ದಾನೆ” ಎಂದು ಹೇಳಿದ್ದಾರೆ. “ಇದು ರೀಲ್ ಅಲ್ಲ, ಸರ್ಕಸ್ನ ಕೆಲಸ. ಅವರು ಕೇವಲ ಸ್ವಲ್ಪ ಹಣ ಗಳಿಸಲು ಇದೆಲ್ಲಾ ಮಾಡುತ್ತಾರೆ, ಅವರಿಗೆ 1000 ಅಥವಾ 2000 ರೂ. ನೀಡಿ, ಇದನ್ನು ಮಾಡಬೇಡಿ ಎಂದು ಹೇಳಿ” ಎಂದು ಇನ್ನೊಬ್ಬರು ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ದೀಪಾವಳಿ ದುರಂತ
ದೀಪಾವಳಿಯು ಆಚರಣೆಯ ಸಮಯ, ಆದರೆ ಮಧ್ಯಪ್ರದೇಶದಲ್ಲಿ, ಸ್ಥಳೀಯವಾಗಿ ತಯಾರಿಸಿದ ಕಾರ್ಬೈಡ್ ಗನ್ಗಳಿಂದ ಹಲವಾರು ಮಕ್ಕಳು ಗಂಭೀರ ಕಣ್ಣಿನ ಗಾಯಗಳಿಗೆ ಒಳಗಾದ ನಂತರ ಹಬ್ಬವು ದುರಂತಕ್ಕೆ ತಿರುಗಿದೆ. ಈ ಅಪಾಯಕಾರಿ ಸಾಧನಗಳು ರಾಜ್ಯದಾದ್ಯಂತ ಮಕ್ಕಳಿಗೆ ಹಲವೆಡೆ ಹಾನಿಅಪಘಾತಗಳು ಮತ್ತು ಆಸ್ಪತ್ರೆಗೆ ದಾಖಲಾತಿಗಳಿಗೆ ಕಾರಣವಾಗಿವೆ. ಇಂಡಿಯಾ ಟುಡೇ ವರದಿ ಮಾಡಿದಂತೆ, ಕಳೆದ ಕೆಲವು ದಿನಗಳಲ್ಲಿ ಹೆಚ್ಚಿನ ಮಕ್ಕಳು ಗಂಭೀರ ಕಣ್ಣಿನ ಸಮಸ್ಯೆಗಳೊಂದಿಗೆ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಮತ್ತು ಈಗಾಗಲೇ 14 ಮಕ್ಕಳು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಸರ್ಕಾರಿ ನಿಷೇಧದ ಹೊರತಾಗಿಯೂ ಸ್ಥಳೀಯ ಅಂಗಡಿಗಳಲ್ಲಿ ಈ ಬಂದೂಕುಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದ್ದ ವಿದಿಶಾ ಜಿಲ್ಲೆ ಹೆಚ್ಚು ಹಾನಿಗೊಳಗಾದ ಪ್ರದೇಶವಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ